Get Updates
Get notified of breaking news, exclusive insights, and must-see stories!

ಕರ್ನಾಟಕ ಚುನಾವಣೆಯಲ್ಲಿ ಇಂಥವರಿಗೆ ಅಧಿಕಾರ ಯೋಗ ಇಲ್ಲ: ಕೊಡೇಕಲ್ ಕಾಲಜ್ಞಾನಿಯ ಭವಿಷ್ಯವಾಣಿ ಇದು?

ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಇದೀಗ ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರು ನುಡಿದ ಭವಿಷ್ಯವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇಂಥವರಿಗೆ ಈ ಚುನಾವಣೆಯಲ್ಲಿ ಅಧಿಕಾರ ಸಿಗುವುದಿಲ್ಲ ಎಂದ ಬಸವಣ್ಣ.

ಯಾದಗಿರಿ, ಫೆಬ್ರವರಿ 19: ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಇದೀಗ ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರು ನುಡಿದ ಭವಿಷ್ಯವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

ಹೌದು, ಪ್ರತಿ ವರ್ಷ ಶಿವರಾತ್ರಿ ದಿನದಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವಣ್ಣ ದೇವಸ್ಥಾನದಲ್ಲಿ ರಾಜಕೀಯ ಕುರಿತು ಮಹತ್ವ ಭವಿಷ್ಯವೊಂದು ಹೊರ ಬಿದಿದ್ದಿದೆ. ಈ ಭವಿಷ್ಯವು ಅಧಿಕಾರ ಹಿಡಿಯಲು ಬಯಸುವವರಿಗೆ ಅನ್ವಯಿಸಲಿದೆ.

ಮುಂಬರಲಿರುವ ಚುನಾವಣೆಯಲ್ಲಿ ಪಕ್ಷಾಂತರ ಮಾಡುವವರಿಗೆ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರ ಯೋಗವು ಇಲ್ಲ ಎಂದು ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ ನುಡಿದಿದ್ದಾರೆ.

Yadgir: Kalagnani Basavanna Predicts who become to power next Karnataka Assembly Election 2023

ಜಿಲ್ಲೆಯ ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವಣ್ಣನ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿಆಚರಣೆ ವೇಳೆ ಕಾಲಜ್ಞಾನಿ ಬಸವಣ್ಣನವರ ವಚನಗಳನ್ನು ನುಡಿಯುತ್ತಾರೆ. ಅದೆ ರೀತಿ ಶನಿವಾರ ಫೆಬ್ರವರಿ 18 ರಂದು ನಡೆದ ಶಿವರಾತ್ರಿ ಹಬ್ಬದಲ್ಲಿ ಭವಿಷ್ಯ ನುಡಿಯಲ್ಲಿ ಪಕ್ಷಾಂತರಿಗಳಿಗೆ ಬಸವಣ್ಣನವರು ಚಾಟಿ ಬೀಸಿದ್ದಾರೆ.

ಕೆಲವೇ ತಿಂಗಳು ಬಾಕಿ ಇರುವ ಈ 2023ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ. ನುಡಿದಂತೆ ನಡೆಯುವವರಿಗೆ ಮಾತ್ರ ಅಧಿಕಾರ ಧಕ್ಕಲಿದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ. 'ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ. ತನ್ನ ಪುರುಷನೇ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ' ಎಂಬ ಶಿವರಾತ್ರಿ ನುಡಿ ಇದಾಗಿದೆ.

ಹೀಗೆ ಹಲವು ಅರ್ಥದಲ್ಲಿ ಈ ಭವಿಷ್ಯ ನುಡಿಯನ್ನು ವಿಶ್ಲೇಷಿಸಲಾಗುತ್ತಿದೆ. ಬಣ್ಣದ ಮಾತನಾಡುವವರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ ನುಡಿದಂತೆ ನಡೆದುಕೊಳ್ಳುವವರಿಗೆ ಮಾತ್ರ ಅಧಿಕಾರ ಯೋಗ್ಯ. ಅಂಥವರ ಮೇಲೆ ಜನರು ನಂಬಿಕೆ ಇಟ್ಟು ಅಧಿಕಾರ ಗದ್ದುಗೆಗೆ ದಯಪಾಲಿಸುತ್ತಾರೆ.

Yadgir: Kalagnani Basavanna Predicts who become to power next Karnataka Assembly Election 2023

ಆದರೆ ಚನಾವಣೆ ವೇಳೆ ಅಧಿಕಾರಕ್ಕೇರಲು ಪಕ್ಷಾಂತರ ಮಾಡುವುದು ಇಲ್ಲವೇ ಕುದುರೆ ವ್ಯಾಪಾರಕ್ಕೊಳಗಾಗುವವರಿಗೆ ಅಧಿಕಾರ ಯೋಗವಿಲ್ಲ. ಅಂಥವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಅರ್ಥೈಸಲಾಗಿದೆ.

ಈ ಕೊಡೇಕಲ್ ಬಸವಣ್ಣ ಭಾವೈಕ್ಯತೆಯ ಹರಿಕಾರ. ಅಪಾರ ಸಂಖ್ಯೆ ಭಕ್ತರು ಇಲ್ಲಿಗ ಶಿವರಾತ್ರಿ ವೇಳೆ ಆಗಮಿಸುತ್ತಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ಕೊಡೇಕಲ್ ಕ್ಷೇತ್ರದಲ್ಲಿ ನೆಲೆಸಿರುವ ಬಸವಣ್ಣನವರು ಕಾಲಜ್ಞಾನದ ವಚನಗಳಡಿ ಮನುಷ್ಯ ಕುಲ ಉದ್ಧರಿಸಿದ್ದಾರೆ. ಇವರ ಸಾಹಿತ್ಯವೆಲ್ಲವು ಇಲ್ಲಿ ಅಮರಗನ್ನಡ ಎಂಬ ಸಾಂಕೇತಿಕ ಲಿಪಿಯಲ್ಲಿ ಇವೆ. ವಚನಕಾರರು ವಚನ ಬರೆದರೆ, ಕೊಡೇಕಲ್ ಬಸವಣ್ಣನವರು ವಚನಗಳ ಜತೆ ನಾಡಿನಲ್ಲಿ ಭವಿಷ್ಯದಲ್ಲಾಗುವುದನ್ನು ಕಾಲಜ್ಞಾನದ ಮೂಲಕ ನುಡಿಯುತ್ತಾರೆ.

ಕಾಲಜ್ಞಾನ ಸಾಹಿತ್ಯ ಎನ್ನುವುದೇ ಭವಿಷ್ಯದಲ್ಲಿ ಮುಂದೆನಾಗುತ್ತದೋ ಅದನ್ನು ತಿಳಿಸುವುದು ಆಗಿದೆ. ಕಲ್ಯಾಣ/ಉತ್ತರ ಕರ್ನಾಟಕ ಭಾಗದ ಕೊಡೇಕಲ್​ನ ಕಾಲಜ್ಞಾನ ಪ್ರಸಕ್ತದಲ್ಲೂ ಹೆಸರುವಾಸಿ. ಸಂಭಾವ್ಯದ ದುರಂತಗಳ ಕುರಿತು ಮೊದಲೇ ಊಹಿಸಿ ಪರಿಹಾರ ನೀಡುವ ಪ್ರಯತ್ನವನ್ನು ಕೊಡೇಕಲ್ ಬಸವಣ್ಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+