ತಾಪಂ ಕಚೇರಿಯಲ್ಲಿ ಕುಸಿದುಬಿದ್ದು ಕರ್ತವ್ಯನಿರತ ಮಹಿಳಾ ಪಿಡಿಓ ಸಾವು
ಪಾಂಡವಪುರ, ಡಿಸೆಂಬರ್ 5: ಕರ್ತವ್ಯನಿರತ ಮಹಿಳಾ ಪಿಡಿಓ ಒಬ್ಬರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಮೈಸೂರಿನ ವಸಂತನಗರ ನಿವಾಸಿ ಭಾರತಿ(54) ಮೃತ ಪಿಡಿಓ. ಪಾಂಡವಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾಪಂನಲ್ಲಿ ಕಳೆದ ನಾಲ್ಕೈದು ತಿಂಗಳ ದಿಂದ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಡ್ಯ ತಾಲೂಕು ತೂಬಿನಕೆರೆ ಗ್ರಾಪಂನಲ್ಲಿ ಕಾರ್ಯದರ್ಶಿಯಾಗಿದ್ದ ಭಾರತಿ ಅವರು ಇತ್ತೀಚೆಗೆ ಪಿಡಿಓ ಆಗಿ ಬಡ್ತಿಹೊಂದಿ ಪಾಂಡವಪುರ ತಾಲೂಕಿಗೆ ವರ್ಗಾವಣೆಗೊಂಡು ಗುಮ್ಮನಹಳ್ಳಿ ಗ್ರಾಪಂನಲ್ಲಿ ಪಿಡಿಓ ಆಗಿ ಕೆಲಸ ಮಾಡುತ್ತಿದ್ದರು. ಮೃತರಿಗೆ ಪತಿ ಪ್ರಕಾಶ್, ಓರ್ವ ಪುತ್ರಿ ಇದ್ದಾರೆ. ಪ್ರಕಾಶ್ ಅವರು ಸಹ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಆರ್ಟಿಐ ಕಾರ್ಯಕರ್ತ ರಮೇಶ್ ಎಂಬುವರು ಗುಮ್ಮನಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಪಂನಲ್ಲೂ ನರೇಗಾ ಕಾಮಗಾರಿಗಳು ಗುಣಾತ್ಮಕವಾಗಿ ನಡೆದಿಲ್ಲ. ದೂರು ನೀಡಿದ್ದರು ಎನ್ನಲಾಗಿದೆ. ಆ ವಿಚಾರವಾಗಿ ಚರ್ಚಿಸಲು ಶಾಸಕ ದರ್ಶನ್ಪುಟ್ಟಣ್ಣಯ್ಯ, ತಾಪಂ ಇಓ ಲೋಕೇಶ್ಮೂರ್ತಿ ಅವರು ಸೋಮವಾರ ಪಿಡಿಓ ಭಾರತಿ ಹಾಗೂ ಆರ್ಟಿಐ ಕಾರ್ಯಕರ್ತರನ್ನು ಕಚೇರಿ ಕರೆದು ಚರ್ಚಿಸಿದ್ದರು ಎನ್ನಲಾಗಿದೆ. ಸಭೆ ಮುಗಿದ ಬಳಿಕ ಸಿಬ್ಬಂದಿಗಳ ಕಚೇರಿಗೆ ತೆರಳಿದ ಪಿಡಿಓ ಭಾರತಿ ಅವರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಾರೆ. ತಕ್ಷಣವೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಮೈಸೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪಿಡಿಓ ಸಾವನ್ನಪ್ಪಿದ್ದಾರೆ.
ಪಿಡಿಓ ಮೃತದೇಹವನ್ನು ಪಟ್ಟಣದ ತಾಪಂ ಕಚೇರಿಯ ಆವರಣಕ್ಕೆ ತೆಗೆದುಕೊಂಡು ಬಂದು ಎಲ್ಲಾ ಪಿಡಿಓಗಳು ಕೆಲಕಾಲ ಅಂತಿಮ ದರ್ಶನ್ಕ್ಕೆ ಅವಕಾಶ ನೀಡಿದರು. ಬಳಿಕ ಮೃತದೇಹವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಯಿತು. 'ಆರ್ಐಟಿ ಕಾರ್ಯಕರ್ತರು ನೀಡಿದ ಒತ್ತಡದಿಂದ ಪಿಡಿಓ ಅವರಿಗೆ ಹೃದಯಾಘಾತವಾಗಿದೆ, ಪಿಡಿಓಗಳಿಗೆ ಕಚೇರಿಗಳಲ್ಲಿ ಕೆಲಸ ಮಾಡಲು ಒತ್ತಾಡ ಆಗುತ್ತಿದೆ' ಎಂದು ಸಂಬಂಧಿಕರು, ಪಿಡಿಓಗಳು ಆರೋಪಿಸಿದರು.
'ಮೃತ ಪಿಡಿಓ ಭಾರತಿ ಅವರು ಉತ್ತಮ ಅಧಿಕಾರಿಯಾಗಿದ್ದರು, ಯಾವುದೇ ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಿದ್ದರು. ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಅವರ ಪತಿ ರಮೇಶ್ ಆರ್ಟಿಐ ಮಾಹಿತಿ ಹಾಕಿ ಒತ್ತಡ ಏರುತ್ತಿದ್ದರು. ಅತಿಯಾದ ಒತ್ತಡದಿಂದಲೇ ಪಿಡಿಓ ಸಾವನ್ನಪ್ಪಿದ್ದಾರೆ' ಎಂದು ಗುಮ್ಮನಹಳ್ಳಿ ಗ್ರಾಪಂ ಪಿಡಿಓ ರಾಜೇಗೌಡ ಆರೋಪಿಸಿದರು.
ಪಿಡಿಓ ಭಾರತಿ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಜತೆಗೆ ಆರ್ಟಿಐ ಕಾರ್ಯಕರ್ತರ ರಮೇಶ್ ಅವರು ತಾಲೂಕಿನ ಎಲ್ಲಾ ಗ್ರಾಪಂಗಳ ನರೇಗ ಕೆಲಸ ನಿಯಾಮಾನುಸಾರ ನಡೆದಿಲ್ಲ ಎಂದು ದೂರು ನೀಡಿದ್ದ ಹಿನ್ನೆಲೆಯ ಅವರೊಟ್ಟಿಗೆ ಚರ್ಚಿಸಲು ಕಚೇರಿಗೆ ಕರೆಸಿದ್ದೆವು. ಜತೆಯಲ್ಲಿ ಪಿಡಿಓ ಭಾರತಿ ಅವರನ್ನು ಕರೆದಿದ್ದವು. ಸಭೆಯಲ್ಲಿ ಶಾಸಕರು ಸರಿಯಾಗಿ ಕೆಲಸ ಮಾಡಿ ಎಂದು ತಿಳಿಸಿ ತೆರಳಿದರು. ಸಭೆ ಮುಗಿದು ಅವರು ಕಚೇರಿಯ ಸಿಬ್ಬಂದಿಗಳ ಕೊಠಡಿಗೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ಎದನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಾಂಡವಪುರ ತಾಲೂಕು ಪಂಚಾಯಿತಿ ಇಒ ಲೋಕೇಶ್ಮೂರ್ತಿ ಹೇಳಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications