ಮೈಸೂರಿಗೆ ಹೋಗೋದಾಗಿ ಹೇಳಿ ಐಸಿಸ್ ಸೇರಿದ ಕೇರಳದ 2 ಕುಟುಂಬಗಳು!
ಕೇರಳ, ಡಿಸೆಂಬರ್ 14: ಕೇರಳದಲ್ಲಿ ಮತ್ತೆ ಉಗ್ರ ಸಂಘಟನೆ ಐಸಿಸ್ ಸದ್ದು ಮಾಡಿದೆ. ಕೇರಳದ 2 ಕುಟುಂಬಗಳು ಉಗ್ರರ ನೆಲವಾದ ಸಿರಿಯಾಕ್ಕೆ ತೆರಳಿರುವ ಶಂಕೆ ವ್ಯಕ್ಯವಾಗಿದೆ. ಕೇರಳದ ಕಣ್ಣೂರಿನ 2 ಕುಟುಂಬದ 10 ಸದಸ್ಯರ ತಂಡ ನಾಪತ್ತೆಯಾಗಿದ್ದು, ದುಬೈ ಮೂಲಕ ಸಿರಿಯಾ ಅಥವಾ ಅಫ್ಘಾನಿಸ್ತಾನ್ ಗೆ ತೆರಳಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕಣ್ಣೂರು ಪೂತಪ್ಪಾರ ನಿವಾಸಿಗಳಾದ ಸಜ್ಜದ್, ಹಾಗು ಅನ್ವರ್ ಸೇರಿದಂತೆ ಇನ್ನೋರ್ವ ತಮ್ಮ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಸಜ್ಜದ್ ತನ್ನ ಪತ್ನಿ ಶಾಹಿನಾ , ಇವರ ಇಬ್ಬರು ಮಕ್ಕಳು. ಅನ್ವರ್ ಪತ್ನಿ ಅಫ್ಸಿಲಾ ,
ಮೂವರು ಮಕ್ಕಳು ಮತ್ತು ಕುರುವಾ ನಿವಾಸಿ ಟಿ ಪಿ ನಿಸಾಂ ನಾಪತ್ತೆಯಾಗಿದ್ದಾರೆ. ನವೆಂಬರ್ 19 ರಂದು ಇವರು ಮೈಸೂರಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದರು ಎಂದು ಹೇಳಲಾಗಿದೆ.

ಇವರು ವಾಪಾಸ್ ಆಗದ ಹಿನ್ನೆಲೆಯಲ್ಲಿ ಇವರ ಸಂಬಂಧಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಇವರು ದುಬೈ ತಲುಪಿ ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.
ಸಜ್ಜದ್ ಹಾಗು ಅನ್ವರ್ ಪಿ ಎಫ್ ಐ ಕಾರ್ಯಕರ್ತರಾಗಿದ್ದು, ಕೆಲವು ಪ್ರತಿಭಟನೆ ಹಾಗೂ ಧಾರ್ಮಿಕ ಹೋರಾಟಗಳಲ್ಲಿಯೂ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈಗಾಗಲೇ ಉಗ್ರ ಸಂಘಟನೆ ಸೇರಿರುವ ಕೆಲವರಿಂದ ಇವರು ಪ್ರಭಾವಿತರಾಗಿ ಅದೇ ಸಂಘಟನೆ ಸೇರಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಅನ್ವರ್ ಪತ್ನಿ ಅಫ್ಸಿಲಾ ಈ ಹಿಂದೆ ಐಸಿಸ್ ಸೇರಿ ಸಾವನ್ನಪ್ಪಿದ ಶಮೀರ್ ಎಂಬಾತನ ಪತ್ನಿ ಫೌಸಿಯಾಳ ಸಹೋದರಿಯಾಗಿದ್ದಾಳೆ. ಶಮೀರ್ನ ಇಬ್ಬರು ಮಕ್ಕಳಾದ ಸಲ್ಮಾನ್ ಮತ್ತು ಸಫ್ವಾನ್ ಐಸಿಸ್ ಯುದ್ಧಭೂಮಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಈ ಹಿಂದೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಲಭಿಸಿದ ಬಳಿಕ ಅನ್ವರ್ ಹಾಗು ಪತ್ನಿ ಅಫ್ಸಿಲಾ ಮತ್ತು ಕುಟುಂಬ ಐಸಿಸ್ ಸೇರಲು ನಿರ್ಧರಿಸಿದ್ದರು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications