ಮಂಗಳೂರು: ಮುಸ್ಲಿಂ ಭಕ್ತನಿಗೆ ಒಲಿದ ಕೊರಗಜ್ಜ; ನಿತ್ಯ ಸ್ವಾಮಿಯ ಪೂಜೆ
ಮಂಗಳೂರು, ಏಪ್ರಿಲ್ 7: ದಕ್ಷಿಣ ಕನ್ನಡ ಜಿಲ್ಲೆಯ ಜನ ಶ್ರದ್ಧಾ ಭಕ್ತಿಯಿಂದ ನಂಬುವ ಕೊರಗಜ್ಜ ದೈವದ ಶಕ್ತಿ ಅತೀತವಾಗಿದ್ದು, ಕೊರಗಜ್ಜನನ್ನು ನಂಬುವ ಜನರ ಇಷ್ಟಾರ್ಥ ಸಿದ್ಧಿ ಮಾಡಿ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ದೂರ ಮಾಡುತ್ತಾನೆ ಎನ್ನುವ ನಂಬಿಕೆ ಕರಾವಳಿ ಜನರಲ್ಲಿದೆ.
ಜಾತಿ, ಮತ, ಬೇಧ ಮೀರಿ ಕರಾವಳಿಯಲ್ಲಿ ಜನ ಕೊರಗಜ್ಜನನ್ನು ನಂಬುತ್ತಾರೆ ಅನ್ನೋದಕ್ಕೆ ಈ ಭಕ್ತನ ನಿಷ್ಕಲ್ಮಶ ಭಕ್ತಿಯೇ ನಿದರ್ಶನವಾಗಿದೆ.
ಮಂಗಳೂರಿನ ಮುಲ್ಕಿಯ ಬಳ್ಕುಂಜೆ ಗ್ರಾಮದ 65ರ ಹರೆಯ ಪಿ.ಖಾಸಿಂ ಸಾಹೇಬ್ ಕೊರಗಜ್ಜನ ಪ್ರಿಯ ಭಕ್ತನಾಗಿ ಸೇವೆ ಮಾಡುತ್ತಿದ್ದಾರೆ. ಬಳ್ಕುಂಜೆ ಕವತ್ತಾರು ಎಂಬಲ್ಲಿ 19 ವರ್ಷಗಳಿಂದ ಕೊರಗಜ್ಜನ ಆರಾಧನೆ ಮಾಡುತ್ತಿರುವ ಖಾಸಿಂ, ತಾವೊಬ್ಬ ಮುಸ್ಲಿಂ ಆದರೂ ಕೊರಗಜ್ಜನನ್ನು ಆರಾಧಿಸುತ್ತಾರೆ.

ಮೂಲತಃ ಕೇರಳದ ಪಾಲಕ್ಕಾಡ್ ಮೂಲದವರಾಗಿರುವ ಖಾಸಿಂ ಸಾಹೇಬ್, 35 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದರು. ಮರದ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಮುಲ್ಕಿಯಲ್ಲೇ ಮದುವೆಯಾಗಿ ಐವರು ಮಕ್ಕಳ ಜೊತೆ ಸರ್ಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದಾರೆ.
ಆದರೆ ಕಾಲ ಕ್ರಮೇಣ ಖಾಸಿಂ ಸಾಹೇಬ್ ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸಿದವು. ಮಗ ತೀವ್ರ ಅನಾರೋಗ್ಯಕ್ಕೀಡಾದರೆ, ಹೆಣ್ಣು ಮಕ್ಕಳಿಗೆ ಮದುವೆ ನೆಂಟಸ್ಥಿಕೆಗಳು ಕೂಡಿ ಬರದೆ ತುಂಬಾ ತೊಂದರೆಗೊಳಗಾದರು. ಅಲ್ಲದೆ ಖಾಸಿಂ ಸಾಹೇಬ್ ರವರ ಕಾಲು ಊನವಾಗಿ ನಡೆಯಲಾರದ ಪರಿಸ್ಥಿತಿಯೂ ಬಂತು.

ತನ್ನ ಕುಟುಂಬದಲ್ಲಾಗುತ್ತಿರುವ ಅಸಾಧಾರಣ ಸಮಸ್ಯೆಗಳ ಬಗ್ಗೆ ಕೇರಳದ ಜ್ಯೋತಿಷ್ಯ ಶಾಸ್ತ್ರ ಮೂಲಕ ಪರಿಹಾರ ಕೇಳಿದಾಗ, ಖಾಸಿಂ ಸಾಹೇಬ್ ನೆಲೆಸಿರುವ ಜಾಗ ಅದು ಕೊರಗಜ್ಜನನ ನೆಲೆ ಅಂತಾ ಗೊತ್ತಾಯಿತು. ಕೊರಗಜ್ಜನಿಗೆ ಸೇರಿದ ಜಾಗ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಕೊರಗಜ್ಜನನ್ನು ನಂಬಬೇಕೆಂಬ ಪರಿಹಾರ ಕಂಡುಬಂದಿತು.
ಬೇರೆ ದಾರಿ ಇಲ್ಲದೆ ಖಾಸಿಂ ಸಾಹೇಬರು ಕೊರಗಜ್ಜನನ್ನು ನಂಬಲು ಆರಂಭಿಸಿದರು. ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡುವ ಖಾಸಿಂ ಸಾಹೇಬರು, ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಾರೆ.

ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಖಾಸಿಂ ಸಾಹೇಬರು ಆರಾಧಿಸುತ್ತಾರೆ. ಖಾಸಿಂರ ದೈವ ಸ್ಥಾನದಲ್ಲಿ ಕೊರಗಜ್ಜನಿಗೆ ನಿತ್ಯ ದೀಪ ಸೇವೆ, ಸಂಕ್ರಾಂತಿಯ ವಿಶೇಷ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲಾ ಧರ್ಮದ ಭಕ್ತರು ಜಾತಿ-ಭೇದವಿಲ್ಲದೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ












Click it and Unblock the Notifications