ಮಾಸ್ಕ್ ಧರಿಸಲು ಹೇಳಿದ ಪಿಡಿಓ ಮೇಲೆ ಹಲ್ಲೆ; ನಾಲ್ವರ ಬಂಧನ
ಮಂಗಳೂರು, ಮೇ 27; ಮಾಸ್ಕ್ ಧರಿಸಲು ಹೇಳಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 25ರಂದು ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತ್ ಆವರಣದಲ್ಲಿ ಹಲ್ಲೆ ನಡೆದಿತ್ತು.
ಲಾಕ್ಡೌನ್ ಸಂದರ್ಭದಲ್ಲಿ ಯುವಕರ ಗುಂಪು ಮಾಸ್ಕ್ ಹಾಕದೇ ಹರಟುತ್ತಿದ್ದರು. ಸ್ಥಳಕ್ಕೆ ಬಂದ ಪಿಡಿಓ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದರು ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದರು.
11 ವರ್ಷವಾದರೂ ಕಣ್ಣಂಚಿನಿಂದ ದೂರವಾಗದ ಮಂಗಳೂರು ವಿಮಾನ ದುರಂತ
ಆದರೆ ಪಿಡಿಓ ಮಾತಿಗೂ ಬೆಲೆ ಕೊಡದ ಯುವಕರ ತಂಡಕ್ಕೆ ಎಚ್ಚರಿಕೆ ನೀಡಿದದ್ದರು. ದಾಖಲೆಗಾಗಿ ಯುವಕರ ತಂಡದ ಫೋಟೋ ಮತ್ತು ವಿಡಿಯೋ ಮಾಡಿದ್ದರು. ಆಗ ಯುವಕರು ಪಿಡಿಓ ಮೇಲೆ ಹಲ್ಲೆ ಮಾಡಿತ್ತು.
ಮಂಗಳೂರು: ಮಾಸ್ಕ್ ಧರಿಸದೆ ವಿವಾದ ಸೃಷ್ಟಿಸಿಕೊಂಡ ವೈದ್ಯ ಹೇಳೋದೇನು?
ಪಿಡಿಓ ಮೇಲೆ ಹಲ್ಲೆ ಮಾಡಿದ ತಂಡ ಬಳಿಕ ತಲೆಮರೆಸಿಕೊಂಡಿದ್ದರು. ಗುರುವಾರ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್ ಇದಾಯತುಲ್ಲಾ, ಅಹ್ಮದ್ ಬಸೀರ್, ಅಬುಬಕ್ಕರ್ ಸಿದ್ದಿಕ್, ಅಬ್ದುಲ್ ಸಿದ್ದಿಕ್ ಬಂಧಿತರು.
ಮಾಸ್ಕ್ ಧರಿಸುವ ಬಗ್ಗೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ಆರೋಗ್ಯ ಸಚಿವಾಲಯ
ಬಂಧಿತರಲ್ಲಿ ಮಹಮ್ಮದ್ ಇದಾಯತುಲ್ಲಾ ಮತ್ತು ಅಹ್ಮದ್ ಬಸೀರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 4ಕ್ಕೂ ಹೆಚ್ಚು ಪ್ರಕರಣಗಳಿವೆ. ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.