ಕ್ರೀಡಾಪಟುಗಳಿಗೆ ಕೊಹ್ಲಿ-ಸಾನಿಯಾ ಸಲಹೆ ಏನು?
ಬೆಂಗಳೂರು, ಸೆಪ್ಟೆಂಬರ್. 20 : 'ಕ್ರೀಡಾಪಟುಗಳೇ ಯಾವ ಕಾರಣಕ್ಕೂ ಜಂಕ್ ಫುಡ್ ತಿನ್ನಬೇಡಿ, ಇದು ನಿಮ್ಮ ವೃತ್ತಿ ಬದುಕಿಗೆ ಮಾರಕವಾಗಬಹುದು' ಹೀಗೆಂದು ಸಲಹೆ ನೀಡಿದ್ದು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ.
ಕ್ರೀಡಾಪಟು ಸೇವಿಸುವ ಆಹಾರದ ಮೇಲೆ ಸದಾ ನಿಗಾ ಇರಿಸಿಕೊಂಡಿರುಬೇಕು. ಜಂಕ್ ಫುಡ್ ಹತ್ತಿರವೂ ಸುಳಿಯಬಾರದು, ಕೆಎಫ್ ಸಿ ಅಂತೂ ಬೇಡವೇ ಬೇಡ ಎಂದು ಕೊಹ್ಲಿ ಹೇಳಿದರು.[ಟಿ20 ದಾಖಲೆ ರೇಸಿನಲ್ಲಿ ವಿರಾಟ್ ಕೊಹ್ಲಿ, ರೈನಾ]
ಕಳೆದ ಅನೇಕ ವರ್ಷಗಳಿಂದ ಆಹಾರದಲ್ಲಿ ಕಟ್ಟು ನಿಟ್ಟು ಅಭ್ಯಾಸ ಮಾಡಿಕೊಂಡು ಬಂದಿರುವುದರಿಂದಲೇ ಫಿಟ್ ನೆಸ್ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಕ್ರೀಡಾಪಟುಗಳು ಜಂಕ್ ಫುಡ್ ನಿಂದ ದೂರ ಉಳಿದಷ್ಟು ಒಳ್ಳೆಯದು ಎಂದು ಹೇಳಿದರು.[ಮಿರ್ಜಾ-ಹಿಂಗಿಸ್ ಜೋಡಿ, ಯುಎಸ್ ಓಪನ್ನಲ್ಲೂ ಮೋಡಿ]
ಬೆಂಗಳೂರಿನಲ್ಲಿ ಅಡಿದಾಸ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಕ್ರೀಡಾ ತಾರೆಗಳು ಭಾಗವಹಿಸಿದ್ದರು. ಒಂದೇ ವರ್ಷದಲ್ಲಿ 2 ಗ್ರ್ಯಾಂಡ್ ಸ್ಲಾಂ ಗೆದ್ದಿರುವುದು ವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಕನಸು ಹೊಂದಿದ್ದು ಅಭ್ಯಾಸ ಮಾಡುತ್ತಿದ್ದೇನೆ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದರು.

ಮಕ್ಕಳೊಂದಿಗೆ ಆಟ
ಕ್ರೀಡಾ ಶೋ ರೂಂ ಉದ್ಘಾಟಿಸಿದ ತಾರೆಗಳು ಮಕ್ಕಳೊಂದಿಗೆ ಕ್ರಿಕೆಟ್ ಮತ್ತು ಟೆನಿಸ್ ಆಡಿ ಸಂಭ್ರಮಿಸಿದರು. ದಕ್ಷಿಣಾ ಆಫ್ರಿಕಾ ವಿರುದ್ಧದ ಸರಣಿಗೆ ಕೊಹ್ಲಿ ಸಿದ್ಧರಾಗುತ್ತಿದ್ದರೆ, ಮಾರ್ಟಿನಾ ಹಿಂಗೀಸ್ ಜತೆಗೂಡಿ ಗ್ರಾಂಡ್ ಸ್ಲಾಂ ಬಾಚಿಕೊಂಡ ಖುಷಿಯಲ್ಲಿ ಸಾನಿಯಾ ಮಿರ್ಜಾ ಇದ್ದಾರೆ.

ಪೋಸ್ ನೀಡಿದ್ದು ಹೀಗೆ
ವಿರಾಟ್ ಕೊಹ್ಲಿ, ಸಾನಿಯಾ ಮಿರ್ಜಾ ಜತೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಮತ್ತು ಕರ್ನಾಟಕದ ಕ್ರಿಕೆಟಿಗ ಕೆ ಎಲ್ ರಾಹುಲ್.

ಸಾನಿಯಾ ಆಟೊಗ್ರಾಫ್
ಬೆಂಗಳೂರಿಗೆ ಆಗಮಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದ ಆಟೊಗ್ರಾಫ್ ಪಡೆದು ಪುಳಕಿತರಾದ ಅಭಿಮಾನಿಗಳು.

ನಾವೇನು ಕಮ್ಮಿ?
ವಿರಾಟ್ ಕೊಹ್ಲಿ ಅವರೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಅಂಧ ವಿದ್ಯಾರ್ಥಿ ನಾವೇನು ಕಮ್ಮಿ ಎಂಬಂತೆ ಬೌಲಿಂಗ್ ಮಾಡಿದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications