ಮೂಡುಬಿದಿರೆಯಲ್ಲಿ ಕುಡಿಯುವ ನೀರಿಗೆ ವಿಷವಿಕ್ಕಿ ಮೀನು ಬೇಟೆ
ಎಂದ್ರಟ್ಟೆ ಕೆರೆಯ ನೀರನ್ನು ವಾಲ್ಪಾಡಿ, ಶಿರ್ತಾಡಿ ಹಾಗೂ ದರೆಗುಡ್ಡೆ ಗ್ರಾಮದ ಜನ ಬಳಸುತ್ತಿದ್ದಾರೆ. ಹತ್ತಿರದ ಸುಮಾರು 25 ಕೃಷಿ ಕುಟುಂಬಗಳು ಎಂದ್ರೆಟ್ಟೆ ಕೆರೆ ನೀರೇ ಆಧಾರ. ಇದೀಗ ಇದಕ್ಕೇ ವಿಷವಿಕ್ಕಿ ಕುಡಿಯಲು ನೀರಿಲ್ಲದಂತಾಗಿದೆ.
ಮಂಗಳೂರು, ಮೇ 18: ಮೂಡುಬಿದಿರೆ ವಾಲ್ಪಾಡಿ ಗ್ರಾಮದ ಎಂದ್ರಟ್ಟೆಯಲ್ಲಿ ಕಿಡಿಗೇಡಿಗಳು ಕುಡಿಯುವ ನೀರಿಗೆ ವಿಷವಿಕ್ಕಿ ಮೀನು ಬೇಟೆಯಾಡಿದ್ದಾರೆ. ಗೃಹ ಬಳಕೆಗೆ ಉಪಯೋಗಿಸುತ್ತಿದ್ದ ನೀರಿಗೆ ವಿಷವಿಕ್ಕಿದ್ದು ಗ್ರಾಮಸ್ಥರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಎಂದ್ರಟ್ಟೆ ಕೆರೆಯ ನೀರನ್ನು ವಾಲ್ಪಾಡಿ, ಶಿರ್ತಾಡಿ ಹಾಗೂ ದರೆಗುಡ್ಡೆ ಗ್ರಾಮದ ಜನರು ಬಳಸುತ್ತಿದ್ದಾರೆ. ಹತ್ತಿರದ ಸುಮಾರು 25 ಕೃಷಿ ಕುಟುಂಬಗಳು ಪ್ರಕೃತಿದತ್ತ ಎಂದ್ರೆಟ್ಟೆ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ. ವರ್ಷಪೂರ್ತಿ ಈ ನೀರನ್ನು ಇಲ್ಲಿಯ ಜನ ಕುಡಿಯಲು, ಗೃಹ ಬಳಕೆಗೆ, ಜಾನುವಾರುಗಳಿಗೆ ಬಳಕೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

ಜತೆಗೆ ಹೇಕಲ್ ರಕ್ಷಿತಾರಣ್ಯದ ತಪ್ಪಲಿನಲ್ಲಿ ಎಂದ್ರಟ್ಟೆ ಕೆರೆಯಿದ್ದು, ಕಾಡುಪ್ರಾಣಿಗಳು ಕೂಡ ನೀರು ಕುಡಿಯಲು ಈ ಕೆರೆಗೆ ಬಂದು ಹೋಗುತ್ತಿವೆ.
ಇದೇ ಎಂದ್ರಟ್ಟೆ ಕೆರೆಗೆ ಇಲ್ಲಿನ ಪಕ್ಕದ ದರೆಗುಡ್ಡೆಯ ಕೆಲವು ಮಾಂಸಪ್ರಿಯರು ಈಚೆಗೆ ಮೀನು ಬೇಟೆಗೆಂದು ಬಂದಿದ್ದರು. ಇದು ಊರಿನವರಿಗೆ ಗೊತ್ತಾಗಿ ತಡೆಯೊಡ್ಡಿದ್ದರು. ಮೂರು ಬಾರಿ ಮೀನು ಬೇಟೆಗೆ ಬಂದು ವಿಫಲರಾದ ಜನ ನಾಲ್ಕನೇ ಬಾರಿ ಅಂದರೆ ರವಿವಾರ ಮಧ್ಯಾಹ್ನ ಯಾರು ಇಲ್ಲದ ಸಮಯ ನೋಡಿ ಬಂದಿದ್ದಾರೆ.
ಹೀಗೆ ಎಂದ್ರಟ್ಟೆ ಕೆರರೆಗೆ ದರೆಗುಡ್ಡೆ ಗ್ರಾಮದ ನೂರಾರು ಜನ ಬಂದು ಕೀಟನಾಶಕ ಹಾಕಿ ಮೀನು ಬೇಟೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಮೀನು ಬೇಟೆಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೇಟೆಗಾರರನ್ನು ಅಲ್ಲಿಂದ ಓಡಿಸಿದ್ದಾರೆ.
ಕಲುಷಿತಗೊಂಡ ಕೆರೆ ನೀರು:
ಮೀನಿನ ಆಸೆಗೆ ಕೆರೆಗೆ ಕೀಟನಾಶಕ ಹಾಕಿದ್ದರಿಂದ ಕೆರೆ ನೀರು ಕಲುಷಿತಗೊಂಡಿದೆ. ಈ ನೀರನ್ನು ಊರವರೂ ಉಪಯೋಗಿಸಿದಂತಾಗಿದೆ. ಇದೀಗ ಕುಡಿಯಲು ಸೇರಿದಂತೆ ದೈನಂದಿನ ಚಟುವಟಿಕೆಕೆರೆ ನೀರನ್ನು ಜನ ಉಪಯೋಗಿಸದಂತಾಗಿದೆ.
ಬಿರು ಬೇಸಿಗೆಯಲ್ಲಿ ಮಾಂಸಪ್ರಿಯರ ದುರಾಸೆಯಿಂದಾಗಿ ಎಂದ್ರಟ್ಟೆ ಪರಿಸರದ ಜನತೆಗೆ ಕುಡಿಯಲು ನೀರಿಲ್ಲದಂತಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications