ಯುಪಿ: 6ನೇ ಹಂತದಲ್ಲೂ ಹೆಚ್ಚು ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿಗಳು
ಲಕ್ನೋ ಮಾರ್ಚ್ 01: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗತಕಾಲದ ಕಳಂಕಿತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಯುಪಿ ಆರನೇ ಹಂತದ ಚುನಾವಣೆಯಲ್ಲಿ ಪಕ್ಷಗಳು ಅಂತಹವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿ ನಿಲ್ಲಿಸಿರುವುದು ಕಂಡುಬಂದಿದೆ.
ಹಿಂದಿನ ಹಂತಕ್ಕೆ ಹೋಲಿಸಿದರೆ ಆರನೇ ಹಂತದಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಜೊತೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಉಪಸ್ಥಿತಿಯಿಂದಾಗಿ ಈ ಹಂತದ ಸುಮಾರು 65 ಪ್ರತಿಶತ ವಿಧಾನಸಭಾ ಸ್ಥಾನಗಳನ್ನು ಸೂಕ್ಷ್ಮವೆಂದು ಘೋಷಿಸಲಾಗಿದೆ. ಯುಪಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಆರನೇ ಹಂತದಲ್ಲಿ ಕಣದಲ್ಲಿರುವ ಒಟ್ಟು 676 ಅಭ್ಯರ್ಥಿಗಳ ಪೈಕಿ 670 ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ಗಳನ್ನು ವಿಶ್ಲೇಷಿಸಿದ ನಂತರ ವರದಿಯನ್ನು ಬಿಡುಗಡೆ ಮಾಡಿದೆ. 10 ಜಿಲ್ಲೆಗಳ ಒಟ್ಟು 57 ಸ್ಥಾನಗಳಿಗೆ ಮಾರ್ಚ್ 3 ರಂದು ಆರನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಆರನೇ ಹಂತದಲ್ಲಿ ಎಡಿಆರ್ ಪರಿಶೀಲನೆ ಮಾಡಿದ 670 ಅಭ್ಯರ್ಥಿಗಳಲ್ಲಿ 182 (ಶೇಕಡಾ 27) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅದರಲ್ಲಿ ಶೇಕಡಾ 23ರಷ್ಟು ಅಭ್ಯಾರ್ಥಿಗಳ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಉಳಿದಿವೆ. ಸಮಾಜವಾದಿ ಪಕ್ಷ (ಎಸ್ಪಿ) ಈ ಹಂತದಲ್ಲಿ 48 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ (83 ಪ್ರತಿಶತ) 40 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಅಂತಹ ಅಭ್ಯರ್ಥಿಗಳನ್ನು ಶೇಕಡಾ 44 ರಷ್ಟು ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ತಲಾ 39 ಪ್ರತಿಶತದಷ್ಟು ಅಪರಾಧಿಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಆಮ್ ಆದ್ಮಿ ಪಾರ್ಟಿ (ಎಎಪಿ) ಕೇವಲ 14 ಪ್ರತಿಶತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಮೊದಲ ಮೂರು ಅಭ್ಯರ್ಥಿಗಳಲ್ಲಿ ಸಹಜನ್ವಾ, ಗೋರಖ್ಪುರದ ಬಿಎಸ್ಪಿ ಅಭ್ಯರ್ಥಿ, ಸುಧೀರ್ ಸಿಂಗ್ ಅವರು 26 ಪ್ರಕರಣಗಳನ್ನು ಹೊಂದಿದ್ದಾರೆ. ನಂತರ ಖಡ್ಡಾದಿಂದ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಅಭ್ಯರ್ಥಿ ಅಶೋಕ್ ಚೌಹಾಣ್ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.
ಕುಶಿನಗರ ಜಿಲ್ಲೆಯಲ್ಲಿ 19 ಪ್ರಕರಣಗಳು ದಾಖಲಾಗಿವೆ. 16 ಕ್ರಿಮಿನಲ್ ಪ್ರಕರಣಗಳು ಬಾಕಿಯಿರುವ ಸಿಎಂ ಯೋಗಿ ವಿರುದ್ಧ ಗೋರಖ್ಪುರದಿಂದ ಆಜಾದ್ ಸಮಾಜ ಪಕ್ಷದಿಂದ ಚಂದ್ರಶೇಖರ್ ರಾವನ್ ಸ್ಪರ್ಧಿಸಿದ್ದಾರೆ. ಆರನೇ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳು ಅತ್ಯಾಚಾರದ ಆರೋಪ ಎದುರಿಸುತ್ತಿದ್ದು, ಎಂಟು ಮಂದಿಯ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿವೆ.

ಹಣಬಲದ ವಿಷಯದಲ್ಲಿ, ಆರನೇ ಹಂತವು ಇತರರಿಗಿಂತ ಭಿನ್ನವಾಗಿಲ್ಲ. 38 ಪ್ರತಿಶತ ಕೋಟ್ಯಧಿಪತಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದ ಚುನಾವಣೆಯಲ್ಲಿ ಎಸ್ಪಿ ಶೇ.94, ಬಿಜೆಪಿ ಶೇ.81, ಬಿಎಸ್ಪಿ ಶೇ.77 ಮತ್ತು ಕಾಂಗ್ರೆಸ್ ಶೇ.46ರಷ್ಟು ಕೋಟ್ಯಧಿಪತಿಗಳನ್ನು ಕಣಕ್ಕಿಳಿಸಿದೆ. ಎಲ್ಲಾ ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತರ ಪೈಕಿ ಗೋರಖ್ಪುರದ ಚುಲ್ಲುಪರ್ನಿಂದ ಸ್ಪರ್ಧಿಸುತ್ತಿರುವ ಎಸ್ಪಿಯ ವಿನಯ್ ಶಂಕರ್ ತಿವಾರಿ 67 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ನಂತರ ಅಮೇಬ್ಕರ್ನಗರದಿಂದ ಬಿಎಸ್ಪಿಯ ರಾಕೇಶ್ ಪಾಂಡೆ 63 ಕೋಟಿ ಮತ್ತು ಬಾಲಿಯಾದಿಂದ ಅದೇ ಪಕ್ಷದ ಉಮಾಶಂಕರ್ ಸಿಂಗ್ 54 ಕೋಟಿ ಘೋಷಿತ ಆಸ್ತಿ ಹೊಂದಿದ್ದಾರೆ. ಈ ಹಂತದಲ್ಲಿ ಗರಿಷ್ಠ 57 ಪ್ರತಿಶತ ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ.
ಚುನಾವಣೆ ಪ್ರಯುಕ್ತ ಇಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಇಂದು ಕುಶಿನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಇಂದು ಕುಶಿನಗರದಲ್ಲಿ ಪ್ರಚಾರ ಮಾಡಲಿದ್ದಾರೆ. ಮಾರ್ಚ್ 3 ರಂದು ಚುನಾವಣೆ ನಡೆಯಲಿರುವ ಕುಶಿನಗರ ಜಿಲ್ಲೆಯು ಕುಶಿನಗರ, ಖಡ್ಡಾ, ಪದ್ರೌನಾ, ತಮ್ಕುಹಿ ರಾಜ್, ಫಾಜಿಲ್ನಗರ, ಹಟಾ ಮತ್ತು ರಾಮ್ಕೋಲಾಗಳ ಏಳು ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, 2017 ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿತ್ತು.












Click it and Unblock the Notifications