ಕರಾವಳಿಯಲ್ಲಿ ಕ್ರೂಸ್ ಬೋಟ್ ಪ್ರವಾಸೋದ್ಯಮ: ಕಾರವಾರ ಮತ್ತು ಮಂಗಳೂರಿನಲ್ಲಿ ಮೊದಲ ಪ್ರಯೋಗ..!
ಕಾರವಾರ, ನವೆಂಬರ್ 10: ರಾಜ್ಯದ ಕರಾವಳಿ ತೀರಗಳತ್ತ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಅದರಲ್ಲಿಯೂ ಉತ್ತರ ಕನ್ನಡ ಹಾಗೂ ಮಂಗಳೂರು ಕಡಲತೀರಗಳಲ್ಲಿ ಕೈಗೊಂಡಿರುವ ಕೆಲ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ಇದೀಗ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಕ್ರೂಸ್ ಬೋಟ್ ಪ್ರವಾಸೋದ್ಯಮ ಪ್ರಾರಂಭಿಸುವ ಬಗ್ಗೆ ಹೇಳಿಕೆ ನೀಡಿದ್ದು ಕರಾವಳಿ ತೀರಗಳು ಮತ್ತಷ್ಟು ಪ್ರವಾಸಿಗರ ಆಕರ್ಷಣೆಗೆ ಒಳಗಾಗುವ ಭರವಸೆ ಮೂಡಿದೆ.

ನೆರೆಯ ರಾಜ್ಯ ಗೋವಾ ಪ್ರವಾಸೋದ್ಯಮದ ಮೂಲಕವೇ ದೇಶ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಕಡಲತೀರಗಳ ಗೋವಾ ಸೋಬಗು ಹೆಚ್ಚಿಸಲು ಕಾರಣವಾಗಿದೆ. ಆದರೆ ಗೋವಾಗಿಂತಲೂ ಅತಿ ಹೆಚ್ಚು ಕಡಲತೀರಗಳು ರಾಜ್ಯದಲ್ಲಿದ್ದರೂ ಕೂಡ ಈವರೆಗೂ ಗೋವಾ ರೀತಿ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಸಾಧ್ಯವಾಗಿಲ್ಲ. ಆದರೆ ಕಳೆದ ಕೆಲ ದಶಕಗಳಿಂದ ರಾಜ್ಯದ ಕಡಲತೀರಗಳಲ್ಲಿಯೂ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ.
ಅದರಲ್ಲಿಯೂ ಪ್ರವಾಸಿಗರ ತವರೂರಿನಂತಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ಸಾಕಷ್ಟು ಜಲಸಾಹಸಿ ಚಟುವಟಿಕಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ನೇತ್ರಾಣಿ ಸ್ಕೂಬಾ ಅಡ್ವೆಂಚರ್ ಪ್ರಮುಖ ಆಕರ್ಷಣೆಯಾಗಿದೆ. ಗೋಕರ್ಣ, ಹೊನ್ನಾವರದ ಇಕೋ ಬೀಚ್, ಕಾರವಾರದ ಟ್ಯಾಗೋರ ಕಡಲತೀರ, ಮಾಜಾಳಿ ಕಪ್ಪು ಮರಳಿನ ಕಡಲತೀರಗಳು ಪ್ರವಾಸಿಗರ ಪಾಲಿಗೆ ಹಾಟ್ಸ್ ಫೆವರೇಟ್ ಆಗುತ್ತಿವೆ.
ಆದರೆ ಇದೀಗ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಮಂಕಾಳ ವೈದ್ಯ ಅವರು ಬೆಂಗಳೂರಿನಲ್ಲಿ ಕರಾವಳಿ ಜಿಲ್ಲೆಯ ಜಿಲ್ಲಾ ಉಸ್ತುವಾರಿಗಳು ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ರಾಜ್ಯದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕಾರವಾರ ಮತ್ತು ಮಂಗಳೂರಿನಲ್ಲಿ ಮೊದಲು ಪ್ರಾರಂಭಿಸಿ ಬಳಿಕ ಇತರೆಡೆಯೂ ಪ್ರಾರಂಭಿಸುವ ಬಗ್ಗೆ ತಿಳಿಸಿದ್ದಾರೆ.
ಇನ್ನೂ ಕೂಡ ಕ್ರೂಸ್ ಪ್ರವಾಸೋದ್ಯಮ ಯೋಜನೆ ರೂಪುರೇಷ, ಅನುದಾನ, ಸಂಭಾವ್ಯ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಕ್ರೂಸ್ ಬಂದರಿನಲ್ಲಿ ನಿಲ್ಲಿಸಲು ಮತ್ತು ಮೂಲಸೌಕರ್ಯ ವೆಚ್ಚವಾಗಿ 1 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಈಗಾಗಲೇ ಖಾಸಗಿಯಾಗಿ ಕೆಲ ಕ್ರೂಸ್ ಬೋಟ್ ಪ್ರವಾಸೋದ್ಯಮ ನಡೆಸಲಾಗುತ್ತಿದೆ. ಆದರೆ ಇದನ್ನು ಇನ್ನಷ್ಟು ಹೆಚ್ಚಿಸುವುದರಿಂದ ನೆರೆಯ ಗೋವಾದಲ್ಲಿರುವಂತೆ ರಾಜ್ಯದಲ್ಲಿಯೂ ಪ್ರವಾಸೋದ್ಯಮ ಉತ್ತುಂಗಕ್ಕೆರಿಸುವ ಅವಕಾಶಗಳು ಲಭ್ಯವಾಗಲಿದೆ ಎನ್ನಲಾಗುತ್ತಿದೆ.
ಇನ್ನು ಸಭೆಯಲ್ಲಿ ಮೀನುಗಾರಿಕಾ ಬೋಟ್ಗಳಿಗೆ ಡೀಸೆಲ್ನ ಮೇಲಿನ ಮಿತಿಯನ್ನು ತಿಂಗಳಿಗೆ 1.5 ಲಕ್ಷ ಕಿಲೋ ಲೀಟರ್ನಿಂದ 2 ಲಕ್ಷ ಕಿಲೋ ಲೀಟರ್ಗೆ ಹೆಚ್ಚಿಸಲು ಮತ್ತು ಪ್ರತಿ ಲೀಟರ್ಗೆ 35 ರೂ ಸಬ್ಸಿಡಿಯೊಂದಿಗೆ ತಿಂಗಳಿಗೆ 200 ಲೀಟರ್ಗಳವರೆಗೆ ಸೀಮೆಎಣ್ಣೆ ನೀಡುವುದನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯ ಹೇಳಿದರು. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅದರ ಸೀಮೆಎಣ್ಣೆ ಕೋಟಾವನ್ನು ಮಂಜೂರು ಮಾಡದಿರುವುದರಿಂದ, ರಾಜ್ಯ ಸರ್ಕಾರವು ಸಬ್ಸಿಡಿ ಬಿಲ್ಗಳನ್ನು ಪಾವತಿಸುತ್ತಿದೆ ಎಂದು ಅವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.
ಮೀನು ಮಾರಾಟಕ್ಕೆ ವಾಹನಗಳನ್ನು ಒದಗಿಸುವ ಸರ್ಕಾರದ ಯೋಜನೆಗೆ ಚಾಲನೆ ನೀಡುವ ಕುರಿತು ಚರ್ಚೆ ನಡೆಸಲಾಯಿತು. ಮೀನು ಮಾರಾಟಗಾರರಾಗಲು ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿದ ಜನರಿಗೆ ಮೀನು ಮಾರಾಟಕ್ಕಾಗಿ ನಾವು 150 ಎಲೆಕ್ಟ್ರಿಕ್ ವಾಹನಗಳನ್ನು ಪ್ರಾರಂಭಿಸುತ್ತೇವೆ. 150 ವಾಹನಗಳನ್ನು ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ನೀಡಲಾಗುವುದು ಮತ್ತು ನಂತರ ಕರ್ನಾಟಕದ ಇತರ ಭಾಗಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ವಿಶ್ವ ಮೀನುಗಾರಿಕಾ ದಿನದ ನೆನಪಿಗಾಗಿ ನವೆಂಬರ್ 21 ರಂದು ಈ ಯೋಜನೆಯನ್ನು ಸಾಂಕೇತಿಕವಾಗಿ ಪ್ರಾರಂಭಿಸಲಾಗುವುದು, ಸಿಎಂ ಮತ್ತು ಡಿಸಿಎಂ ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ವೈದ್ಯ ಹೇಳಿದರು.
ಯೋಜನೆಯ ಪ್ರಕಾರ, ಸಾಮಾನ್ಯ ವರ್ಗದ ಮಾರಾಟಗಾರರು 2 ಲಕ್ಷ ರೂಪಾಯಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದವರು 1.5 ಲಕ್ಷವನ್ನು ಠೇವಣಿಯಾಗಿ ಮತ್ತು 3,000 ರೂಪಾಯಿ ನಿರ್ವಹಣೆ ಶುಲ್ಕವಾಗಿ ಎರಡು ವರ್ಷಗಳ ಅವಧಿಗೆ ಮೀನುಗಾರಿಕೆ ಇಲಾಖೆಗೆ ಪಾವತಿಸಬೇಕಾಗುತ್ತದೆ. ಯಾವುದೇ ಕಾರಣಕ್ಕಾಗಿ ಮಾರಾಟಗಾರರು ನಿಲ್ಲಿಸಲು ನಿರ್ಧರಿಸಿದರೆ ಅವರು ವಾಹನವನ್ನು ಇಲಾಖೆಗೆ ಹಿಂತಿರುಗಿಸಬಹುದು ಮತ್ತು ಠೇವಣಿ ಹಣವನ್ನು ಸಂಗ್ರಹಿಸಬಹುದು.ನಂತರ ಅದೇ ವಾಹನವನ್ನು ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ ಇತರರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಾಗರಮಾಲಾ ಯೋಜನೆಯಲ್ಲಿ, ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ನಿರ್ಬಂಧಗಳ ಕಾರಣದಿಂದಾಗಿ ರಾಜ್ಯವು ಯೋಜನೆಯನ್ನು ಬಳಸಿಕೊಳ್ಳಲು ಕಡಿಮೆ ಸ್ಥಳಾವಕಾಶವಿದೆ ಮತ್ತು ಈ ಉದ್ದೇಶಕ್ಕಾಗಿ ರಾಜ್ಯವು ಅದರಿಂದ ವಿನಾಯಿತಿ ಪಡೆಯುವಲ್ಲಿ ಕೆಲಸ ಮಾಡುತ್ತಿದೆ ಎಂದು ವೈದ್ಯ ಹೇಳಿದರು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications