ಉಪ್ಪಿನಂಗಡಿಯ ಫಾರೂಕ್ ಆಟೋಗೂ ಸೈ, ಉಚಿತ ಸೇವೆಗೂ ಸೈ
ಉಪ್ಪಿನಂಗಡಿ ಬೆದ್ರೋಡಿ ನಿವಾಸಿ ಉಮರ್ ಫಾರೂಕ್ ತನ್ನ ಸುತ್ತಮುತ್ತಲಿನ ಜನರ ಪಾಲಿಗೆ ಅಪತಾಂದ್ಬವ. ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡುತ್ತಾರೆ.
ಉಪ್ಪಿನಂಗಡಿ, ಡಿಸೆಂಬರ್ 18: ರಿಕ್ಷಾ ಚಾಲಕರ ಬಗ್ಗೆ ಹೆಚ್ಚಿನವರಿಗೆ ಅಸಡ್ಡೆಯಿದೆ. ಆದರೆ ಕರಾವಳಿಯ ಆಟೋ ಚಾಲಕನೊಬ್ಬ ಚಾಲನೆಗೂ ಸೈ, ಸಮಾಜ ಸೇವೆ ಮಾಡೋಕೇ ಸೈ ಎಂದು ತುರ್ತುವೇಳೆ ಉಚಿತ ಸೇವೆಗೆ ಮುಂದಾಗಿದ್ದಾರೆ.
ಹೌದು, ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲೊಬ್ಬರು ರಿಕ್ಷಾ ಚಾಲಕರೊಬ್ಬರಿದ್ದಾರೆ. ಅವರೇ ಉಮರ್ ಫಾರೂಕ್. ಇವರಿಗೆ ರಿಕ್ಷಾ ಚಾಲನೆ ದುಡಿಮೆ. ಬಾಡಿಗೆಗೆ ಹೋಗಿ ಸಿಗುವ ಅಲ್ಪಸ್ಪಲ್ಪ ಹಣದಲ್ಲಿ ಜೀವನ ಸಾಗಿಸುತ್ತಾರೆ. ದುರಾಸೆ ಪಡದ ಉಮರ್ , ತುರ್ತು ಪರಿಸ್ಥಿತಿಯಲ್ಲಿ ದೇವರ ಹಾಗೇ ಬಂದು ಜನರ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.
ಉಪ್ಪಿನಂಗಡಿ ಬೆದ್ರೋಡಿ ನಿವಾಸಿ ಉಮರ್ ಫಾರೂಕ್ ತನ್ನ ಸುತ್ತಮುತ್ತಲಿನ ಜನರ ಪಾಲಿಗೆ ಅಪತಾಂದ್ಬವ. ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡುತ್ತಾರೆ.

ಸುಮಾರು ಒಂದೂವರೆ ವರ್ಷದಿಂದ ತಮ್ಮ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿನ ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಐದು ಕಿ.ಮೀ ವರೆಗೆ ಉಚಿತ ಆಟೋ ಸೇವೆ ನೀಡುತ್ತಿರುವ. ಇನ್ನು ಇವರನ್ನು ಪ್ರೀತಿಯಿಂದ ಎಲ್ಲರು ಫಾರೂಕ್ ಜಿಂದಗಿ ಇಂದು ಕರೆಯುತ್ತಾರೆ
ಇವರು ತಮ್ಮ ಸಂಸಾರದ ಬಂಡಿಯ ಜೊತೆಗೆ ಒಂದಷ್ಟು ಸಮಯವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಜೊತೆಗೆ ಇವರ o+ ರಕ್ತ ಬೇಕೆಂದರೆ ಸಹ ರಕ್ತದಾನ ಮಾಡುತ್ತಾರೆ. ಪತ್ನಿ ಹೆರಿಗೆ ಸಮಯದಲ್ಲಿ ಅನುಭವಿಸಿದ ನೋವು, ಸಂಕಟವನ್ನ ನೋಡಿದ ಇವರು ಇನ್ನು ಮುಂದೆ ಯಾವ ಮಹಿಳೆ ಇಂತಹ ಸಂಕಟ ಅನುಭವಿಸಬಾರದು ಎಂದು ನಿರ್ಧರಿಸಿದ ಉಮರ್ , ತುರ್ತು ಪರಿಸ್ಥಿತಿಯಲ್ಲಿ ಉಚಿತ ಆಟೋ ಸೇವೆ ನೀಡಲು ತೀರ್ಮಾನಿಸಿದರು.

ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಉಮರ್ ಫಾರೂಕ್, ಜನರ ಸೇವೆಯೇ ಜನಾರ್ಧನ ಸೇವೆ. ನಾನು ಏನೂ ದೊಡ್ಡ ಸಾಧನೆ ಮಾಡಿಲ್ಲ. ಆದರೆ ಸ್ವಲ್ಪ ಅಳಿಲು ಸೇವೆ ಮಾಡುವ ನಿಟ್ಟಿನಲ್ಲಿ ಈ ಸೇವೆ ಮಾಡೋಕೇ ನಿರ್ಧರಿಸಿದೆ ಅಂದರು.
ಒಟ್ಟಿನಲ್ಲಿ ಗರ್ಭಿಣಿಯರಿಗೆ ಉಚಿತ ಸೇವೆ ಕೊಡುವ ಮೂಲಕ ಜನ ಮನ ಗೆದ್ದಿರುವ ಫಾರೂಕ್ ರವರನ್ನು ನಿಜಕ್ಕೂ ಮೆಚ್ಚಲೇಬೇಕು. ಪ್ರಯಾಣಿಕರಿಂದ ಮನಸೋ ಇಚ್ಚೆಯಿಂದ ಹಣ್ಣ ವಸೂಲಿ ಮಾಡುವ ಕೆಲ ಆಟೋ ಚಾಲಕರ ಮಧ್ಯೆ ಫಾರೂಕ್ ವಿಶೇಷ ವ್ಯಕ್ತಿಯಾಗಿ ಗುರುತಿಸುತ್ತಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications