ಬಡವರ ನಿವೇಶನಕ್ಕೆ ವಾಸ ಯೋಗ್ಯವಲ್ಲದ ಜಾಗ ಗುರುತು: ಕಂದಾಯ ಅಧಿಕಾರಿಗಳಿಗೆ ಶಾಸಕಿ ಕ್ಲಾಸ್
ಕೋಲಾರ, ಅಕ್ಟೋಬರ್, 29: ಬಡವರಿಗೆ ನಿವೇಶನ ಮಂಜೂರು ಮಾಡುವ ವಿಷಯವಾಗಿ ಕಂದಾಯ ಇಲಾಖೆಯವರು ವಿವೇಚನೆ ರಹಿತವಾಗಿ ಕೆಲಸ ಮಾಡಿದ್ದಾರೆ. ಯೋಗ್ಯವಾದ ಜಾಗವನ್ನು ಆಯ್ಕೆ ಮಾಡದೆ, ಜನ ವಾಸ ಮಾಡಲು ಸಾಧ್ಯವಿಲ್ಲದ ಜಾಗವನ್ನು ಗುರ್ತಿಸಲಾಗಿದೆ ಎಂದು ಕೆಜಿಎಫ್ ಶಾಸಕಿ ಎಂ.ರೂಪಕಲಾ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಕಿಡಿಕಾರಿದರು.
ಅಜ್ಜಪಲ್ಲಿ ಗ್ರಾಮದ ಬಳಿ ಕೊಳಚೆ ಮಂಡಳಿ ನಿರ್ಮಾಣ ಮಾಡಲು ಹೊರಟಿರುವ ವಿವಾದಾತ್ಮಕ ಬಡಾವಣೆಯ ಸಂಬಂಧವಾಗಿ ದಲಿತ ಸಮರ ಸೇನೆ ಕಾರ್ಯಕರ್ತರು ಶನಿವಾರ ಶಾಸಕಿ ರೂಪಕಲಾ ಅವರನ್ನು ಗುದ್ದಲಿ ಪೂಜೆಗೆ ಆಹ್ವಾನಿಸಲು ಬಂದಾಗ, ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕಿ 'ಜನ ವಾಸ ಮಾಡಲು ಯೋಗ್ಯವಾದ ಜಾಗವನ್ನು ಸರಿಯಾಗಿ ಗುರುತಿಸಿಲ್ಲ. ಅಧಿಕಾರಿಗಳು ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಹಾಗೆ ಕಾಣುತ್ತಿದೆ ಎಂದರು.

ಐವತ್ತು ವರ್ಷಗಳಿಂದ ಕೆಜಿಎಫ್ ನಗರದಲ್ಲಿ ಬಡವರಿಗೆ ನಿವೇಶನ ಮಂಜೂರು ಆಗಿರಲಿಲ್ಲ. ಈಗ ನನ್ನ ಹೋರಾಟ ಫಲ ನೀಡಿದೆ. ನಗರದಲ್ಲಿ ರಾಜ್ಯ ಸರ್ಕಾರದ 1000 ಎಕರೆ ಜಾಗ ಇದೆ ಎಂದು ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಗಳು ಗುರುತಿಸಿರಲಿಲ್ಲ. ನಾನು ಜವಾಬ್ದಾರಿ ತೆಗೆದುಕೊಂಡ ಮೇಲೆ ಉದ್ಯೋಗ ಸೃಷ್ಟಿ ಮಾಡಲು ಬೆಮಲ್ನಿಂದ ವಾಪಸ್ ಪಡೆದ 979 ಎಕರೆ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಿಸಿದೆ.
ಈ ಜಾಗ ಕೈಗಾರಿಕೆ ಟೌನ್ ಶಿಪ್ ಎಂದು ಸಚಿವ ಸಂಪುಟದಲ್ಲಿ ನೋಟ್ ಆಗಿದೆ. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಗಮನಕ್ಕೆ ತಾರದೆ, ಆಶ್ರಯ ಯೋಜನೆಯಡಿ ಮನೆ ಕೊಡಲು ಸಾಧ್ಯವಿಲ್ಲ. ಕೆಲ ಫಲಾನುಭವಿಗಳನ್ನು ತಪ್ಪುದಾರಿಗೆ ಎಳೆಯಲಾಗಿದೆ ಎಂದು ಹೇಳಿದರು.
ಆಶ್ರಯ ಯೋಜನೆಯಡಿ 5000 ನಿವೇಶನ ಮಾಡಲು ಜಾಗ ಗುರುತಿಸಲಾಗಿದೆ. ಅದನ್ನು ಅಭಿವೃದ್ಧಿಪಡಿಸಲಾಗುವುದು. ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜಾಗದಲ್ಲಿ ನಿವೇಶನ ನೀಡುವುದಿಲ್ಲ. ಈಗಾಗಲೇ 8000 ಅರ್ಜಿಗಳು ನಗರಸಭೆಗೆ ಬಂದಿದೆ. ಅದರಲ್ಲಿ ಎಲ್ಲಾ ರೀತಿಯ ಬಡವರು ಇದ್ದಾರೆ. ಅಂತಹ ಕುಟುಂಬಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕೊಟ್ಟು ₹ 11 ಕೋಟಿ ಯೋಜನೆಯಲ್ಲಿ ಬಡಾವಣೆ ನಿರ್ಮಾಣ ಮಾಡುತ್ತೇವೆ.
ನನ್ನ ತಾಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿಯೇ ಫಲಾನುಭವಿಗಳ ಆಯ್ಕೆಯಾಗಬೇಕು. ಸರ್ಕಾರ ನನ್ನದೇ ಇದೆ. ನಾನು ಶಾಸಕಿಯಾಗಿದ್ದೇನೆ. ಕೇಂದ್ರ ಸರ್ಕಾರ ಯಾವುದಾದರೂ ಯೋಜನೆ ತರಲು ಯೋಚಿಸಿದ್ದರೆ, ನನ್ನ ಜೊತೆ ವ್ಯವಹಾರ ಮಾಡಬೇಕಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳು ತಪ್ಪು ಮಾಡಿದ್ದರೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ರೂಪಕಲಾ ಹೇಳಿದರು.
ಬಡವರಿಗೆ ಮನೆಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ನೀಡಬೇಕು. ನಗರದಿಂದ ಹತ್ತು ಕಿ.ಮೀ ದೂರದಲ್ಲಿ ನೀಡಬೇಕು. ಬಂಗಾರಪೇಟೆ ಕ್ಷೇತ್ರದ ಗಡಿಯಲ್ಲಿ ನೀಡಲು ಆಗುವುದಿಲ್ಲ. ಕೆಲವು ಜಾಗಗಳು ಕೆಲವು ಯೋಜನೆಗೆ ಮೀಸಲಾಗಿರುತ್ತದೆ. ಅಂತಹ ಯೋಜನೆಗಳಿಗೆ ಮಾತ್ರ ಮೀಸಲು ಇಡಲು ಸಾಧ್ಯ. ಜಿಲ್ಲಾಧಿಕಾರಿ ಮಾಡಿರುವ ಪತ್ರ ವ್ಯವಹಾರಕ್ಕೆ ನಾನು ಜವಾಬ್ದಾರಲ್ಲ. ಅವರೇ ಇದಕ್ಕೆ ಉತ್ತರ ಕೊಡಬೇಕು.
ನಾನು ಮಾಡುವ ಕೆಲಸ ಶಾಶ್ವತವಾಗಿರುತ್ತದೆ. ಶೇ 80 ರಷ್ಟು ಕೈಗಾರಿಕೆಗೆ ಮೀಸಲು ಇದೆ. ಶೇ 20 ರಷ್ಟು ಸಮಗ್ರ ಟೌನ್ಶಿಪ್ ಆಗುತ್ತದೆ. ಈಗಾಗಲೇ ಸಚಿವ ಸಂಪುಟದಲ್ಲಿ ನೋಟ್ ಆಗಿರುವುದರಿಂದ, ಈ ಯೋಜನೆ ಜಾರಿಗೆ ಬಂದೇ ಬರುತ್ತದೆ. ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಈ ಜಾಗದಲ್ಲಿ ಒಂದು ಇಂಚು ಜಾಗ ಕೂಡ ಅನ್ಯ ಯೋಜನೆಗೆ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಸ್ಲಂ ಬೋರ್ಡ್ ಅವರು ಮನೆ ಕಟ್ಟಲು ಸಿದ್ಧರಾಗಿದ್ದಾರೆ. ನೀವು ಗುದ್ದಲಿ ಪೂಜೆಗೆ ಸಮಯ ನೀಡಿದರೆ ಬೋರ್ಡ್ ಆಯುಕ್ತರು ಕಾಮಗಾರಿ ಮಾಡಲು ಸಿದ್ಧ ಎಂದು ಹೇಳಿದ್ದಾರೆ ಎಂದು ಸಂಘಟನೆ ಮುಖಂಡರು ಹೇಳಿದಾಗ, ಕುಪಿತಗೊಂಡ ಶಾಸಕಿ, ಮೂಲಭೂತ ಸೌಕರ್ಯ ಇಲ್ಲದ ಜಾಗದಲ್ಲಿ ಕೊಡಲು ಸಾಧ್ಯವಿಲ್ಲ. ಸ್ಲಂ ಬೋರ್ಡ್ ಇದುವರೆವಿಗೂ ನಗರಸಭೆ ಜೊತೆಗೆ ಪತ್ರ ವ್ಯವಹಾರ ಮಾಡಿಲ್ಲ.
ಜಾಗ ವಾಸಕ್ಕೆ ಯೋಗ್ಯವಿದೆಯೇ ಎಂಬುದರ ಬಗ್ಗೆ ನಗರಸಭೆಗೆ ಅಭಿಪ್ರಾಯ ಕೇಳಿಲ್ಲ. ವ್ಯವಸ್ಥೆ ಉಲ್ಲಂಘನೆ ಮಾಡಲಾಗಿದೆ. ನಗರದಲ್ಲಿ ಹತ್ತು ಸಾವಿರ ಕುಟುಂಬಗಳಿಗೆ ನಿವೇಶನ ನೀಡಬೇಕೆಂಬ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ. ನನ್ನನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದರೆ ನಡೆಯಲ್ಲ ಎಂದರು.
ನಂತರ ಸಂಘಟನೆ ಮುಖಂಡೆ ಪವಿತ್ರಾ ಆಯುಕ್ತ ಪವನ್ಕುಮಾರ್ ಜೊತೆ ಚರ್ಚೆ ನಡೆಸಿ, ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications