Get Updates
Get notified of breaking news, exclusive insights, and must-see stories!

ಹಾಸನದಿಂದ ಬಂದು ಬಂಗಾರಪೇಟೇಲಿ ಡಕಾಯಿತಿ ಮಾಡಿದ್ದು ಏಕೆ?

ಎಲ್ಲ ಆರೋಪಿಗಳು ಹಾಸನದವರು. ಅಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದರು. ಇದೇ ಮೊದಲ ಸಲ ಡಕಾಯಿತಿ ಮಾಡಿದ್ದರು. ರಾಮಕೃಷ್ಣಪ್ಪ ಅವರ ಮನೆಯಲ್ಲಿ ₹ 80 ಕೋಟಿ ಕಪ್ಪು ಹಣವಿದೆ ಎಂದು ಪ್ರಮುಖ ಆರೋಪಿ ಪ್ರೇಮಾ ಅವರಿಗೆ ಯಾರೋ ಹೇಳಿದ್ದರು.

ಬಂಗಾರಪೇಟೆ, ನವೆಂಬರ್ 2: ಇದೊಂಥರ ವಿಚಿತ್ರ ಪ್ರಕರಣ. ಇಲ್ಲಿನ ರಾಮಕೃಷ್ಣಪ್ಪ ಅವರ ಮನೆಯಲ್ಲಿ ಎಂಬತ್ತು ಕೋಟಿ ಇದೆ ಎಂದು ಅದ್ಯಾರು ಈ ಆರೋಪಿಗಳಿಗೆ ಹೇಳಿದರೋ ಹಾಸನದಿಂದ ಬಂಗಾರಪೇಟೆವರೆಗೆ ಬಂದು ಡಕಾಯಿತಿ ಮಾಡಿದ್ದ ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಕಮ್ಮದಿನ್ನೆಯ ರಾಮಕೃಷ್ಣಪ್ಪ ಅವರ ತೋಟದ ಮನೇಲಿ ಹಣ-ಆಭರಣ ದೋಚಿದ್ದ ಪ್ರೇಮಾ, ಪ್ರತಾಪ್, ಅನಿಲ್ ಕುಮಾರ್, ನಾಗೇಗೌಡ, ಹರೀಶ್, ಸುನಿಲ್ ಕುಮಾರ್, ರಘು, ಮಧು, ಮಾರಿಮುತ್ತು, ಸಂತೋಷ್ ಹಾಗೂ ಆರ್.ಮಂಜುನಾಥ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೂ ಐವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ.[ಹಾವು ಕಡಿದು ಮಗಳು, ಹೃದಯಾಘಾತದಿಂದ ತಾಯಿ ಸಾವು]

crime

ಎಲ್ಲ ಆರೋಪಿಗಳು ಹಾಸನದವರು. ಅಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದರು. ಇದೇ ಮೊದಲ ಸಲ ಡಕಾಯಿತಿ ಮಾಡಿದ್ದರು. ರಾಮಕೃಷ್ಣಪ್ಪ ಅವರ ಮನೆಯಲ್ಲಿ ₹ 80 ಕೋಟಿ ಕಪ್ಪು ಹಣವಿದೆ ಎಂದು ಪ್ರಮುಖ ಆರೋಪಿ ಪ್ರೇಮಾ ಅವರಿಗೆ ಯಾರೋ ಹೇಳಿದ್ದರು. ಈ ಹಣ ದೋಚಬೇಕು ಎಂದು ಯೋಜನೆ ರೂಪಿಸಿದ ಆಕೆ, ತನ್ನ ಗಂಡ ಇತರರ ಗುಂಪು ಮಾಡಿಕೊಂಡು ಸೆ.19ರಂದು ದರೋಡೆಗೆ ಪ್ರಯತ್ನಿಸಲಾಗಿತ್ತು.

ಆದರೆ, ರಾಮಕೃಷ್ಣಪ್ಪ ಅವರ ಮನೇಲಿ ನಾಯಿಗಳು ಇದ್ದವು. ಆದ್ದರಿಂದ ದರೋಡೆ ವಿಫಲವಾಗಿತ್ತು. 4 ದಿನಗಳ ನಂತರ ಮತ್ತೆ ಬಂದ ಈ ತಂಡ ನಾಯಿಗಳಿಗೆ ಮದ್ದು ಹಾಕಿ, ಪ್ರಜ್ಞೆ ತಪ್ಪಿಸಿ ಮನೆ ಒಳಗೆ ಹೋಗಿತ್ತು. ಕೋಟಿಲಿಂಗ ದರ್ಶನಕ್ಕೆ ಬಂದಿದ್ವಿ. ದಾರಿ ತಪ್ಪಿಹೋಯಿತು. ಕುಡಿಯಲು ನೀರು ಕೊಡಿ ಎಂದು ಮನೆಯವರನ್ನು ಕೇಳಿತ್ತು.[ಹುಬ್ಬಳ್ಳಿಯಲ್ಲಿ ಎಟಿಎಂ ದರೋಡೆ, ಇನ್ನಿತರ ಕ್ರೈಂ ಸುದ್ದಿಗಳು]

ಮನೆ ಮಾಲೀಕರು ಬಾಗಿಲು ತೆಗೆದ ಬಳಿಕ ಅವರು ಹಾಗೂ ಮನೆಯವರ ಕೈ-ಕಾಲು ಕಟ್ಟಿಹಾಕಿ ಚಾಕು ತೋರಿಸಿ ₹ 5 ಲಕ್ಷ ನಗದು 197 ಗ್ರಾಂ ಚಿನ್ನ ದೋಚಿದ್ದರು. ಎಲ್ಲ ಆರೋಪಿಗಳನ್ನು ಹಾಸನದಲ್ಲೇ ಬಂಧಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+