ಪಶ್ಚಿಮ ಬಂಗಾಳದ ಮೇಲೆ ಆಕ್ರಮಣ ಮಾಡಿದ ಅಂಫಾನ್! 12 ಸಾವು
ಕೋಲ್ಕತ್ತಾ, ಮೇ 20: ಅಂಫಾನ್ ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 12 ಜನ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಜನಿಸಿ, ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿರುವ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಅಟ್ಟಹಾಸ ಮೆರೆಯುತ್ತಿದೆ. 160 ರಿಂದ 180 ಕಿಲೋ ಮೀಟರ್ ನಲ್ಲಿ ಗಾಳಿ ಬೀಸುತ್ತಿದೆ.
ಬಾಂಗ್ಲಾದೇಶದಲ್ಲಿ 'ಅಂಫಾನ್' ಚಂಡಮಾರುತಕ್ಕೆ ಮೊದಲ ಬಲಿ
ಉತ್ತರ ಪರಗಣ ಹಾಗೂ ದಕ್ಷಿಣ ಪರಗಣ ಜಿಲ್ಲೆಯಲ್ಲೇ ಸುಮಾರು 10 ಜನ ಮೃತಪಟ್ಟಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಹೌರಾ, ಕೋಲ್ಕತ್ತಾ, ಪಶ್ಚಿಮ ಮಿಡ್ನಾಪುರ್, ಪೂರ್ವ ಮಿಡ್ನಾಪುರ್ನಲ್ಲಿ ಹೆಚ್ಚು ಹಾನಿ ಸಂಭವಿಸಿದೆ.
ಅಂಪೆನ್ನಿಂದ ಹಾನಿಯ ಬಗ್ಗೆ ಲೆಕ್ಕ ಹಾಕು ಕನಿಷ್ಠ ಒಂದು ವಾರ ಬೇಕು. ಈಗಾಗಲೇ ಕೋವಿಡ್ 19 ನಿಂದ ನಮಗೆ ತೀವ್ರ ತೊಂದರೆಯಾಗಿತ್ತು. ಈಗ ಮತ್ತೆ ಚಂಡಮಾರುತ ಮಾಡಿರುವ ಹಾನಿ ಕೋವಿಡ್ 19 ಗಿಂತ ಹತ್ತು ಪಟ್ಟು ದೊಡ್ಡದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕಲ್ಕತ್ತಾದಲ್ಲಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.