ಪಂಚೆ ಕಟ್ಟಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ
Recommended Video
ಮಂಡ್ಯ, ಮಾರ್ಚ್ 30: ಚುನಾವಣೆಗೆ ಸ್ಪರ್ಧಿಸುವ ಮೂಲಕ ಈಗಾಗಲೇ ಅಪ್ಪನ ಹಾದಿಯನ್ನು ನಿಖಿಲ್ ಕುಮಾರಸ್ವಾಮಿ ಅನುಸರಿಸಿದ್ದಾರೆ, ಆದರೆ ಜನಮಣ್ಣನೆ ಗಳಿಸಲು ಸಹ ಅಪ್ಪ ಅನುಸರಿಸಿದ ರೀತಿಗಳನ್ನೇ ನಿಖಿಲ್ ಅವರು ಅನುಸರಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೆಲವೇ ತಿಂಗಳುಗಳ ಹಿಂದೆ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ರೈತರ ಹೊಲವೊಂದರಲ್ಲಿ ಭತ್ತ ನಾಟಿ ಮಾಡಿದ್ದರು, ಇಂದು ನಿಖಿಲ್ ಕುಮಾರಸ್ವಾಮಿ ಅವರು ಸಹ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಿಖಿಲ್ ಕುಮಾರಸ್ವಾಮಿ ಅವರು, ಮದ್ದೂರು ತಾಲ್ಲೂಕಿನ ಆತನೂರು ಗ್ರಾಮದಲ್ಲಿ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿ ಗಮನ ಸೆಳೆದರು.
ಭತ್ತದ ನಾಟಿ ಮಾಡಿ ನಿಜಕ್ಕೂ ಮಣ್ಣಿನ ಮಗ ಆಗಲಿದ್ದಾರೆ ಎಚ್ಡಿಕೆ
ಪಕ್ಕಾ ರೈತನ ರೀತಿ, ಪಂಚೆಯನ್ನು ಎತ್ತಿ ಕಟ್ಟಿ, ತಲೆಗೆ ಟವೆಲ್ ಸುತ್ತಿ, ಭತ್ತ ನಾಟಿದ ನಿಖಿಲ್ ಕುಮಾರಸ್ವಾಮಿ, ಕೆಲ ಸಮಯ ರೈತರ ಜೊತೆ ಮಾತನಾಡಿದರು.
ಕುಮಾರಸ್ವಾಮಿ ಅವರು ಸಹ ಕೆಲವು ತಿಂಗಳ ಹಿಂದೆ ಮಂಡ್ಯದ ಪಾಂಡವಪುರ ತಾಲ್ಲೂಕಿನಲ್ಲಿ ಭತ್ತ ನಾಟಿ ಮಾಡಿದ್ದರು, ಆ ಕಾರ್ಯಕ್ರಮವು ರಾಜ್ಯದ ಗಮನ ಸೆಳೆದಿತ್ತು.