37 ಬೆಂಬಲಿಗರೊಂದಿಗೆ ಆಂಧ್ರಕ್ಕೆ ಹೊರಟಿದ್ದ ಶಾಸಕನಿಗೆ ಪೊಲೀಸರ ಶಾಕ್
ಕೋಲಾರ, ಏಪ್ರಿಲ್ 15: 37 ಮಂದಿ ಬೆಂಬಲಿಗರೊಂದಿಗೆ 6 ಕಾರುಗಳಲ್ಲಿ ಆಂಧ್ರಕ್ಕೆ ತೆರಳುತ್ತಿದ್ದ ಶಾಸಕನನ್ನು ಪೊಲೀಸರು ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದಿದ್ದಾರೆ.
ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೆಂಗಳೂರಿನಿಂದ 39 ಜನ ಬೆಂಬಲಿಗರೊಂದಿಗೆ 6 ಕಾರುಗಳಲ್ಲಿ ಕನಿಗಿರಿ ಶಾಸಕ ಮಧುಸೂಚನ್ ಯಾದವ್ ಆಂಧ್ರಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಕೋಲಾರ - ಆಂಧ್ರ ಗಡಿಭಾಗದ ಚಿಕಿಲುಬೈಲ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆಹಿಡಿದಿದ್ದಾರೆ.

ಈ ಸಮಯ ಶಾಸಕ ಮಧುಸೂದನ್ ಯಾದವ್ ಹಾಗೂ ಆಂಧ್ರ ಪೊಲೀಸರ ನಡುವೆ ವಾಗ್ವಾದವೂ ನಡೆದಿದೆ. ಕರ್ನಾಟಕದಿಂದ ಬಂದವರನ್ನು ಒಳಗೆ ಬಿಡುವುದಿಲ್ಲವೆಂದು ಆಂಧ್ರ ಪೋಲಿಸರು ಪಟ್ಟು ಹಿಡಿದಿದ್ದು, ಪೊಲೀಸರ ಜೊತೆ ಗಲಾಟೆ ನಡೆಸಿದ್ದಾರೆ. ನಂತರ ಕಾರು ಚಲಾಯಿಸಿಕೊಂಡು ಮಧುಸೂದನ್ ಹೊರಟಿದ್ದಾರೆ. ಚೆಕ್ ಪೋಸ್ಟ್ ಬಳಿಯೇ ಬೆಂಬಲಿಗರ ವಾಹನಗಳು ನಿಂತುಕೊಂಡಿವೆ.












Click it and Unblock the Notifications