ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲೇ ಏರ್‌ ಶೋ: ಕೇಂದ್ರಕ್ಕೆ ಎಚ್ಡಿಕೆ ಅಭಿನಂದನೆ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಲ್ಲೇ ನಡೆಸಲಾಗುತ್ತದೆ ಯಾವುದೇ ಕಾರಣಕ್ಕೂ ಸ್ಥಳಾಂತರವಿಲ್ಲ ಎಂದ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರಲ್ಲೇ ನಡೆಯಲಿದೆ ಏರ್‌ ಶೋ: ರಕ್ಷಣಾ ಇಲಾಖೆ ಸ್ಪಷ್ಟನೆ ಬೆಂಗಳೂರಲ್ಲೇ ನಡೆಯಲಿದೆ ಏರ್‌ ಶೋ: ರಕ್ಷಣಾ ಇಲಾಖೆ ಸ್ಪಷ್ಟನೆ

ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ಜರುಗಲಿದೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎನ್ನುವ ವಿಷಯ ಆತಂಕ ತಂದಿತ್ತು. ಪ್ರತಿಷ್ಠಿತ ಏರ್ ಷೋ ಇಲ್ಲಿಯೇ ಮುಂದುವರಿಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸುತ್ತೇನೆ.

ಫೆಬ್ರವರಿ 20ರಿಂದ ಐದು ದಿನಗಳ ಕಾಲ ಬೆಂಗಳೂರಲ್ಲಿ ಏರ್ ಶೋ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ನಡೆಯಲಿದೆ. ಇದು ನನಗೆ ಸಂತೋಷ ತಂದಿದೆ.

ಏರೋ ಇಂಡಿಯಾ ಸ್ಥಳಾಂತರ ವಿವಾದ: ಬೆಂಗಳೂರಲ್ಲೇ ನಡೆಯಲಿ ಪ್ರದರ್ಶನ ಏರೋ ಇಂಡಿಯಾ ಸ್ಥಳಾಂತರ ವಿವಾದ: ಬೆಂಗಳೂರಲ್ಲೇ ನಡೆಯಲಿ ಪ್ರದರ್ಶನ

HDK led delegation to meet PM for special package

ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ ಎನ್ನುವುದು ಆತಂಕವನ್ನು ಉಂಟು ಮಾಡಿತ್ತು. ಪ್ರತಿಷ್ಠಿತ ಏರ್‌ ಇಲ್ಲಿಯೇ ಮುಂದುವರೆಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಏರೋ ಇಂಡಿಯಾಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾಗೆ ದೇವೇಗೌಡರಿಂದ ಪತ್ರ! ಏರೋ ಇಂಡಿಯಾಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾಗೆ ದೇವೇಗೌಡರಿಂದ ಪತ್ರ!

ಈ ಮೊದಲು ಲಖ್ನೋಗೆ ಏರ್ ಇಂಡಿಯಾ ಸ್ಥಳಾಂತರವಾಗುತ್ತದೆ ಎನ್ನುವ ಮಾತು ಕೇಳಿ ಬಂದಾಗ ಎಚ್‌ಡಿಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವಿಗೆ ಪತ್ರ ಬರೆದಿದ್ದರು. ಬೆಂಗಳೂರು ಏರ್ ಶೋ ನಡೆಸಲು ಉತ್ತಮವಾದ ಸ್ಥಳವಾಗಿದ್ದು, ಎಲ್ಲಾ ಸೌಕರ್ಯಗಳು ಇಲ್ಲಿವೆ ಎಂದು ಪತ್ರದಲ್ಲಿ ತಿಳಿಸಿದ್ದರು.

ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ

11ನೇ ಎಡಿಷನ್ ನ ಏರ್‌ ಶೋ ಫೆಬ್ರವರಿ 2017ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ವಿವಿಧ ದೇಶಗಳ 549 ಮತ್ತು ಭಾರತದ 51 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದವು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

English summary
Chief minister H.D.Kumaraswamy led state government delegation will meet prime minister Narendra Modi to seek special package for flood and drought relief for the state. Former prime minister H.D.Devegowda and other MPs will take part in the delegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X