ಅಪರೂಪದ ಆಚರಣೆ: ಬಿಜೆಪಿ ಶಾಸಕನ ಮೇಲೆ ಮಣ್ಣಿನ ನೀರು ಎರಚಿದ ಮಹಿಳೆಯರು
ಗೋರಖ್ಪುರ ಜುಲೈ 14: ಮಹಾರಾಜ್ಗಂಜ್ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಯರ ತಂಡವೊಂದು ಸ್ಥಳೀಯ ಶಾಸಕ ಮತ್ತು ನಗರಪಾಲಿಕೆ ಅಧ್ಯಕ್ಷರ ಮೇಲೆ ಮಣ್ಣಿನ ನೀರನ್ನು ಹಾಕಿದ್ದಾರೆ. ಅಧಿಕ ಮಳೆಗೆಯಿಂದಾಗಿ ಶಾಸಕರು ಇಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಕಾರಣಕ್ಕೆ ಮಹಿಳೆಯರು ಕೋಪಗೊಂಡು ಮಣ್ಣಿನ ನೀರು ಎರಚಿರಬಹುದು ಎಂದು ಹಲವರು ಭಾವಿಸಬಹುದು. ಆದರೆ ಇದಕ್ಕೆ ಕಾರಣ ಬೇರೆನೇ ಇದೆ. ಇದಕ್ಕೆ ಕಾರಣ ಕೇಳಿದರೆ ನಿಮಗೆ ಆಶ್ಚರ್ಯ ಆಗೋದರಲ್ಲಿ ಅನುಮಾನವೇ ಇಲ್ಲ.
ಎಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು. ಆದರೆ, ಈ ಮಳೆಗೂ ಶಾಸಕರ ಮೇಲೆ ಮಣ್ಣಿನ ನೀರು ಹಾಕುವುದಕ್ಕೂ ಕಾರಣವಿದೆ. ಮಳೆ ದೇವರು ಇಂದ್ರನನ್ನು ಮೆಚ್ಚಿಸುವ ಮೂಲಕ ಸ್ಥಳೀಯ ಶಾಸಕರಿಗೆ ಇಲ್ಲಿನ ಮಹಿಳೆಯರು ಮಣ್ಣಿನ ನೀರನ್ನು ಎರಚಿದ್ದಾರೆ. ಈ ಮೂಲಕ ಧಾರ್ಮಿಕ ವಿಧಿ ವಿಧಾನ ಮಾಡಿದ್ದಾರೆ. ಊರಿನ ಜನ ಮೆಚ್ಚಿದ ವ್ಯಕ್ತಿಗೆ ಮಡೆಸ್ನಾನ ಮಾಡುವುದರಿಂದ ಈ ಪ್ರದೇಶಕ್ಕೆ ಮಳೆ ತರುವ ಮಳೆ ದೇವರಿಗೆ ಸಂತೋಷವಾಗುತ್ತದೆ ಎಂಬುದು ಈ ಭಾಗದ ಪ್ರಾಚೀನ ನಂಬಿಕೆ.
ಮಹಾರಾಜ್ಗಂಜ್ನ ಪಿಪರ್ಡೆಯುರಾ ಪ್ರದೇಶದ ಮಹಿಳೆಯರು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ಗೆ ಮಡೆ ಸ್ನಾನ ಮಾಡಿಸಿದ್ದಾರೆ. ''ನಗರದ ತಲೆಗೆ ಮಣ್ಣಿನ ಸ್ನಾನವು ಇಂದ್ರ ದೇವರಿಗೆ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯಾಗಿದೆ. ಮಳೆಯ ಕೊರತೆಯು ಭತ್ತದ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಕೆಲ ಬಾರಿ ಇಂದ್ರ ದೇವನನ್ನು ಮೆಚ್ಚಿಸಲು, ಮಕ್ಕಳು ಮಣ್ಣಿನಲ್ಲಿ ಸ್ನಾನ ಮಾಡುತ್ತಾರೆ ಮತ್ತು ಸ್ಥಳೀಯವಾಗಿ ಇದನ್ನು ಕಲ್ ಕಲೂಟಿ ಎಂದು ಕರೆಯಲಾಗುತ್ತದೆ" ಎಂದು ಮಹಿಳೆಯರಲ್ಲಿ ಒಬ್ಬರಾದ ಮುನ್ನಿದೇವಿ ಹೇಳಿದರು.
#WATCH | Women in Pipardeura area of Maharajganj in Uttar Pradesh throw mud at MLA believing this will bring a good spell of rainfall for the season pic.twitter.com/BMFLHDgYxb
— ANI UP/Uttarakhand (@ANINewsUP) July 13, 2022
ಶಾಸಕ ಕನೋಜಿಯ ಮತ್ತು ನಗರ ಪಾಲಿಕೆ ಅಧ್ಯಕ್ಷ ಜೈಸ್ವಾಲ್ ಮಳೆಗಾಗಿ ಕೆಸರು ಸ್ನಾನ ಮಾಡಲು ಸಂತಸದ ವಿಷಯ ಎಂದಿದ್ದಾರೆ. ಬಿಸಿಲಿನ ತಾಪದಿಂದ ಜನರು ಚಡಪಡಿಸುತ್ತಿದ್ದು, ಇಂದ್ರ ದೇವರನ್ನು ಮೆಚ್ಚಿಸಲು ಮಡೆಸ್ನಾನ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ನಗರದ ಮಹಿಳೆಯರು ಮಳೆಗಾಗಿ ಮಡೆ ಸ್ನಾನ ಮಾಡಿಸಿದ್ದಾರೆ ಎಂದು ಕನೋಜಿಯವರು ತಿಳಿಸಿದರು. ಮಹಿಳೆಯರು ಮಳೆ ದೇವರನ್ನು ಮೆಚ್ಚಿಸಲು ಈ ಪ್ರದೇಶದ ಪ್ರಾಚೀನ ಸಂಪ್ರದಾಯವನ್ನು ಅನುಸರಿಸುತ್ತಾರೆ ಎಂದು ಜೈಸ್ವಾಲ್ ಹೇಳಿದರು.

ಎಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮಹಾರಾಜ್ಗಂಜ್ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗದಂತೆ, ಮುಂದೆ ಬರಗಾಲವನ್ನು ತಪ್ಪಿಸಲು ಮಳೆರಾಯನನ್ನು ಮೆಚ್ಚಿಸಲು ಪೂಜೆ ಮಾಡಲಾಗುತ್ತದೆ.
Recommended Video
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications