ಮದುವೆಯಾಗಿ ವರ್ಷವಾಗಿಲ್ಲ, ಬೀದಿಗೆ ಬಿದ್ದ ಯುವತಿಯ ಬದುಕು
ಶಾದಿ ಡಾಟ್ ಕಾಮ್ ಮೂಲಕ ಮದುವೆಯಾದ ದೆಹಲಿ ಮತ್ತು ಮಂಗಳೂರಿನ ದಂಪತಿಗಳ ವೈವಾಹಿಕ ಜೀವನವೊಂದು ವರದಕ್ಷಿಣೆ ಪ್ರಕರಣದಿಂದಾಗಿ ಒಂದೇ ವರ್ಷಕ್ಕೆ ಮುರಿದು ಬಿದ್ದಿದೆ. ಯುವತಿ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.
ಮಂಗಳೂರು, ಏಪ್ರಿಲ್ 11: ಇವನಿಗೆ ವಯಸ್ಸು ಮೀರುತ್ತಿದ್ದರೂ ಇಲ್ಲೆಲ್ಲೋ ಮದುವೆಗೆ ಹೆಣ್ಣು ಸಿಗುತ್ತಿರಲಿಲ್ಲ. ಅವಳಿಗೋ ತಂದೆ ತಾಯಿ ಇಲ್ಲದೆ ಕಿರಿಯ ಸಹೋದರರೇ ನೋಡಿಕೊಳ್ಳಬೇಕಾದ ಸ್ಥಿತಿಯಲ್ಲಿ ಮದುವೆ ಆಗಿರಲಿಲ್ಲ. ಜೋಡಿ ಸಮ ಎನಿಸಿತ್ತು; ಮದುವೆಯೂ ಆಗಿತ್ತು. ಆದರೆ ಮದುವೆ ಹೆಚ್ಚು ದಿನ ಬಾಳಲಿಲ್ಲ. ಮದುವೆಯಾಗಿ ವರ್ಷಪೂರ್ತಿಯಾಗುವ ಮೊದಲೇ ಯುವತಿಯ ಬದುಕು ಬೀದಿಗೆ ಬಂದಿದೆ.
ಆಕೆಯ ಹೆಸರು ಪ್ರಭಾ ಬೊಹ್ರಾ ಮೂಲತಃ ದೆಹಲಿಯ ರಜಪೂತ ಸಮುದಾಯದವಳು. ತಂದೆ- ತಾಯಿ ಚಿಕ್ಕಂದಿನಲ್ಲೇ ಮೃತಪಟ್ಟಿದ್ದಾರೆ. ಇವಳೇ ಹಿರಿಯವಳು. ಹೀಗಾಗಿ ಕಿರಿಯ ಸಹೋದರರ ಆಶ್ರಯದಲ್ಲಿ ಇರಬೇಕಾದ ಪರಿಸ್ಥಿತಿ ಇವರದು. ಹೀಗೆ ಸಹೋದರರು ದುಡಿಯುವ ಹಂತಕ್ಕೆ ಬರುವಾಗ ಮದುವೆಯ ವಯಸ್ಸು ಮೀರಿತ್ತು. ಸ್ಥಳೀಯವಾಗಿ ವರರು ದಕ್ಕದಾದಾಗ ಶಾದಿ ಡಾಟ್ ಕಾಮ್ ನಲ್ಲಿ ಹುಡುಕುವ ಪ್ರಯತ್ನ ಕಿರಿಯ ಸಹೋದರ ಮಾಡಿದ್ದ. ಆಗ ಸಂಪರ್ಕಕ್ಕೆ ಬಂದವನೇ ಮಂಗಳೂರು ಚಿಲಿಂಬಿ ಆದರ್ಶ ನಗರದ ಮನೋಜ್ ನಾಯ್ಕ್ . ಶಾದಿ ಡಾಟ್ ಕಾಮ್ ನಲ್ಲಿ ಪ್ರಭಾಳ ಮಾಹಿತಿ ಪಡೆದ ಮನೋಜ್ ಆಕೆಯ ಸಹೋದರನಿಗೆ ಕರೆ ಮಾಡಿ ಮದುವೆ ಪ್ರಸ್ತಾಪ ಇಟ್ಟಿದ್ದ. ಸಹೋದರ ಮಹೇಂದ್ರ ಸಿಂಗ್ ಮಂಗಳೂರಿಗೆ ಬಂದು ಮನೋಜನ ಕುಟುಂಬದವರನ್ನು ಭೇಟಿಯಾಗಿದ್ದ. ನಾವು ಬ್ರಾಹ್ಮಣರು, ಮನೋಜ್ ಇಂಜಿನಿಯರ್ ಎಂದೆಲ್ಲಾ ಪರಿಚಯಿಸಲಾಗಿತ್ತು.[ಬಾವಿಯಲ್ಲಿ ವಿವಾಹಿತೆಯ ಶವ ಪತ್ತೆ, ಆತ್ಮಹತ್ಯೆ ಶಂಕೆ]

ಅವರಿಗೆ ಬೇಕಾದ ಕೆಲವು ಆತ್ಮೀಯರ ಪರಿಚಯವನ್ನು ಮಾಡಿಸಲಾಗಿತ್ತು. ಒಳ್ಳೆಯ ಕುಟುಂಬ ತನ್ನ ಸಹೋದರಿಗೆ ತಕ್ಕದಾದ ವರ ಎಂದು ನಿರ್ಧರಿಸಿದ ಮಹೇಂದ್ರ ಸಿಂಗ್ ಮಾತುಕತೆಗೆ ಮುಂದಾದರು. ಆರಂಭದಲ್ಲಿ ಮದುವೆಯ ಖರ್ಚು ಅರ್ಧ ಅರ್ಧ ನಿಭಾಯಿಸುವುದು ಎಂದು ಹೇಳಲಾಗಿತ್ತು. ವರ್ಷದ ಹಿಂದೆ ನಿಶ್ಚಿತಾರ್ಥವೂ ಆಯಿತು. ನಿಶ್ಚಿತಾರ್ಥವಾದಂತೆ ಮನೋಜನ ಮನೆಯವರ ಬೇಡಿಕೆಯ ಪಟ್ಟಿ ಬೆಳೆಯ ತೊಡಗಿತ್ತು. ಪೂರ್ತಿ ಖರ್ಚು ವಧುವಿನ ಮನೆಯವರೇ ನಿಭಾಯಿಸಬೇಕಾಗಿ ಬಂದಿತ್ತು. ಹಾಗೂ ಹೀಗೂ ಕಳೆದ ಜುಲೈ ನಲ್ಲಿ ಮಂಗಳೂರಿನಲ್ಲಿ ಮದುವೆ ಆಯಿತು.
ಮದುವೆಯಾದ ನಂತರದ ದಿನಗಳದು. ಪ್ರಭಾಳ ಜೀವನ ಕಷ್ಟದಿಂದ ಮುಳುಗಿ ಹೋಗಿತ್ತು. ಗಂಡ, ಅತ್ತೆ, ನಾದಿನಿ ಕಾಟ ಆರಂಭವಾಗಿತ್ತು. ದಿನಕ್ಕೊಂದು ಬೇಡಿಕೆ ಗಂಡನ ಮನೆಯವರಿಂದ ಬರಲಾರಂಭಿಸಿತು. ಹೀಗಿರುವಾಗ ಇದ್ದಕ್ಕಿದ್ದಂತೆ ಪ್ರಭಾಳ ಆರೋಗ್ಯ ಹದಗೆಟ್ಟಿತ್ತು. ಕಳೆದ ಆಗಸ್ಟ್ ನಲ್ಲಿ ಸಹೋದರ ಮಹೇಂದ್ರ ಸಿಂಗ್ ಚಿಕಿತ್ಸೆಗಾಗಿ ಊರಿಗೆ ಕರೆದುಕೊಂಡು ಹೋಗಿದ್ದ. ಅದರ ಬಳಿಕ ಮೂರೂ ತಿಂಗಳು ಕಳೆದರೂ ಮನೋಜ್ ನಾಯ್ಕ್ ಪತ್ನಿಯನ್ನು ಕರೆದುಕೊಂಡು ಬರಲು ದೆಹಲಿಗೆ ಹೋಗಲೇ ಇಲ್ಲ. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಅನಿವಾರ್ಯವಾಗಿ ಆಕೆಯ ಸಹೋದರನೇ ಪ್ರಭಾಳನ್ನು ಕರೆದುಕೊಂಡು ಬಂದಿದ್ದ. ನನ್ನ ಸಹೋದರಿ ಈಗ ನಿಮ್ಮ ಜವಾಬ್ದಾರಿ ಆಕೆಯ ಬೇಕು ಬೇಡಗಳನ್ನು ನೀವೇ ಪೂರೈಸಬೇಕು ನಮಗೇನು ಕೇಳಬೇಡಿ ಎಂದು ಹೇಳಿ ಹೋಗಿದ್ದ.[ಮಂಗಳೂರು: ಹಾಸ್ಟೆಲ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]
ಮಹಿಳೆಯರಿಗೆ ಅವರದ್ದೇ ಆದ ಮೂಲಭೂತ ಅವಶ್ಯಕತೆಗಳು ಇರುತ್ತವೆ. ಇವುಗಳನ್ನು ಕೂಡಾ ಮನೋಜ್ ಪೂರೈಸಲು ಸಿದ್ಧವಾಗಲಿಲ್ಲ. ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಕ್ಕೆ ಏಪ್ರಿಲ್ 2 ರಂದು ಪತ್ನಿ ಮೇಲೆ ಮನೋಜ್ ಹಲ್ಲೆ ನಡೆಸಿದ್ದ. ಜೊತೆಗೆ ಅತ್ತೆಯು ಸೇರಿ ಪ್ರಜ್ಞೆ ತಪ್ಪುವವರೆಗೆ ಹೊಡೆದಿದ್ದರು. ಪ್ರಜ್ಞೆ ಬಂದ ಬಳಿಕ ಅವರಿಂದ ತಪ್ಪಿಸಿಕೊಂಡು ಹೊರಗೋಡಿ ಬಂದ ಪ್ರಭಾ ಅಕ್ಕಪಕ್ಕದವರ ನೆರವು ಕೋರಿದ್ದಳು.
ಈಗ ನೆರೆಯವರ ಮನೆಯಲ್ಲೇ ಆಶ್ರಯ ಪಡೆಯುತ್ತಿದ್ದಾಳೆ. ಪತಿ ಮನೋಜ್ ನಾಯ್ಕ್ ಹಾಗೂ ಅವನ ಮನೆಯವರ ವಿರುದ್ಧ ಪ್ರಭಾ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಳಲು ಆಕೆಯದು. ಈಗ ದೆಹಲಿಗೆ ತೆರಳಿ ಅಲ್ಲಿಯೇ ದೂರು ದಾಖಲಿಸಲು ಸಿದ್ಧಳಾಗಿದ್ದಾಳೆ.
ಬಾಲಕಿಗೆ ಲೈಂಗಿಕ ಕಿರುಕುಳ : ಅಜ್ಜನಿಗೆ ನ್ಯಾಯಾಂಗ ಬಂಧನ
60 ವರ್ಷದ ವ್ಯಕ್ತಿಯೊಬ್ಬರು ಮೂರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಬಂಧಿತನನ್ನ ಕಾಸರಗೋಡುವಿನ ತಟ್ಟೆನ್ ಗನಂ ಕಾಲೋನಿಯ ನಿವಾಸಿ ಕುರುವಿಲ್ಲ ಅಲಿಯಾಸ್ ಕುಟ್ಟಪ್ಪನ್ ಎಂದು ಗುರುತಿಸಲಾಗಿದೆ. ಬಾಲಕಿ ಆಟವಾಡಲು ಮನೆಯಿಂದ ಹೊರಗಡೆ ಬರುತ್ತಿದ್ದ ವೇಳೆ ಈ ವ್ಯಕ್ತಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿ ಮನೆಯವರ ಬಳಿ ಹೇಳಿಕೊಂಡಿದ್ದಳು.
ಬಾಲಕಿ ಮನೆಯವರು ನೀಡಿದ ದೂರಿನಂತೆ ಚಿತ್ತರಿಕ್ಕಲ್ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲಾ ಸೆಷನ್ ಕೋರ್ಟ್ ಆದೇಶದಂತೆ ಆರೋಪಿಯನ್ನ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications