'ಏಷ್ಯನ್ ಪ್ರಿಂಟ್ ಅವಾರ್ಡ್' ಗರಿ ಮುಡಿಗೇರಿಸಿಕೊಂಡ ಡ್ರೀಮ್ ಲ್ಯಾಂಡ್ ಪುಸ್ತಕ
ಕಾರವಾರ, ಮೇ 09 : ಉತ್ತರ ಕನ್ನಡ ಜಿಲ್ಲಾಡಳಿತ ಬಿಡುಗಡೆ ಮಾಡಿದ್ದ, ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡಿರುವ THE DREAMLAND Captivating glimpses of the most diverse district UTTARA KANNADA ಎಂಬ ಕಾಫಿ ಟೇಬಲ್ ಬುಕ್ ಗೆ ಏಷ್ಯನ್ ಪ್ರಿಂಟ್-2018 ಅವಾರ್ಡ್ ಲಭಿಸಿದೆ.
ಏಷ್ಯಾದ ಬೆಸ್ಟ್ ಪ್ರಿಂಟ್ ಪ್ರೊಡಕ್ಷನ್ ಗೆ ನೀಡಲಾಗುವ ಪ್ರಶಸ್ತಿ ಬ್ರೌಂಝ್ ಅವಾರ್ಡ್ ಅನ್ನು ಈ ಪುಸ್ತಕದ ಮುದ್ರಣ ಹಾಗೂ ಡಿಸೈನ್ ಮಾಡಿದ 'ಫ್ಲಾವರ್ ಗ್ರಾಫಿಕ್' ಕಂಪನಿಗೆ ಮೇ 3ರಂದು ಹಾಂಕಾಂಗ್ ನಲ್ಲಿ ಪ್ರದಾನ ಮಾಡಲಾಯಿತು. ಇಂಟರ್ ನ್ಯಾಷನಲ್ ಕ್ವಾಲಿಟಿ ಪ್ರಿಂಟ್ ಮಾತ್ರ ಆಯ್ಕೆ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.
ಏಷ್ಯಾದ ಎಲ್ಲಾ ರಾಷ್ಟ್ರಗಳ ಸುಮಾರು 35ಕ್ಕೂ ಹೆಚ್ಚಿನ ಅತ್ಯುತ್ತಮ ಪ್ರಿಂಟ್ ಗಳು ಇದರಲ್ಲಿ ಪಾಲ್ಗೊಂಡಿದ್ದವು. ಡ್ರೀಮ್ ಲ್ಯಾಂಡ್ ಪುಸ್ತಕ ಪರಿಚಯ ಜಿಲ್ಲಾಡಳಿತ ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಪರಿಚಯಿಸುವ ನಿಟ್ಟಿನಲ್ಲಿ 'ದಿ ಡ್ರೀಮ್ ಲ್ಯಾಂಡ್' ಹೆಸರಿನ ಛಾಯಾಚಿತ್ರ ಪುಸ್ತಕವನ್ನು ಕಳೆದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು.

ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಮತ್ತು ವೈಶಿಷ್ಟವನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ವಿಶೇಷ ಛಾಯಾಚಿತ್ರಗಳನ್ನು ಪುಸ್ತಕದಲ್ಲಿ ಮುದ್ರಿಸಿ, ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಪುಸ್ತಕದಲ್ಲಿ ವಿಶೇಷವಾದ ನೈಸರ್ಗಿಕ ಭೌಗೋಳಿಕ ಪ್ರದೇಶ, ಕಲೆ, ಸಂಸ್ಕೃತಿ, ವಿವಿಧ ಸಮುದಾಯಗಳ ಜನ ಜೀವನ ಹಾಗೂ ವನ್ಯ ಜೀವಿಗಳ ಛಾಯಾಚಿತ್ರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ.

ಮುರಡೇಶ್ವರ, ಗೋಕರ್ಣ, ಯಾಣ, ದೇವಭಾಗ ಕಡಲ ತೀರ, ದಾಂಡೇಲಿ ಅರಣ್ಯ ಪ್ರದೇಶ ಹೀಗೆ ವಿಶೇಷ ಛಾಯಾಚಿತ್ರಗಳನ್ನು ಕ್ರೋಢಿಕರಿಸಿ ಈ ಪುಸ್ತಕ ಸಿದ್ಧಪಡಿಸಲಾಗಿದೆ. ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ಸಂಗ್ರಹಯೋಗ್ಯವಾದ ಪುಸ್ತಕ ಇದಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಪುಸ್ತಕ ಆಧುನಿಕ ತಂತ್ರಜ್ಞಾನದಲ್ಲಿ ಮುದ್ರಣಗೊಂಡಿದೆ. ಫ್ಲಾವರ್ ಗ್ರಾಫಿಕ್ ಕಂಪನಿಯು ಇದರ ಮುದ್ರಣ ಹಾಗೂ ಡಿಸೈನ್ ಮಾಡಿದ್ದು, ಇದೀಗ ಅಂತರರಾಷ್ಟ್ರೀಯ ಅವಾರ್ಡ್ ಪಡೆದಿರುವುದು ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications