ಕರಾವಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಿಸಲು ಸರ್ಕಾರದಿಂದ ನಿರ್ಧಾರ
ಕಾರವಾರ, ನವೆಂಬರ್, 10: ರಾಜ್ಯ ಸರ್ಕಾರವು ಜನವರಿ 1ರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚಲಕ್ಕಿಯನ್ನು ನೀಡಲಿದೆ.
ಕೇರಳದ ಮಾದರಿಯಲ್ಲಿ ರಾಜ್ಯದಲ್ಲೂ ಕುಚಲಕ್ಕಿ ಭತ್ತಕ್ಕೆ ಪ್ರೋತ್ಸಾಹ ಧನ; ಕೋಟ ಶ್ರೀನಿವಾಸ ಪೂಜಾರಿ
ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಕುಚಲಕ್ಕಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಡಿಸೆಂಬರ್ 1ರಿಂದ ಕುಚಲಕ್ಕಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಕುಚಲಕ್ಕಿ ವಿತರಿಸಲಾಗುವುದು. ಮೂರೂ ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಾಲ್ ಕುಚಲಕ್ಕಿ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕುಚಲಕ್ಕಿ
ವಿತರಣೆಗೆ
ಸಿಎಂ
ಒಪ್ಪಿಗೆ
ಪ್ರತಿ
ಕ್ವಿಂಟಲ್
ಕುಚಲಕ್ಕಿಗೆ
2,540
ರೂಪಾಯಿ
ನೀಡಲಾಗುವುದು.
ಪಡಿತರದಲ್ಲಿ
ಕುಚಲಕ್ಕಿ
ವಿತರಿಸಲು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಸಮ್ಮತಿ
ಸೂಚಿಸಿದ್ದಾರೆ.
ಈ
ಮೂರೂ
ಜಿಲ್ಲೆಗಳಿಗೆ
ತಿಂಗಳಿಗೆ
1
ಲಕ್ಷ
ಕ್ವಿಂಟಾಲ್
ಅಕ್ಕಿ
ಬೇಕಿದೆ.
ಇದಕ್ಕಾಗಿ
18
ಲಕ್ಷ
ಕ್ವಿಂಟಾಲ್
ಭತ್ತ
ಸಂಸ್ಕರಿಸಬೇಕಾಗಿದೆ.
ಇದನ್ನು
ಬೇರೆಡೆಯಿಂದ
ಕೊಳ್ಳುವ
ಬದಲು
ಕರಾವಳಿ
ಜಿಲ್ಲೆಗಳಲ್ಲಿಯೇ
ಖರೀದಿಸುವ
ಬಗ್ಗೆ
ಚಿಂತನೆ
ನಡೆದಿದೆ
ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಬಿಪಿಎಲ್ ಪಡಿತರ ಹೊಂದಿರುವವರಿಗೆ ಕುಚಲಕ್ಕಿ ವಿತರಿಸಬೇಕು ಎನ್ನುವ ಬಹುದಿನಗಳ ಬೇಡಿಕೆಯನ್ನು ಶೀಘ್ರ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಉಡುಪಿ ಸಮೀಪದ ಕಾಪುವಿನಲ್ಲಿ ಇತ್ತೀಚೆಗೆ ನಡೆದ ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಡಿತರದಲ್ಲಿ ಕುಚಲಕ್ಕಿ ಕೊಡಬೇಕು ಎಂಬ ಕರಾವಳಿಗರ ಬಹುದಿನಗಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸುತ್ತಿದೆ ಎಂದು ಘೋಷಿಸಿದ್ದರು.
ಕುಚಲಕ್ಕಿ
ಭತ್ತಕ್ಕೆ
ಪ್ರೋತ್ಸಾಹ
ಧನ
ಕರಾವಳಿ
ಜಿಲ್ಲೆಗಳಿಗೆ
ಪಡಿತರ
ವ್ಯವಸ್ಥೆಯಡಿ
ಕುಚಲಕ್ಕಿಯನ್ನು
ವಿತರಿಸಲು
ಖರೀದಿಸುವ
ಪ್ರತಿ
ಕ್ವಿಂಟಾಲ್
ಭತ್ತಕ್ಕೆ
500
ರೂಪಾಯಿ
ಪ್ರೋತ್ಸಾಹ
ಧನ
ನೀಡಲಾಗುವುದು
ಎಂದು
ಸಚಿವ
ಕೋಟ
ಶ್ರೀನಿವಾಸ
ಪೂಜಾರಿ
ಕಾರವಾರದಲ್ಲಿ
ತಿಳಿಸಿದ್ದಾರೆ.
ನಗರದಲ್ಲಿ
ಮಾತನಾಡಿದ
ಅವರು,
ಪ್ರತಿ
ಕ್ವಿಂಟಾಲ್
ಭತ್ತಕ್ಕೆ
2,040
ರೂಪಾಯಿ
ಬೆಂಬಲ
ಬೆಲೆ
ನಿಗದಿ
ಮಾಡಲಾಗಿದೆ.
ಆದರೆ ಕುಚಲಕ್ಕಿಗೆ ಬಳಸುವ ಭತ್ತವನ್ನು ಕೇರಳ ರಾಜ್ಯದ ಪಡಿತರ ವ್ಯವಸ್ಥೆಯಡಿ 2,220 ರೂ.ನಂತೆ ಖರೀದಿಸಲಾಗುತ್ತಿದೆ. ನಮ್ಮ ರಾಜ್ಯದ ಹಲವು ರೈತರು ಕೇರಳ ರಾಜ್ಯಕ್ಕೆ ಭತ್ತ ಮಾರಾಟ ಮಾಡುತ್ತಿದ್ದಾರೆ.
ನಮ್ಮ ರಾಜ್ಯದಲ್ಲೂ ಕುಚಲಕ್ಕಿಯ ಭತ್ತಕ್ಕೆ ಸೀಮಿತವಾಗಿ 500 ರೂಪಾಯಿ ಪ್ರೋತ್ಸಾಹ ಧನ ನೀಡಿ ಒಟ್ಟು 2,540 ರೂ.ನಂತೆ ಖರೀದಿಸಲಾಗುವುದು. ಖರೀದಿ ಕೇಂದ್ರಗಳನ್ನು ಶೀಘ್ರವೇ ಆರಂಭಿಸಲಾಗುತ್ತದೆ. ಆದ್ದರಿಂದ ರೈತರು ತರಾತುರಿಯಿಂದ ಭತ್ತವನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.