ದಸರಾ ಹಿನ್ನೆಲೆ ಮಂಜಿನ ನಗರಿಯ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ
ಕೊಡಗು, ಅಕ್ಟೋಬರ್ 16: ಅದ್ಧೂರಿಯಾದ ಆಚರಣೆಯಿಂದ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದ ಮಡಿಕೇರಿ ದಸರಾ ಹಬ್ಬವನ್ನು ಈ ಬಾರಿ ಕೊರೊನಾ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ.
ಅಷ್ಟೇ ಅಲ್ಲ, ಅಕ್ಟೋಬರ್ 17 ಮತ್ತು 26ರಂದು ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳನ್ನೂ ಮುಚ್ಚಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವಿಜೃಂಭಣೆಯಿಂದ ಸಾಗುವ ಮಡಿಕೇರಿ ದಸರಾ ನೋಡಲೆಂದೇ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ದಸರಾ ಆರಂಭದ ಮುನ್ನವೇ ಜಿಲ್ಲೆಯಲ್ಲಿ ಪ್ರವಾಸಿಗರು ಕಾಣಿಸಿಕೊಳ್ಳುತ್ತಿದ್ದರು.
ಆದರೆ ಮಂಜಿನ ನಗರಿ ಈ ಬಾರಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳು ಖಾಲಿ ಹೊಡೆಯುತ್ತಿವೆ.

ಮಂಜಿನ ನಗರಿಯ ದಸರಾ ಮಹೋತ್ಸವಕ್ಕೆ ಇಂದು ವಾಡಿಕೆಯಂತೆ ನಗರ ದಸರಾ ಸಮಿತಿಯಿಂದ ಈ ಬಾರಿಯು ದಸರಾ ಉತ್ಸವ ನಿರ್ವಿಘ್ನವಾಗಿ ನೆರವೇರಲೆಂದು ಕೋರಿಕೊಂಡು ಶಾಸಕರಾದ ಸುನೀಲ್ ಸುಬ್ರಮಣಿ ಹಾಗೂ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಅವರ ಮುಂದಾಳತ್ವದಲ್ಲಿ ನಗರದ ಕುಂದೂರುಮೂಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ನಾಲ್ಕು ಶಕ್ತಿ ದೇವತೆಗಳಿಂದ ಕರಗವೂ ಹೊರಡಲು ಅಣಿಯಾಗುತ್ತಿದೆ.












Click it and Unblock the Notifications