ಎಸಿಬಿ ಎಫ್ಐಆರ್ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ಗೆ
ಬೆಂಗಳೂರು, ಅ. 19 : ಭ್ರಷ್ಟಾಚಾರ ನಿಗ್ರಹದಳದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎರಡು ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗಲು ಅವರು ಎಸಿಬಿ ಬಳಿ ಕಾಲಾವಕಾಶ ಕೇಳಿದ್ದಾರೆ.
ಡಾ.ಡಿ.ಅಯ್ಯಪ್ಪ
ಅವರು
ಸಲ್ಲಿಸಿದ
ದೂರಿನ
ಅನ್ವಯ
ಎಸಿಬಿ
ಯಡಿಯೂರಪ್ಪ
ವಿರುದ್ಧ
ಎರಡು
ಅಕ್ರಮ
ಡಿನೋಟಿಫಿಕೇಶನ್
ಪ್ರಕರಣ
ದಾಖಲು
ಮಾಡಿದೆ.
ವಿಚಾರಣೆಗೆ
ಹಾಜರಾಗುವಂತೆಯೂ
ಸಮನ್ಸ್
ನೀಡಲಾಗಿತ್ತು.
ಆದರೆ,
ಯಡಿಯೂರಪ್ಪ
ವಕೀಲರ
ಮೂಲಕ
ವಿಚಾರಣೆಗೆ
ಹಾಜರಾಗಲು
ಸಮಯ
ನೀಡುವಂತೆ
ಮನವಿ
ಸಲ್ಲಿಸಿದ್ದಾರೆ.
ಶನಿವಾರ ಎಸಿಬಿ ತಮ್ಮ ವಿರುದ್ಧ ದಾಖಲು ಮಾಡಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್ನಲ್ಲಿ ಆಗಸ್ಟ್ 21ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ 2 ಎಫ್ಐಆರ್, ಏನಿದು ಪ್ರಕರಣ?
ಈ ಎರಡು ಪ್ರಕರಣಗಳಲ್ಲಿ ಯಡಿಯೂರಪ್ಪ ಮತ್ತು ಎಂಟು ಅಧಿಕಾರಿಗಳು ಆರೋಪಿಗಳಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ ಕೈಬಿಡಲು ತೀರ್ಮಾನಿಸಲಾಗಿತ್ತು. ಅಲ್ಲಿನ ಜಮೀನನ್ನು ಡಿನೋಟಿಫೈ ಮಾಡಲಾಗಿತ್ತು.
ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ನಿಯಮ ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂಬುದು ಆರೋಪ.
'ನನ್ನ ವಿರುದ್ಧ ಇಂತಹ ನೂರು ಕೇಸು ಹಾಕಿದ್ರು ಜಗ್ಗಲ್ಲ'