Get Updates
Get notified of breaking news, exclusive insights, and must-see stories!

ಕೊಡಗಿನ ಕಲೆ-ಸಂಸ್ಕೃತಿ ಬಿಂಬಿಸಲಿರುವ ಕೊಡವ ಬಲ್ಯನಮ್ಮೆ: ಯಾವಾಗಿನಿಂದ ಹಾಗೂ ವಿಶೇಚತೆ ಏನು?

ಮಡಿಕೇರಿ, ಜನವರಿ, 24: ಕೊಡಗಿನಲ್ಲಿ ಆಗಾಗ ವಿಶೇಷ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಹಾಗೆಯೇ ಇದೀಗ ಕೊಡಗಿನ ಕಲೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಫೆಬ್ರವರಿ 27 ಹಾಗೂ 28ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಬಲ್ಯನಮ್ಮೆಯನ್ನು ಆಯೋಜಿಸಲು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಕ್ಕೆ ಅಮ್ಮತ್ತಿ ಕೊಡವ ಸಮಾಜದ ಸಹಭಾಗಿತ್ವ ನೀಡಲಿದ್ದು, ಅದ್ಧೂರಿಯಾಗಿ ಕೊಡವ ಬಲ್ಯ ನಮ್ಮೆಯನ್ನು ನಡೆಸಲಾಗುತ್ತಿದೆ. ಇನ್ನು ಕೊಡವ ಬಲ್ಯ ನಮ್ಮೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮೊದಲ ದಿನ ಸಾರ್ವತ್ರಿಕವಾಗಿ ಕೊಡವ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು ಈ ಪ್ರಯುಕ್ತ ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್, ಪರೆಯಕಳಿ, ಸಮ್ಮಂಧ ಅಡ್ಕುವ, ವಾಲಗ ನುಡಿಸುವ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

Kodava Balyanamme Event on January 27 amp amp 28 In Kodagu

ಅಂತೆಯೇ ಸಾಹಿತ್ಯ ಪರ ಸ್ಪರ್ಧೆಗಳಾದ ಕವನ ಸ್ಪರ್ಧೆ, ಕೊಡವ ಪಾಟ್ ಸ್ಪರ್ಧೆ, ಕೊಡವ ಭಾಷಣ ಸ್ಪರ್ಧೆಗಳು ಕೂಡ ಇರಲಿವೆ. ಕೊಡವ ವಸ್ತು ಪ್ರದರ್ಶನ ಹಾಗೂ ಪೈಪೋಟಿಗೆ ಅವಕಾಶವನ್ನು ಬಲ್ಯನಮ್ಮೆಯಲ್ಲಿ ಕಲ್ಪಿಸಲಾಗಿದೆ. ವಸ್ತು ಪ್ರದರ್ಶನ ನೀಡುವವರು ತಮ್ಮ ತಮ್ಮಲ್ಲಿರುವ ಪ್ರಾಚ್ಯ ಕೊಡವ ಬಳಕೆಯ ವಸ್ತುಗಳನ್ನು ಬಲ್ಯ ನಮ್ಮೆಯ ವೇಳೆ ಪ್ರದರ್ಶನಕ್ಕಿಡಲು ಅವಕಾಶವಿದ್ದು, ಬಹುಮಾನಗಳನ್ನು ನೀಡಲಾಗುತ್ತಿದೆ.

ಬಲ್ಯ ನಮ್ಮೆಯಲ್ಲಿ ವಿಶೇಷ ಎಂಬಂತೆ ಪಾನಿಕೆಟ್ಟ್, ಕೋರೆಕೆಟ್ಟ್, ವಸ್ತ್ರಕೆಟ್ಟ್ ಗಳ ಪೈಪೋಟಿಯಿದ್ದು, ಆಸಕ್ತರು ಭಾಗವಹಿಸಬಹುದು. ಸಾರ್ವತ್ರಿಕವಾಗಿ ಕೊಡವ ಸಂಸ್ಕೃತಿಯ ಬಗ್ಗೆ ವಿಶೇಷ ಪ್ರತಿಭೆಯುಳ್ಳವರಿಗೆ ಬಲ್ಯನಮ್ಮೆಯಲ್ಲಿ ತಮ್ಮ ತಮ್ಮ ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆ ಕಲ್ಪಿಸಲಾಗುವುದು. ಅಂತಹವರು ತಮ್ಮ ಹೆಸರನ್ನು ವಿವರಗಳೊಂದಿಗೆ ಅಕಾಡೆಮಿ ಕಚೇರಿಗೆ 8762942976 ಮೂಲಕ ತ್ವರಿತವಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ.

ಬಲ್ಯನಮ್ಮೆಯ ಎರಡನೇ ದಿನ ಬೆಳಗ್ಗೆ ಅಮ್ಮತ್ತಿ ಪಟ್ಟಣದಲ್ಲಿ ಅದ್ಧೂರಿಯ ಕೊಡವ ಸಾಂಸ್ಕೃತಿಕ ಮೆರವಣಿಗೆಯನ್ನು ಏರ್ಪಡಿಸಲಾಗುವುದು. ಕರ್ನಾಟಕ-50ರ ಸಂಭ್ರಮದ ಪ್ರಯುಕ್ತ ಕನ್ನಡ ಭುವನೇಶ್ವರಿಯ ಬಾವುಟವನ್ನು ಹಾರಿಸಿ ತದನಂತರ ಬಲ್ಯನಮ್ಮೆಯನ್ನು ಉದ್ಘಾಟಿಸಲಾಗುವುದು. ಮಧ್ಯಾಹ್ನದವರೆಗೆ ಹಿಂದಿನ ದಿನ ಪೈಪೋಟಿಯಲ್ಲಿ ವಿಜೇತರಾದ ತಂಡಗಳಲ್ಲಿ ಪ್ರಥಮ ಸ್ಥಾನ ಪಡೆದಿರುವವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಮಧ್ಯಾಹ್ನದ ನಂತರ ನಡೆಯುವ ಕಾರ್ಯಕ್ರಮವು ಮಹತ್ವದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಜಿಲ್ಲೆಯ ಶಾಸಕರು, ಸಂಸದರುಗಳು ಆಗಮಿಸುವರು. ವೇದಿಕೆಯಲ್ಲಿ 2022-23ಹಾಗೂ 2023-24ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗಳನ್ನು ಸಚಿವರಿಂದ ಪ್ರಧಾನ ಮಾಡಿಸಿ ಗೌರವಿಸಲಾಗುತ್ತದೆ.

ಅರ್ಹ ಕಲಾವಿದರಿಗೆ ಹಾಗೂ ಐನ್ಮನೆ, ದೇವಸ್ಥಾನ, ಸಂಘ-ಸಂಸ್ಥೆ, ಸಮಾಜಗಳಿಗೆ ವಾದ್ಯ ಪರಿಕರಗಳನ್ನು ನೀಡಲಾಗುವುದು. ವೇದಿಕೆಗೆ ಕೊಡವ ಜನಾಂಗ ಹಾಗೂ ಭಾಷಿಕ ಜನಾಂಗದ ಮೇರು ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. ಬಲ್ಯನಮ್ಮೆಯ ಎರಡು ದಿನಗಳು ಊಟದ ವ್ಯವಸ್ಥೆ, ನೀರಿನ ಸಿದ್ಧತೆಗಳೊಂದಿಗೆ ನಡೆಸಲಾಗುವುದುದೆಂದು ಅಕಾಡೆಮಿಯ ಸರ್ವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಪೊನ್ನಿರ ಯು.ಗಗನ್, ಕುಡಿಯರ ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಕುಮಾರ ಹಾಜರಿದ್ದು ಸಹಕರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+