ಹಾಸನದಿಂದ ಬಂದು ಬಂಗಾರಪೇಟೇಲಿ ಡಕಾಯಿತಿ ಮಾಡಿದ್ದು ಏಕೆ?
ಎಲ್ಲ ಆರೋಪಿಗಳು ಹಾಸನದವರು. ಅಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದರು. ಇದೇ ಮೊದಲ ಸಲ ಡಕಾಯಿತಿ ಮಾಡಿದ್ದರು. ರಾಮಕೃಷ್ಣಪ್ಪ ಅವರ ಮನೆಯಲ್ಲಿ ₹ 80 ಕೋಟಿ ಕಪ್ಪು ಹಣವಿದೆ ಎಂದು ಪ್ರಮುಖ ಆರೋಪಿ ಪ್ರೇಮಾ ಅವರಿಗೆ ಯಾರೋ ಹೇಳಿದ್ದರು.
ಬಂಗಾರಪೇಟೆ, ನವೆಂಬರ್ 2: ಇದೊಂಥರ ವಿಚಿತ್ರ ಪ್ರಕರಣ. ಇಲ್ಲಿನ ರಾಮಕೃಷ್ಣಪ್ಪ ಅವರ ಮನೆಯಲ್ಲಿ ಎಂಬತ್ತು ಕೋಟಿ ಇದೆ ಎಂದು ಅದ್ಯಾರು ಈ ಆರೋಪಿಗಳಿಗೆ ಹೇಳಿದರೋ ಹಾಸನದಿಂದ ಬಂಗಾರಪೇಟೆವರೆಗೆ ಬಂದು ಡಕಾಯಿತಿ ಮಾಡಿದ್ದ ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಕಮ್ಮದಿನ್ನೆಯ ರಾಮಕೃಷ್ಣಪ್ಪ ಅವರ ತೋಟದ ಮನೇಲಿ ಹಣ-ಆಭರಣ ದೋಚಿದ್ದ ಪ್ರೇಮಾ, ಪ್ರತಾಪ್, ಅನಿಲ್ ಕುಮಾರ್, ನಾಗೇಗೌಡ, ಹರೀಶ್, ಸುನಿಲ್ ಕುಮಾರ್, ರಘು, ಮಧು, ಮಾರಿಮುತ್ತು, ಸಂತೋಷ್ ಹಾಗೂ ಆರ್.ಮಂಜುನಾಥ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೂ ಐವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ.[ಹಾವು ಕಡಿದು ಮಗಳು, ಹೃದಯಾಘಾತದಿಂದ ತಾಯಿ ಸಾವು]
ಎಲ್ಲ ಆರೋಪಿಗಳು ಹಾಸನದವರು. ಅಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದರು. ಇದೇ ಮೊದಲ ಸಲ ಡಕಾಯಿತಿ ಮಾಡಿದ್ದರು. ರಾಮಕೃಷ್ಣಪ್ಪ ಅವರ ಮನೆಯಲ್ಲಿ ₹ 80 ಕೋಟಿ ಕಪ್ಪು ಹಣವಿದೆ ಎಂದು ಪ್ರಮುಖ ಆರೋಪಿ ಪ್ರೇಮಾ ಅವರಿಗೆ ಯಾರೋ ಹೇಳಿದ್ದರು. ಈ ಹಣ ದೋಚಬೇಕು ಎಂದು ಯೋಜನೆ ರೂಪಿಸಿದ ಆಕೆ, ತನ್ನ ಗಂಡ ಇತರರ ಗುಂಪು ಮಾಡಿಕೊಂಡು ಸೆ.19ರಂದು ದರೋಡೆಗೆ ಪ್ರಯತ್ನಿಸಲಾಗಿತ್ತು.
ಆದರೆ, ರಾಮಕೃಷ್ಣಪ್ಪ ಅವರ ಮನೇಲಿ ನಾಯಿಗಳು ಇದ್ದವು. ಆದ್ದರಿಂದ ದರೋಡೆ ವಿಫಲವಾಗಿತ್ತು. 4 ದಿನಗಳ ನಂತರ ಮತ್ತೆ ಬಂದ ಈ ತಂಡ ನಾಯಿಗಳಿಗೆ ಮದ್ದು ಹಾಕಿ, ಪ್ರಜ್ಞೆ ತಪ್ಪಿಸಿ ಮನೆ ಒಳಗೆ ಹೋಗಿತ್ತು. ಕೋಟಿಲಿಂಗ ದರ್ಶನಕ್ಕೆ ಬಂದಿದ್ವಿ. ದಾರಿ ತಪ್ಪಿಹೋಯಿತು. ಕುಡಿಯಲು ನೀರು ಕೊಡಿ ಎಂದು ಮನೆಯವರನ್ನು ಕೇಳಿತ್ತು.[ಹುಬ್ಬಳ್ಳಿಯಲ್ಲಿ ಎಟಿಎಂ ದರೋಡೆ, ಇನ್ನಿತರ ಕ್ರೈಂ ಸುದ್ದಿಗಳು]
ಮನೆ ಮಾಲೀಕರು ಬಾಗಿಲು ತೆಗೆದ ಬಳಿಕ ಅವರು ಹಾಗೂ ಮನೆಯವರ ಕೈ-ಕಾಲು ಕಟ್ಟಿಹಾಕಿ ಚಾಕು ತೋರಿಸಿ ₹ 5 ಲಕ್ಷ ನಗದು 197 ಗ್ರಾಂ ಚಿನ್ನ ದೋಚಿದ್ದರು. ಎಲ್ಲ ಆರೋಪಿಗಳನ್ನು ಹಾಸನದಲ್ಲೇ ಬಂಧಿಸಲಾಗಿದೆ.