ಲೇಖನ ಸಮಾಜವನ್ನು ಕೆರಳಿಸದಿರಲಿ- ನಾಗತಿಹಳ್ಳಿ
ಮಂಗಳೂರು, ಮೇ. 27: ಲೇಖಕ ತಾನು ಬರೆದ ಮಾತನ್ನು ಸಮರ್ಥಿಸುತ್ತಾ ಇದ್ದರೆ ಆತ ವಕಾಲತನ್ನೇ ಮಾಡಬೇಕಾಗುತ್ತದೆ. ಲೇಖಕ ಬದುಕುತ್ತಿರುವ ಸಮಾಜದ ಒಳಗಿನ ತಪ್ಪುಒಪ್ಪನ್ನು ಬರೆಯಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಹೇಳಿದರು.
ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್, ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ಸಂಘ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಸಂಸ್ಕೃತಿ ಉತ್ಸವ ಮತ್ತು ಡಾ.ಡಿ.ಕೆ. ಚೌಟ75ರ ಸಂಭ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಮಾಜವನ್ನು ಕೆರಳಿಸುವುದಕ್ಕಾಗಿ ಲೇಖಕ ಬರೆಯಬಾರದು. ಸ್ಥಿತಿಯನ್ನು ಹೇಳುವುದಷ್ಟೇ ಲೇಖಕನ ಪಾತ್ರ. ಡಾ.ಡಿ.ಕೆ.ಚೌಟ ಅವರು ಹಳ್ಳಿಯ ಮುಖಂಡನ ಸ್ವಗತದಂತೆ ಕಾಣಿಸುತ್ತಿದ್ದು, ಸಾಂಸ್ಕೃತಿಕ ಮತ್ತು ವೈಯಕ್ತಿಕ ಕ್ಷೇತ್ರದಲ್ಲಿ ಅವರ ಸಾಧನೆ ಶ್ಲಾಘನೀಯ ಎಂದು ಹೇಳಿದರು.

ಇಂದು ನೆನಪಿನ ಕೋಶ ನಾಶವಾಗುತ್ತಿದೆ. ವಿದೇಶದಿಂದ ಹಣ ತಂದು ಸಾಲು ಸಾಲು ದೇವಾಲಯಗಳನ್ನು ಕಟ್ಟುವುದಕ್ಕಿಂತ ಅರಿವಿನ ಪ್ರಸಾರವಾಗುವ ಗ್ರಂಥಾಲಯಗಳನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು.
ಕೃಷಿ ಸಂಸ್ಕೃತಿ ಹೃದಯದಿಂದಲೇ ಬರಲಿ: ಕೃಷಿ ಸಂಸ್ಕೃತಿ ನಮ್ಮ ಹೃದಯದಿಂದಲೇ ಬರಬೇಕಿದೆ. ಇಂದು ಕೃಷಿಯ ಅಧಃಪಥನ ಆಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಅಮೆರಿಕದ ಮುಂದೆ ಇಲ್ಲಿನ ಯುವಜನತೆ ಮಂಡಿಯೂರಿ ಅನ್ನ ಕೊಡಿ ಎಂದು ಕೇಳುವ ಪರಿಸ್ಥಿತಿ ಬರಬಹುದು ಎಂದು ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ಕೆ.ಚಿನ್ನಪ್ಪ ಗೌಡ ಅವರು ನಡೆಸಿದ ಸಂವಾದದಲ್ಲಿ ಚೌಟ ಅವರು ಹೇಳಿದರು.
ಲಂಗು ಲಗಾಮಿಲ್ಲದೆ ಭೂಮಿಯ ಪರಿವರ್ತನೆ ಆಗುತ್ತಿದೆ. ಇದಕ್ಕೆ ಸರ್ಕಾರದ ಕೃಪಾಕಟಾಕ್ಷವೂ ಇದೆ. ಐಟಿ ಕ್ಷೇತ್ರದವರೂ ಹಳ್ಳಿಗಳಲ್ಲಿ ಬಂದು ನೆಲೆಸಬೇಕು ಎಂದರು.
ಕಾರ್ಯಕ್ರಮದ ಬಳಿಕ 'ಪಚ್ಚೆ ತೆನೆ' ಸಾಕ್ಷ್ಯಚಿತ್ರ ಮತ್ತು 'ಪಿಲಿಪತ್ತಿ ಗಡಸ್' ನಾಟಕ ಪ್ರದರ್ಶನ ನಡೆಯಿತು. ನಂಜುಂಡಸ್ವಾಮಿ ತೊಟ್ಟವಾಡಿ, ಡಾ.ಆರ್.ನಾಗಪ್ಪ ಗೌಡ, ಡಾ.ಬಿ.ಎ.ವಿವೇಕ ರೈ, ಸತ್ಯನಾರಾಯಣ ಮಲ್ಲಿಪಟ್ಣ ಮತ್ತಿತರರು ಉಸ್ಥಿತರಿದ್ದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications