ಕೊನೆಗೂ ಕುವೈಟ್ನಿಂದ ಮಂಗಳೂರಿಗೆ ಬಂದ ವಿಮಾನ
ಮಂಗಳೂರು, ಆಗಸ್ಟ್ 13 : ಕುವೈಟ್ನಲ್ಲಿ ಸಿಲುಕಿದ್ದ ಅನಿವಾಸಿ ಭಾರತೀಯರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಮೂರು ಬಾರಿ ವಿಮಾನ ಹಾರಾಟಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಅಂತಿಮವಾಗಿ ಗುರುವಾರ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
114 ಭಾರತೀಯರು ಕುವೈಟ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಗುರುವಾರ ಮುಂಜಾನೆ 2.30ರ ಸುಮಾರಿಗೆ ಕುವೈಟ್ ಏರ್ ವೇಸ್ ವಿಮಾನ ಮಂಗಳೂರಿನಲ್ಲಿ ಲ್ಯಾಂಡ್ ಆಗಿದೆ. 45 ದಿನಗಳ ಕಾಲ ಇದ್ದ ಆತಂಕ ದೂರವಾಗಿದೆ.
45 ದಿನಗಳ ಹಿಂದೆ ಅನಿವಾಸಿ ಭಾರತೀಯರು ಕುವೈಟ್ನಿಂದ ವಾಪಸ್ ಆಗಲು ವಿಮಾನ ಬುಕ್ ಮಾಡಿದ್ದರು. ಕುವೈಟ್ನ ಅಲ್-ರಶೀದ್ ಈ ವಿಮಾನ ವ್ಯವಸ್ಥೆ ಮಾಡಿತ್ತು. ಅಲ್ಲಿದ್ದ ಭಾರತೀಯರು ಮನೆ, ಫ್ಲ್ಯಾಟ್ ಎಲ್ಲಾ ಮಾರಿ ಭಾರತಕ್ಕೆ ವಾಪಸ್ ಆಗಲು ಸಿದ್ಧವಾಗಿದ್ದರು.
ಆದರೆ, ವಿಮಾನ ಭಾರತಕ್ಕೆ ಆಗಮಿಸಲು ಡಿಜಿಸಿಎ ಅನುಮತಿ ಸಿಗದ ಕಾರಣ ಎಲ್ಲರೂ ಅತಂತ್ರರಾಗಿದ್ದರು. ಪರಿಚಯಸ್ಥರು, ಗೆಳೆಯರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮೂರು ಬಾರಿ ಭಾರತಕ್ಕೆ ಬರಲು ವಿಮಾನ ಹಾರಾಟಕ್ಕೆ ಅವಕಾಶ ನಿರಾಕರಿಸಲಾಗಿತ್ತು.

3 ಬಾರಿ ಅನುಮತಿ ತಿರಸ್ಕಾರ
ಅಲ್ ರಶೀದ್ ಸಂಸ್ಥೆ ಮೂರು ಬಾರಿ ವಿಮಾನ ಹಾರಾಟಕ್ಕೆ ಸಲ್ಲಿಸಿದ್ದ ಅನುಮತಿಯನ್ನು ತಾಂತ್ರಿಕ ಕಾರಣಗಳಿಗಾಗಿ ಡಿಜಿಸಿಎ ತಿರಸ್ಕಾರ ಮಾಡಿತ್ತು. ನಾಲ್ಕನೇ ಬಾರಿ ಆಗಸ್ಟ್ 12ರಂದು ವಿಮಾನ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿತ್ತು.

ಕೆಲವು ತಾಂತ್ರಿಕ ತೊಂದರೆಗಳು
ಕುವೈಟ್ ಮತ್ತು ಭಾರತದ ನಡುವೆ 500 ಜನರನ್ನು ಕರೆದುಕೊಂಡು ಹೋಗಲು ಅನುಮತಿ ಇತ್ತು. ಆದರೆ, ಕೋಟಾ ಆಗಸ್ಟ್ 9ಕ್ಕೆ ಮುಗಿದಿತ್ತು. ಆದ್ದರಿಂದ, ಡಿಜಿಸಿಎ ವಿಮಾನದ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಕೊನೆಗೂ ಆರತಿ ಕೃಷ್ಣ ಅವರ ನೆರವಿನಿಂದ ಆಗಸ್ಟ್ 12ರಂದು ಸಂಜೆ ವಿಮಾನ ಹಾರಾಟಕ್ಕೆ ಭಾರತದಿಂದ ಅನುಮತಿ ಸಿಕ್ಕಿತ್ತು.

114 ಪ್ರಯಾಣಿಕರು ವಾಪಸ್
114 ಭಾರತೀಯರು ಬುಧವಾರ ರಾತ್ರಿ ಕುವೈಟ್ನಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲು ಡಿಜಿಸಿಎ ಅನುಮತಿ ನೀಡಿತ್ತು. ಗುರುವಾರ ಮುಂಜಾನೆ 2.30ರ ಸುಮಾರಿಗೆ ವಿಮಾನ ಮಂಗಳೂರಿಗೆ ಬಂದು ತಲುಪಿದೆ.

ಕೊರೊನಾ ಪರಿಣಾಮ
ಕೊರೊನಾ ವೈರಸ್ ಪರಿಣಾಮ ಕುವೈಟ್ನಲ್ಲಿ ಕೆಲಸ ಕಳೆದುಕೊಂಡಿದ್ದ, ಇದ್ದ ಕೆಲಸ, ಮನೆಯನ್ನು ಬಿಟ್ಟು 114 ಭಾರತೀಯರು ದೇಶಕ್ಕೆ ವಾಪಸ್ ಆಗಿದ್ದಾರೆ. ಸುಮಾರು 45 ದಿನಗಳ ಕಾಲ ವಿಮಾನ ಹಾರಾಟಕ್ಕೆ ಅವಕಾಶ ಸಿಗದೇ ಭಾರತೀಯರು ಪರದಾಡಬೇಕಾಯಿತು.
-
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ












Click it and Unblock the Notifications