ಮಂಡ್ಯದಲ್ಲಿ ಬಿಸಿಯೂಟದ ಅಕ್ಕಿ ಕದ್ದ ಮುಖ್ಯಶಿಕ್ಷಕಿ!
ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಂಗ್ರಹಿಸಿದ್ದ ಅಕ್ಕಿಯನ್ನು ಶಾಲೆಯ ಮುಖ್ಯಶಿಕ್ಷಕಿ ಶಾರದಮ್ಮ ಎಂಬುವವರು ಕದ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ.
ಮಂಡ್ಯ, ಮೇ 30: ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಂಗ್ರಹಿಸಿದ್ದ ಅಕ್ಕಿಯನ್ನು ಶಾಲೆಯ ಮುಖ್ಯಶಿಕ್ಷಕಿ ಶಾರದಮ್ಮ ಎಂಬುವವರು ಕದ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ.
ಇವರ ಬಗ್ಗೆ ಮೊದಲೇ ಅನುಮಾನವಿದ್ದ ಗ್ರಾಮಸ್ಥರು ಒಂದು ದಿನ ವರ ಬಳಿ ಇದ್ದ ಚೀಲವನ್ನು ತೆಗೆಯಿಸಿ ನೋಡಿದಾಗ ಅಕ್ಕಿಯನ್ನು ಕದ್ದಿರುವುದು ಗಮನಕ್ಕೆ ಬಂದಿದೆ. ಮೊದ ಮೊದಲು ತಾನು ಕದ್ದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಶಾರದಮ್ಮ, ತಮ್ಮ ಚೀಲದಲ್ಲಿ ಅಕ್ಕಿ ಇರುವುದು ಊರಿನವರಿಗೆ ತಿಳಿಯುತ್ತಿದ್ದಂತೆಯೇ, ಆ ಅಕ್ಕಿಯಲ್ಲಿ ಸಿಗರೇಟ್ ಮತ್ತು ಕೆಲ ತ್ಯಾಜ್ಯ ವಸ್ತುಗಳಿದ್ದವು, ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲು ಕೊಂಡೊಯ್ಯುತ್ತಿದ್ದೆ ಎಂದಿದ್ದಾರೆ.[ಮಂಡ್ಯ: ತುತ್ತು ನೀಡಬೇಕಾದ ಕೈಯಲ್ಲಿ ವಿಷವುಣಿಸಿದ ಹೆತ್ತತಾಯಿ!]

ಶಿಕ್ಷಕಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಭೀಮಾ ನಾಯ್ಕ್ ಹೇಳಿದ್ದಾರೆ.












Click it and Unblock the Notifications