ಯೋಗಿ ಆದಿತ್ಯನಾಥ್ ಸಂಸದರಾಗಿ 11 ದಿನ ಜೈಲಿನಲ್ಲಿದ್ದಾಗ
ಲಕ್ನೋ ಮಾರ್ಚ್ 19: ಉತ್ತರ ಪ್ರದೇಶದಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 255 ಕ್ಷೇತ್ರಗಳನ್ನು ಗೆಲ್ಲುವ ಮೂಲಕ 41.29 ಶೇಕಡಾ ಮತಗಳನ್ನು ಪಡೆದು ಅಧಿಕಾರವನ್ನು ಉಳಿಸಿಕೊಂಡಿದೆ. ಆದಿತ್ಯನಾಥ್ ಅವರು ರಾಜ್ಯದಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ನಂತರ ಕಳೆದ 37 ವರ್ಷಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಆದರೆ ಸಂಸದರಾಗಿದ್ದಾಗ 11 ದಿನ ಗೋರಖ್ಪುರ ಜೈಲಿನಲ್ಲಿ ಇರಬೇಕಾದ ಸಂದರ್ಭ ಬಂದಿತ್ತು. ಈ ಘಟನೆಯು ಅವರ ರಾಜಕೀಯ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತ್ತು. ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಸಂಸತ್ತಿನಲ್ಲಿ ಕಣ್ಣೀರಿಟ್ಟಿದ್ದರು. ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದವರು ಮುಲಾಯಂ ಸಿಂಗ್ ಯಾದವ್. ರಾಜಕೀಯ ಪಕ್ಷಪಾತದಿಂದಾಗಿ ನನಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಯೋಗಿ ಆದಿತ್ಯನಾಥ್ ಸಂಸತ್ತಿನಲ್ಲಿ ಹೇಳಿದ್ದರು. ಆಗ ಮುಲಾಯಂ ಸಿಂಗ್ ಯಾದವ್ ಅವರು ರಾಜಕೀಯ ಲಾಭಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಂಧನದ ಘಟನೆ
2007ರ ಜನವರಿ 26ರಂದು ಗೋರಖ್ಪುರದಲ್ಲಿ ಕೋಮುಗಲಭೆ ನಡೆದಿತ್ತು. ಆಗ ಯೋಗಿ ಆದಿತ್ಯನಾಥ್ ಸಂಸದರಾಗಿದ್ದರು. ಘಟನೆ ನಡೆದ ದಿನ ಅವರು ಕುಶಿನಗರದಲ್ಲಿದ್ದರು. ಗಲಭೆಯಿಂದಾಗಿ ಗೋರಖ್ಪುರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಈ ಘಟನೆಯ ವಿರುದ್ಧ ಯೋಗಿ ಆದಿತ್ಯನಾಥ್ ಗೋರಖ್ಪುರದಲ್ಲಿ ಧರಣಿ ನಡೆಸುವುದಾಗಿ ಘೋಷಿಸಿದರು. ಅವರು ಕುಶಿನಗರದಿಂದ ತಮ್ಮ ಬೆಂಬಲಿಗರೊಂದಿಗೆ ಗೋರಖ್ಪುರಕ್ಕೆ ತೆರಳಿದರು. ಆಗ ಗೋರಖ್ಪುರ ಗಡಿ ಪ್ರವೇಶಿಸುವ ಮುನ್ನವೇ ಯೋಗಿ ಆದಿತ್ಯನಾಥ್ ಅವರನ್ನು ಬಂಧಿಸಲಾಗಿತ್ತು. ಬಂಧನದ ಆದೇಶವನ್ನು ಡಿಎಂ ಹರಿ ಓಂ ನೀಡಿದ್ದರು. ಯೋಗಿ ಆದಿತ್ಯನಾಥ್ ಮೇಲೆ ಶಾಂತಿ ಕದಡುವ ಸೆಕ್ಷನ್ ಹಾಕಲಾಗಿತ್ತು. ನಂತರ ಅವರನ್ನು ಜೈಲಿಗೆ ಕಳುಹಿಸಲಾಯಿತು. 11 ದಿನಗಳ ಕಾಲ ಜೈಲಿನಲ್ಲಿದ್ದ ಅವರು ನಂತರ ಜಾಮೀನು ಪಡೆದರು.
ಯೋಗಿ ಆದಿತ್ಯನಾಥ್ ಬಂಧನದಿಂದ ಯೋಗಿ ಬೆಂಬಲಿಗರ ಅಸಮಾಧಾನ ಹೆಚ್ಚಾಗಿತ್ತು. ಈ ವಿಷಯವನ್ನು ತಣ್ಣಗಾಗಿಸಲು ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ಗೋರಖ್ಪುರ ಜಿಲ್ಲಾಧಿಕಾರಿ ಡಾ.ಹರಿಓಂ ಅವರನ್ನು ಅಮಾನತುಗೊಳಿಸಿದ್ದರು. ತರಾತುರಿಯಲ್ಲಿ ಹೆಲಿಕಾಪ್ಟರ್ ಮೂಲಕ ಸೀತಾಪುರದ ಡಿಎಂ ರಾಕೇಶ್ ಗೋಯಲ್ ಅವರನ್ನು ಕರೆಸಿಕೊಂಡು ಗೋರಖ್ ಪುರದ ನೂತನ ಡಿಎಂ ಮಾಡಲಾಗಿತ್ತು. ಆದರೆ ಒಂದು ವಾರದ ನಂತರ ಮುಲಾಯಂ ಸಿಂಗ್ ಹರಿಓಂ ಅವರನ್ನು ಅಮಾನತುಗೊಳಿಸಿದರು. ನಂತರ ಡಾ.ಹರಿ ಓಂ ಅವರನ್ನು ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರ ಆಪ್ತ ಅಧಿಕಾರಿಯಾಗಿ ನೇಮಿಸಿಕೊಳ್ಳಲಾಯಿತು.

ಸಭೆಯಲ್ಲಿ ಯೋಗಿ ಕಣ್ಣೀರು
ಯೋಗಿ ಆದಿತ್ಯನಾಥ್ ಅವರು 7 ಫೆಬ್ರವರಿ 2007 ರಂದು ಜೈಲಿನಿಂದ ಬಿಡುಗಡೆಯಾದರು. ಲೋಕಸಭೆಯಲ್ಲಿ 12 ಮಾರ್ಚ್ 2007 ರಂದು ಸಭೆ ಸೇರಲಾಗಿತ್ತು. ಶೂನ್ಯ ವೇಳೆಯಲ್ಲಿ ಅಂದಿನ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಯೋಗಿ ಆದಿತ್ಯನಾಥ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಯೋಗಿ ಆದಿತ್ಯನಾಥ್ ಮಾತನಾಡಲು ಎದ್ದಾಗ ಅವರ ಮುಖದಲ್ಲಿ ಯಾತನೆ, ಕೋಪ ಎದ್ದು ಕಾಣುತ್ತಿತ್ತು. ಅವನ ಬೆರಳುಗಳು ಭಾವೋದ್ವೇಗದಲ್ಲಿ ನಡುಗುತ್ತಿದ್ದವು. ಆಗ ತನ್ನ ಬಂಧನದ ಘಟನೆಯನ್ನು ಹೇಳತೊಡಗಿದ ಅವರ ಗಂಟಲು ಒಣಗಿತ್ತು. ಅನೇಕ ಬಾರಿ ಅವರು ಕಣ್ಣೀರು ಹಾಕಿದ್ದರು. ಅವರು ಸದನದಿಂದ ತಮ್ಮ ರಕ್ಷಣೆಯನ್ನು ಕೋರಿದರು. ಯೋಗಿ ಮಾತು ಕೇಳಿ ಸ್ಪೀಕರ್ ಸೋಮನಾಥ ಚಟರ್ಜಿ ಕೂಡ ಭಾವುಕರಾದರು.
ಯೋಗಿ ಆದಿತ್ಯನಾಥ್, 'ಸರ್! ರಾಜ್ಯ ಸರ್ಕಾರ ನನಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದೆ. ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣದಲ್ಲಿ ಸಂಸದರನ್ನು 24 ಗಂಟೆಗೂ ಹೆಚ್ಚು ಕಾಲ ಜೈಲಿನಲ್ಲಿಡುವಂತಿಲ್ಲ, ಹಾಗಿದ್ದರೂ ಅವರು ನನ್ನನ್ನು 11 ದಿನ ಜೈಲಿನಲ್ಲಿಟ್ಟಿದ್ದು ಸರಿಯೇ?' ಎಂದು ಪ್ರಶ್ನೆ ಮಾಡಿದ್ದರು. ಆದರೆ ಈ ಬಗ್ಗೆ ತಾವೇ ಪರಿಶೀಲಿಸುವುದಾಗಿ ಲೋಕಸಭೆಯ ಸ್ಪೀಕರ್ ಭರವಸೆ ನೀಡಿದರು. ಯೋಗಿ ಆದಿತ್ಯನಾಥ್ ಅವರನ್ನು ಆ ಸಮಯದಲ್ಲಿ ಏಕೆ ಬಂಧಿಸಲಾಯಿತು ಎಂಬುದು ಈಗ ಪ್ರಶ್ನೆ. ಕರ್ಫ್ಯೂ ವ್ಯಾಪ್ತಿ ಪ್ರದೇಶದಲ್ಲಿ ಧರಣಿ ನಡೆಸಲು ಹಠ ಹಿಡಿದ ಕಾರಣ ಮಾತ್ರ ಅವರನ್ನು ಬಂಧಿಸಲಾಗಿದೆಯೇ? ಹಾಗಿದ್ದರೆ ಅದು ಒಬ್ಬ ಸಂಸದನನ್ನು 11 ದಿನ ಜೈಲಿನಲ್ಲಿಡುವಷ್ಟು ದೊಡ್ಡ ವಿಚಾರವೇ?

ಮುಲಾಯಂ ಸಿಂಗ್ ಉದ್ದೇಶ
ಆ ವೇಳೆ ಮುಲಾಯಂ ಸಿಂಗ್ ಯಾದವ್ ಸಮಾಧಾನಪಡಿಸಲು ಯೋಗಿ ಆದಿತ್ಯನಾಥ್ ಅವರನ್ನು ಬಂಧಿಸಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಯೋಗಿ ಆದಿತ್ಯನಾಥ್ ವಿರುದ್ಧ ಹೆಚ್ಚಿನ ಪ್ರಕರಣ ಇರಲಿಲ್ಲ. ಆದರೆ ಅವರನ್ನು ಶೀಘ್ರವಾಗಿ ಬಂಧಿಸಲಾಯಿತು. ಈ ಬಂಧನದಿಂದ ಅಲ್ಪಸಂಖ್ಯಾತ ಸಮಾಜದಲ್ಲಿ ತನ್ನ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಮುಲಾಯಂ ಸಿಂಗ್ ಭಾವಿಸಿದ್ದರು. ಕೋಮು ಉದ್ವಿಗ್ನತೆ ಉಲ್ಬಣಗೊಂಡರೆ, ಮತಗಳು ಬಿಜೆಪಿಯತ್ತ ಧ್ರುವೀಕರಣಗೊಳ್ಳಬಹುದು ಎಂಬುದು ಮುಲಾಯಂ ಸಿಂಗ್ ಅವರ ಎರಡನೇ ಆತಂಕವಾಗಿತ್ತು. ತಮ್ಮ ಇಮೇಜ್ ಅನ್ನು ನಿರ್ಮಿಸಿ ಬಿಜೆಪಿಯನ್ನು ನೆರಳಿಲ್ಲದಂತೆ ಮಾಡಲು ಮುಲಾಯಂ ಸಿಂಗ್ ತ್ವರಿತ ಕ್ರಮಕ್ಕೆ ಆದೇಶಿಸಿದ್ದರು ಎನ್ನಲಾಗುತ್ತದೆ. ಆದರೆ ಮುಲಾಯಂ ಸಿಂಗ್ ಈ ರೀತಿ ಮಾಡಿದ ನಂತರವೂ ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ಸಾಧ್ಯವಾಗಲಿಲ್ಲ. ಅವರ ಯೋಜನೆ ಈಡೇರಲಿಲ್ಲ. ವಿಧಾನಸಭಾ ಚುನಾವಣೆ ನಡೆದಾಗ ಮುಸ್ಲಿಂ ಸಮುದಾಯದವರು ಬಿಎಸ್ಪಿಯನ್ನು ಬೆಂಬಲಿಸಿದ್ದರು. ಮಾಯಾವತಿ ಅವರು 206 ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ಸಂಪೂರ್ಣ ಬಹುಮತದ ಸರ್ಕಾರವನ್ನು ರಚಿಸಿದರು.

ಸೇಡು ತೀರಿಸಿಕೊಂಡ್ರಾ ಯೋಗಿ?
ಯೋಗಿ ಆದಿತ್ಯನಾಥ್ ಅವರನ್ನು ಬಂಧಿಸಲು ಆದೇಶಿಸಿದ ಅಧಿಕಾರಿಯನ್ನು ಅವರು ಎಂದಿಗೂ ಮರೆಯಲಿಲ್ಲ. ಆತನ ಬಂಧನಕ್ಕೂ ಮುನ್ನ ಆತನೊಂದಿಗೆ ನಿಯೋಜಿಸಲಾಗಿದ್ದ ಸರ್ಕಾರಿ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕಲಾಯಿತು. ಆದರೆ ಕಾಲಚಕ್ರ ತಿರುಗಿತು. ಯೋಗಿ ಆದಿತ್ಯನಾಥ್ 2017ರಲ್ಲಿ ಮುಖ್ಯಮಂತ್ರಿಯಾದರು. ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರು. ಇದನ್ನು ವಾಡಿಕೆಯ ಬದಲಾವಣೆ ಎಂದು ಕರೆಯಲಾಯಿತು. ಆದರೆ ಈ ವರ್ಗಾವಣೆ ಪಟ್ಟಿಯಲ್ಲಿ ಡಾ.ಹರಿಓಂ ಅವರ ಹೆಸರೂ ಇತ್ತು. ಆಗ ಹರಿಓಂ ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ವರ್ಗಾವಣೆಗೊಂಡ 20 ಅಧಿಕಾರಿಗಳ ಪೈಕಿ ಹರಿಓಂ ಸೇರಿದಂತೆ 7 ಮಂದಿ ಪೋಸ್ಟಿಂಗ್ಗಾಗಿ ಕಾಯುತ್ತಿದ್ದಾರೆ. ಅವರಿಗೆ ಯಾವುದೇ ಹುದ್ದೆ ಸಿಕ್ಕಿಲ್ಲ. ಆದರೆ 2022 ರಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ ಅವರ ಗುರುತು ಬುಲ್ಡೋಜರ್ ಬಾಬಾ ಎಂದು ಮಾರ್ಪಟ್ಟಿದೆ. ಕಣ್ಣೀರಿನಿಂದ ಬುಲ್ಡೋಜರ್ವರೆಗಿನ ಈ ಪ್ರಯಾಣ ತುಂಬಾ ಸವಾಲಿನದ್ದಾಗಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications