ಯಡಿಯೂರಪ್ಪ ಗೆಲುವಿನ ಸಂಭ್ರಮಕ್ಕೆ ಹುಟ್ಟೂರು ಬೂಕನಕೆರೆಯಲ್ಲಿ ಪೂಜೆ
Recommended Video
ಬಿ ಎಸ್ ಯಡಿಯೂರಪ್ಪ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ಸಂಭ್ರಮ | Oneindia Kannada
ಮಂಡ್ಯ, ಜುಲೈ 24: ಬಿಜೆಪಿ ಪಾಳಯದಿಂದ ಗೆಲುವು ಸಾಧಿಸಿರುವ ಯಡಿಯೂರಪ್ಪನವರಿಗೆ ಒಳ್ಳೆಯದಾಗಲೆಂದು ಬಿಎಸ್ ವೈ ಹುಟ್ಟೂರು ಮಂಡ್ಯದ ಬೂಕನಕೆರೆಯಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಬೂಕನಕೆರೆಯಲ್ಲಿ ಗ್ರಾಮಸ್ಥರ ಸಂಭ್ರಮಾಚರಣೆ ನಡೆದಿದ್ದು, ಪರಸ್ಪರ ಸಿಹಿ ಹಂಚಿ ಯಡಿಯೂರಪ್ಪನವರಿಗೆ ಜೈಕಾರ ಹಾಕಿದರು. ಯಡಿಯೂರಪ್ಪನವರ ಅತ್ತಿಗೆ ಶಾರದಮ್ಮ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಯಡಿಯೂರಪ್ಪನವರ ಹೆಸರಲ್ಲಿ ಗ್ರಾಮದೇವತೆಗೆ ಪೂಜೆ ಸಲ್ಲಿಸಲಾಯಿತು. ಹುಟ್ಟೂರಿಗೆ ಯಡಿಯೂರಪ್ಪ ಹಲವು ಕೊಡುಗೆ ಮತ್ತು ಅನುದಾನ ನೀಡಿದ್ದನ್ನು ಇದೇ ವೇಳೆ ಹಿರಿಯರು ಸ್ಮರಿಸಿದರು.

ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಭೂ ವರಾಹನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭೂವರಾಹಾನಿಗೆ 58 ವಿವಿಧ ಬಗೆಯ ಪುಷ್ಪಗಳಿಂದ ಪುಷ್ಪಾಭಿಷೇಕ ಹಾಗೂ ದೇವಾಲಯದಲ್ಲಿ ಹಾಲು, ಎಳನೀರು ತುಪ್ಪದ ಅಭಿಷೇಕ ಸಹ ನೆರವೇರಿಸಲಾಯಿತು.












Click it and Unblock the Notifications