ಕೃಷ್ಣನ ಹಿಂದೆ ಹೊಂಟಿತು ಮಂಡ್ಯದ ಕಾಂಗ್ರೆಸ್ ಪಟಾಲಂ
ಎಸ್ ಎಂ ಕೃಷ್ಣ ರಾಜೀನಾಮೆ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಬೆನ್ನಿಗೆ, ಇದೀಗ ಪಕ್ಷದ ನಾಯಕರು ಸರದಿಯಾಗಿ ರಾಜೀನಾಮೆ ನೀಡಿ ಹೊರಬರುತ್ತಿದ್ದಾರೆ.
ಮಂಡ್ಯ, ಫೆಬ್ರವರಿ 3: ಎಸ್.ಎಂ ಕೃಷ್ಣ ರಾಜೀನಾಮೆ ಬೆನ್ನಿಗೆ ಮಂಡ್ಯ ಕಾಂಗ್ರೆಸಿನ ಒಂದೊಂದೇ ವಿಕೆಟುಗಳು ಉರುಳುತ್ತಿವೆ. ಕೃಷ್ಣಾ ಬೆಂಬಲಿಗ ಮಂಡ್ಯ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಶ್ರಿಕಂಠಯ್ಯ ರಾಜೀನಾಮೆ ನೀಡಿದ ಬೆನ್ನಿಗೆ ಈಗ ಮತ್ತೂ 13 ಜನ ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಗೆ ಸಲ್ಲಿಸಿದ್ದಾರೆ.[ಎಸ್.ಎಂ ಕೃಷ್ಣ ಸುದ್ದಿಗೋಷ್ಠಿ: ಉಳಿದವರು ಕಂಡಂತೆ..]
ಫ್ಯಾಕ್ಸ್ ಮೂಲಕ ಗ್ರಾಮಪಂಚಾಯಿತಿ ಸದಸ್ಯರಾದ ಜಯಮ್ಮ ಮರಿಗೌಡ, ಅಶ್ವಿನಿ ಶ್ರೀಧರ್, ಪವಿತ್ರ ನಾಗೇಶ್, ಸಣ್ಣ ಬೋರಯ್ಯ, ವಿ.ಆರ್.ಮಾದೇಗೌಡ, ನಾಗೇಶ್, ನಾಗೇಂದ್ರ, ಡಿ.ರಂಗನಾಥ್, ಎಂ.ಸುರೇಶ್, ಮಂಜುಳಾ ರವಿಕುಮಾರ್, ದೇವಮ್ಮ ವೆಂಕಟೇಶ್, ಲಕ್ಷ್ಮೀಶ, ನಾಗರತ್ನ, ಶ್ರೀಕಂಠ ಮತ್ತು ಸುನಿತಾ ದಿವಾಕರ್ ತಮ್ಮ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸದ್ದಾರೆ.[ಎಸ್.ಎಂ ಕೃಷ್ಣ ಜತೆ ಅಂಬರೀಶನ್ನೂ ಬಿಜೆಪಿಗೆ ಸ್ವಾಗತಿಸಿದ ಆರ್.ಅಶೋಕ್!]
ಇದರೊಂದಿಗೆ ಮಂಡ್ಯ ಕಾಂಗ್ರೆಸ್ ಬಣ ಅರ್ಧಕರ್ಧ ಖಾಲಿಯಾದಂತಾಗಿದೆ. ಎಸ್.ಎಂ.ಕೃಷ್ಣ ರಾಜೀನಾಮೆ ಬೆನ್ನಿಗೆ ಅವರ ಅನುಯಾಯಿ ರವೀಂದ್ರ ಶ್ರೀಕಂಠಯ್ಯ ರಾಜೀನಾಮೆ ನೀಡಿದ್ದರು. ಇದೀಗ ಶ್ರೀಕಂಠಯ್ಯ ಅಭಿಮಾನಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ಸರದಿ ಯಾರದ್ದೋ ಗೊತ್ತಿಲ್ಲ.