''ಕೊರೊನಾ ನಾಳೆ ಬಾ'' ಎಂದು ಮನೆಗಳ ಮುಂದೆ ಬೋರ್ಡ್ ಹಾಕಿದ ವ್ಯಕ್ತಿ
ವಾರಣಾಸಿ, ಮಾರ್ಚ್ 18: ಕೊರೊನಾ ಒಂದು ಕಡೆ ಎಲ್ಲರನ್ನು ಭಯ ಬೀಳಿಸಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೊರೊನಾಗೆನೇ ನಾಳೆ ಬಾ ಎಂದು ಹೇಳುತ್ತಿದ್ದಾನೆ. ಈ ಘಟನೆ ನಡೆದಿರುವುದು ವಾರಣಾಸಿಯಲ್ಲಿ.
ವಾರಣಾಸಿಯಲ್ಲಿ ಪುನೀತ್ ಮಿಶ್ರ ಎಂಬುವವರು ಮನೆಗಳ ಮುಂದೆ ಒಂದು ಬೋರ್ಡ್ ಹಾಕಿದ್ದಾರೆ. ಈ ಫಲಕ ಈಗ ಎಲ್ಲರ ಗಮನ ಸೆಳೆದಿದೆ. ದೊಡ್ಡ ಸುದ್ದಿ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಕಟ ಮಾಡಿದೆ. ಅದಕ್ಕೆ ಕಾರಣ ಕೊರೊನಾ ಬಗ್ಗೆ ಆತ ಹಾಕಿದ್ದ ಫಲಕ.
ಪುನೀತ್ ಮಿಶ್ರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವ ಆಸೆ ಹೊಂದಿದ್ದರು. ಹೀಗಾಗಿ, ಮನೆಗಳ ಮುಂದೆ ''ಒ ಕೊರೊನಾ ಕಲ್ ಅನಾ'' (ಒ ಕೊರೊನಾ ನಾಳೆ ಬಾ) ಎಂದು ಒಂದು ಬೋರ್ಡ್ ಹಾಕಿದರಂತೆ. ಕೊರೊನಾ ಬಗ್ಗೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಈ ರೀತಿ ಅರಿವು ಮೂಡಿಸುತ್ತಿದ್ದಾರಂತೆ.

ಮನೆ ಮುಂದೆ ಆ ಬೋರ್ಡ್ ನೋಡಿ ಕೆಲವರು ಫೋಟೋ ತೆಗೆದುಕೊಳ್ಳುತ್ತಾರೆ. ಆ ಬೋರ್ಡ್ ನೋಡುವ ಜನರಿಗೆ ಕೊರೊನಾ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಪುನೀತ್ ತಿಳಿಸಿದ್ದಾರೆ. ಕೊರೊನಾ ಭಾರತದಲ್ಲಿ ಹರಡುತ್ತಿದ್ದು, ಜನರು ಸುರಕ್ಷತೆಯಿಂದ ಇರಬೇಕು ಎಂದು ಪುನೀತ್ ಹೇಳುತ್ತಾರೆ.
''ಒ ಕೊರೊನಾ ಕಲ್ ಅನಾ'' (ಒ ಕೊರೊನಾ ನಾಳೆ ಬಾ) ಎಂದು ಫಲಕ ಹಾಕಲು ಬಾಲಿವುಡ್ನ 'ಸ್ತ್ರೀ' ಸಿನಿಮಾ ಪ್ರೇರಣೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ಆ ಸಿನಿಮಾದಲ್ಲಿ ''ಒ ಸ್ತ್ರೀ ಕಲ್ ಅನಾ..?'' ಎಂದು ಬರೆದಿತ್ತು.
ವಿಶ್ವದಲ್ಲಿ ಈವರೆಗೆ 8 ಸಾವಿರಕ್ಕೂ ಅಧಿಕ ಜನರು ಕೊರೊನಾದಿಂದ ಬಲಿಯಾಗಿದ್ದಾರೆ. ಭಾರತದ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications