ಮಂಡ್ಯ: ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಬಲಿ ಪಡೆದ ಕಾರು
ರಸ್ತೆ ಬದಿಯಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿ ಮಗು ಶ್ರೇಯಾ ಆಟವಾಡುತ್ತಿತ್ತು. ಈ ವೇಳೆ ತಮಿಳುನಾಡಿನ ನಿವಾಸಿ ಕಮಲಾ ಕಣ್ಣನ್ ಎಂಬುವರು ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ವೇಗವಾಗಿ ಬಂದು ಮಗುವಿಗೆ ಡಿಕ್ಕಿ ಹೊಡೆದಿದೆ.
ಕೆ.ಆರ್.ಪೇಟೆ, ಮೇ 24: ರಸ್ತೆ ಬದಿಯಲ್ಲಿದ್ದ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಇಲ್ಲಿನ ಹಿರಿಕಳಲೆ ಗ್ರಾಮದಲ್ಲಿ ನಡೆದಿದೆ.
ಹಿರಿಕಳಲೆಯ ರಂಗನತಿಟ್ಟು ಬಡಾವಣೆಯಲ್ಲಿ ವಾಸಿಗಳಾದ ಪೂರ್ಣಿಮಾ ಮಂಜಶೆಟ್ಟಿ ದಂಪತಿ ಪುತ್ರಿ ಶ್ರೇಯಾ(3) ಮೃತಪಟ್ಟ ಮಗುವಾಗಿದೆ.

ರಸ್ತೆ ಬದಿಯಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿ ಮಗು ಶ್ರೇಯಾ ಆಟವಾಡುತ್ತಿತ್ತು. ಈ ವೇಳೆ ತಮಿಳುನಾಡಿನ ನಿವಾಸಿ ಕಮಲಾ ಕಣ್ಣನ್ ಎಂಬುವರು ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ವೇಗವಾಗಿ ಬಂದು ಮಗುವಿಗೆ ಡಿಕ್ಕಿ ಹೊಡೆದಿದೆ. [ಮಂಡ್ಯದ ಮಳವಳ್ಳಿಯಲ್ಲಿ ಸಿಡಿಲು ಬಡಿದು ಮನೆ ಜಖಂ, ನಾಲ್ವರಿಗೆ ಗಾಯ]
ಕೂಡಲೇ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಮಾರ್ಗದ ಮಧ್ಯದಲ್ಲಿಯೇ ಮೃತಪಟ್ಟಿದೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications