ಸಂಸದೆಯಾಗಿ ಪ್ರಮಾಣ ಸ್ವೀಕರಿಸುವ ಮೊದಲೇ ನುಸ್ರತ್ ಮದುವೆ
ಕೋಲ್ಕತಾ, ಜೂನ್ 20 : ಪಶ್ಚಿಮ ಬಂಗಾಳದ ಬಸಿರ್ಹಾತ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ, ರೂಪದರ್ಶಿ ನುಸ್ರತ್ ಜಹಾನ್ ಅವರು ನಿಖಿಲ್ ಜೈನ್ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದು, ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
29 ವರ್ಷದ ನಟಿ, ರೂಪದರ್ಶಿ, ಸುಂದರಿ ಮತ್ತು ಇದೀಗ ಸಂಸದೆಯಾಗಿರುವ ನುಸ್ರತ್ ಜಹಾನ್ ಅವರು, ಟರ್ಕಿಯ ಬೋದ್ರಮ್ ಎಂಬ ನಗರದಲ್ಲಿ ಕುಟುಂಬದ ಸದಸ್ಯರು ಮತ್ತು ಕೆಲ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನುಸ್ರತ್ ಜಹಾನ್ ಅವರೊಂದಿಗೆ ಸ್ನೇಹಿತೆ ಮತ್ತು ಟಿಎಂಸಿಯಿಂದಲೇ ಜಾದವಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮತ್ತೊಬ್ಬ ನಟಿ ಮಿಮಿ ಚಕ್ರಬೊರ್ತಿ ಅವರು ಜೂನ್ 15ರಂದೇ ಬೋದ್ರಮ್ ಗೆ ತೆರಳಿದ್ದರು. ಮದುವೆ ಸಿಕ್ಸ್ತ್ ಸೆನ್ಸ್ ಕಪಲಂಕಾಯ ಹೋಟೆಲಿನಲ್ಲಿ ಸಾಂಪ್ರದಾಯಿಕವಾಗಿ ಜರುಗಿದೆ.

ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರಬೊರ್ತಿ ಅವರು ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿದ ದಿನ ಆಧುನಿಕ ದಿರಿಸಿನಲ್ಲಿ ಬಂದು ಎಲ್ಲ ಕಣ್ಣು ಕುಕ್ಕಿದ್ದರು. ಇಂಥ ಮಾಡ್ ಡ್ರೆಸ್ ನಲ್ಲಿ ಬರುವ ಬದಲು ಸಾಂಪ್ರದಾಯಿಕ ತೊಡುಗೆಯಲ್ಲಿ ಬರಲಿಕ್ಕಾಗುತ್ತಿರಲಿಲ್ಲವೆ ಎಂದು ಹಲವರು ಸಂಪ್ರದಾಯವಾದಿಗಳು ಅವರನ್ನು ಪ್ರಶ್ನಿಸಿದ್ದರು.
ಮದುವೆಯ ಕಾರಣದಿಂದ ಚಳಿಗಾಲದ ಅಧಿವೇಶನ ಆರಂಭವಾಗುವ ಮೊದಲೇ ನುಸ್ರತ್ ಮತ್ತು ಮಿಮಿ ಟರ್ಕಿಗೆ ತೆರಳಿರುವುದರಿಂದ ಇಬ್ಬರೂ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಕರ್ನಾಟಕದ ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರಮಾಣ ವಚನ ಸ್ವೀಕರಿಸದ ಇನ್ನೂ ಹಲವರ ಪಟ್ಟಿಗೆ ಇವರಿಬ್ಬರೂ ಸೇರಿದ್ದಾರೆ.
ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸದಿದ್ದರೇನಂತೆ, ನುಸ್ರತ್ ಜಹಾನ್ (ಇನ್ನು ಮುಂದೆ ನುಸ್ರತ್ ಜೈನ್) ಅವರು ಅಗ್ನಿಸಾಕ್ಷಿಯಾಗಿ ಉತ್ತಮ ವೈವಾಹಿಕ ಜೀವನ ನಡೆಸುವುದಾಗಿ, ಸಮಸ್ತ ಬಂಧುಗಳ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಬದುಕು ಉಜ್ವಲವಾಗಿರಲಿ.
ನುಸ್ರತ್ ಜಹಾನ್ ಅವರು ಬಿಜೆಪಿಯ ಸಯಂತನ್ ಘೋಷ್ ಅವರನ್ನು 3,50,369 ಮತಗಳ ಭಾರೀ ಅಂತರದಿಂದ ಬಸಿರ್ಹಾತ್ ಕ್ಷೇತ್ರದಲ್ಲಿ ಸೋಲಿಸಿದ್ದರು. ಮಿಮಿ ಚಕ್ರಬೊರ್ತಿ ಅವರು ಕೂಡ ಬಿಜೆಪಿಯ ಅಭ್ಯರ್ಥಿ ಅನುಪಮ್ ಹಜ್ರಾ ಅವರನ್ನು 2.9 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications