ಶ್ರೀ ಚಿತ್ತಾನಳ್ಳಿ ಪಟ್ಟಲದಮ್ಮ ದೇಗುಲದಲ್ಲಿ ಪ್ರತಿಷ್ಠಾಪನಾ ಮಹೋತ್ಸವ
ಮಂಡ್ಯ, ನವೆಂಬರ್ 06: ಶ್ರೀ ಚಿತ್ರನಾಳಮ್ಮ ಪಟ್ಟಲದಮ್ಮ ದೇವಸ್ಥಾನ ಹೊಳಲು ನೂತನವಾಗಿ ನಿರ್ಮಿಸಿರುವ ನಾಗರಕಟ್ಟೆ, ಅರಳಿಕಟ್ಟೆ, ರಾಜಗೋಪುರ, 52 ದೇವತೆಗಳ ಶಕ್ತಿಪೀಠ, ಬಲಿಪೀಠ, ಗರುಡಗಂಭ, ಅಮ್ಮನವರ ಪಾದುಕೆ, ಸಿಂಹಾವಾಹನ, ಮಹಾದ್ವಾರ ಕಲ್ಲಿನ ಜೋಡಿ ಆನೆಗಳ ಪ್ರತಿಮೆ ಹಾಗೂ ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದ್ದು, ಇಡೀ ಗ್ರಾಮ ಸಂಭ್ರಮದಲ್ಲಿ ತೇಲಾಡುತ್ತಿದೆ.
ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ನ.,6 ರ ಬುಧವಾರ ಬೆಳಿಗ್ಗೆ 6, ರಿಂದ ಪಲಾನ್ಯಾಸ, ದೇವತಾರಾಧನೆ, ಪ್ರಾರ್ಥನೆ, ನಾಗಸನ್ನಿಧಿಯಲ್ಲಿ ಬಿಂಬಸುದ್ದಿ, ಸ್ಥಳಶುದ್ಧಿ, ಧಾನ್ಯದಿವಸ, ಸೋಬಾನೆ, ಕಳಸ ಪ್ರತಿಷ್ಠಾಪಿಸುವ ಮೂಲಕ ಗಂಗೆಸಮೇತ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು.

ನ.7 ರ ಗುರುವಾರದಂದು ಬೆಳಿಗ್ಗೆ ನಾಗಸನ್ನಿಧಿಯಲ್ಲಿ ನಾಗಪ್ರತಿಷ್ಠೆ, ದೇವಾಲಯದಲ್ಲಿ ಗಣಪತಿಹವನ, ಬಿಂಬಸುದ್ದಿ, ಸಂಜೆ ಕಳಸಾ ಪ್ರಸ್ತಾಪನೆ, ಸುಮಂಗಲಿಯರಿಂದ ರಾತ್ರಿ 10ಗಂಟೆಗೆ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ 8 ಗಂಟೆಗೆ ದೊಡ್ಡಯ್ಯ-ಬೀರೇಶ್ವರ 8 ಕೂಟಗಳ ಬಸವ ಪೂಜೆ, ಹೂಹೊಂಬಾಳೆ ಮಾಡಲಾಗುವುದು. ನಂತರ ಹೊಳಲು ಗ್ರಾಮದಿಂದ ದೇವಸ್ಥಾನದವರೆಗೆ ದೇವರ ಮೆರವಣಿಗೆ ಮಾಡಲಾಗುವುದು.
ನ.8 ರ ಶುಕ್ರವಾರ ಬೆಳಿಗ್ಗೆ 7ಗಂಟೆಗೆ ಕಲಾ ಹೋಮ, "ನವಚಂಡಿಕಾಹವನ" ಇತರೆ ಹೋಮಗಳನ್ನು ನೆರವೇರಿಸಿದ ನಂತರ ಶ್ರೀಬಲಮುರಿ ಗಣಪತಿ ದೇವಾಲಯದ ಆವರಣದಿಂದ ಕಳಸ ಕಳಸ ಕಳಶ ಪೂಜಿಸಿಕೊಂಡು ನಂತರ 12ದೇವರ ಪೂಜಾ ಕೂಟ, 201 ಮಹಿಳೆಯರಿಂದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯೊಂದಿಗೆ ಚಿತ್ತನಳಿಯಮ್ಮ ದೇವಾಲಯಕ್ಕೆ ಕರೆತರಲಾಗುವುದು.
ಆ ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಸುಮಾರು 15 ಸಾವಿರ ಭಕ್ತಾಧಿಗಳಿಗೆ ಕಜ್ಜಾಯದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಹೊಳಲು ಗ್ರಾಮದಿಂದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ದರ್ಶನ್ಪುಟ್ಟಣ್ಣಯ್ಯ, ರವಿಕುಮಾರ್ ಗಣಿಗ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದರಾದ ಸುಮಲತಾ ಅಂಬರೀಷ್, ಕು.ರಮ್ಯಾ, ಹಾಗೂ ಮಂಡ್ಯ ಜಿಲ್ಲೆಯ ಜನಪ್ರಿಯ ನಾಯಕರುಗಳು , ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮಾಜಿ ಶಾಸಕ ಹಾಗೂ ಚಿತ್ತನಾಳಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಾಮು, ಗೌರವ ಅಧ್ಯಕ್ಷರಾದ ಎಚ್.ಎಲ್.ಶಿವಣ್ಣ, ಉಪಾಧ್ಯಕ್ಷ ಸದಾನಂದ, ಕಾರ್ಯದರ್ಶಿ ಎಚ್.ಎಲ್.ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಸಿದ್ದರಾಮು, ಖಜಾಂಜಿ ಪಟೇಲ್ ರಾಮು, ಸಂಘಟನ ಕಾರ್ಯದರ್ಶಿ ಯಜಮಾನ್ ಕುಮಾರ , ದೇವಸ್ಥಾನ ಟ್ರಸ್ಟ್ ಸಂಚಾಲಕರಾದ ಜಟ್ಟಿಕುಮಾರ್ ಹಾಗೂ ಟ್ರಸ್ಟ್ ಸದಸ್ಯರಾದ ಚಂದನ್ ಹಂಚಿನಟ್ಟಿ, ನಿಂಗೇಗೌಡ, ಎಚ್ ಕೆ ನಾಗರಾಜ್, ಎಚ್. ಎಲ್. ಲಿಂಗರಾಜು, ಎಚ್.ಎಸ್ .ರವಿಶಂಕರ್, ಹಾಗೂ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೊಳಲು ಚಿತ್ತನಳಮ್ಮ ದೇವಸ್ಥಾನ ಟ್ರಸ್ಟ್ನ ಪದಾಧಿಕಾರಿಗಳು, ಗ್ರಾಮಸ್ಥರು ತಿಳಿಸಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications