ದೇವೇಗೌಡರ ಆತ್ಮಚರಿತ್ರೆಯ ಬಗ್ಗೆ ಯಾಕಿಷ್ಟು ಕೌತುಕ?
ಕೆಲವು ತಿಂಗಳುಗಳಿಂದ ಆಗಿಂದಾಗ್ಗೆ ಮಾಧ್ಯಮಗಳಲ್ಲಿ ಕಾಣಸಿಗುತ್ತಿರುವ ವಿಚಾರವೆಂದರೆ, ದೇವೇಗೌಡರ ಆತ್ಮಚರಿತ್ರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ರಾಜಕಾರಣಿಯೊಬ್ಬರ ಆತ್ಮಚರಿತ್ರೆಯ ಬಗೆಗೆ ರಾಜಕೀಯ ವಿಶ್ಲೇಷಕರು, ರಾಜಕಾರಣಿಗಳು, ಇತಿಹಾಸ ತಜ್ಞರು, ಇತಿಹಾಸ ಹಾಗು ರಾಜಕೀಯ ವಿದ್ಯಾರ್ಥಿಗಳು ಹಾಗೆಯೇ ಎಲ್ಲ ಭಾಗದ ಜನರು ಕಾತುರದಿಂದ ಕಾಯುತ್ತಿರುವುದು ಇದೆ ಮೊದಲು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಈ ಎಲ್ಲ ವರ್ಗದ ಜನರು ಕಾಯುತ್ತಿರುವುದಕ್ಕೆ ಅನೇಕ ವಿಶೇಷ ಕಾರಣಗಳೂ, ಅಪೇಕ್ಷೆಗಳೂ, ಅನೇಕ ಉತ್ತರಗಳನ್ನು ಜನ ಈ ಪುಸ್ತಕದಲ್ಲಿ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಇದೆಲ್ಲದಕ್ಕೂ ಮಿಗಿಲಾಗಿ ದೇವೇಗೌಡರ 85 ವರ್ಷಗಳ ತುಂಬು ಜೀವನದ, ಸುದೀರ್ಘ 60 ವರ್ಷಗಳ ರಾಜಕೀಯ ಬದುಕಿನ ಬಗೆಗೆ ತಿಳಿಯುವ ಉತ್ಸಾಹ ಗೋಚರಿಸುತ್ತಿದೆ. ವಿಶೇಷವೆಂದರೆ, ಗೌಡರ 60 ವರ್ಷಗಳ ರಾಜಕಾರಣದ ಅನುಭವದಲ್ಲಿ ಸರಿ ಸುಮಾರು ಇಡೀ ಕರ್ನಾಟಕದ ರಾಜಕಾರಣದ ಶೇಕಡಾ 80ರಷ್ಟು ಭಾಗ ಇವರ ಆತ್ಮಚರಿತ್ರೆಯಲ್ಲೇ ತಿಳಿಯಬಹುದಾದ ವಿಶೇಷ ರಾಜಕಾರಣದ ಬದುಕು ದೇವೇಗೌಡರದು.

1957ರಲ್ಲಿ ಹಾಸನದ ಹೊಳೆನರಸೀಪುರದ ತಾಲೂಕು ಬೋರ್ಡ್ ಸದಸ್ಯನಾಗಿ, 1962ರಲ್ಲಿ ಮೊದಲ ಬಾರಿಗೆ ಪಕ್ಷೇತರ ಶಾಸಕನಾಗಿ, 1972ರಲ್ಲಿ ವಿಧಾನಸಭೆಯ ವಿರೋಧಪಕ್ಷದ ನಾಯಕನಾಗಿ, 1983ರಲ್ಲಿ ಸಚಿವನಾಗಿ, 1994ರಲ್ಲಿ ಮುಖ್ಯಮಂತ್ರಿಯಾಗಿ, ಸಂಸದನಾಗಿ, 1996ರಲ್ಲಿ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿರುವ ಗೌಡರ ರಾಜಕಾರಣದ ಬದುಕು ಪ್ರಜಾಪ್ರಭುತ್ವದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯ ಆರೋಹಣಕ್ಕೆ ದೇಶದ ಜನತೆಯ ಎದುರು ಅದ್ಭುತ ಉದಾಹರಣೆಯೇ ಸರಿ.
ಜನರ ಕೌತುಕ ಹಾಗು ನಿರೀಕ್ಷೆಗಳಿಗೆ ಈ ಕೆಳಕಂಡ ಕಾರಣಗಳಿಗೂ ಇರಬಹುದು:
* ಒಬ್ಬ ಸಾಮಾನ್ಯ ಹಳ್ಳಿಗನ ರಾಜಕೀಯ ಪ್ರವೇಶ ಹೇಗೆ ಸಾಧ್ಯವಾಯಿತು?
* ಗೌಡರ ವೈಯಕ್ತಿಕ, ಸಾಂಸಾರಿಕ ಬದುಕಿನ ಬಗ್ಗೆ.
* ವಿರೋಧ ಪಕ್ಷದ ನಾಯಕರಾಗಿ ವಿಧಾನಸಭೆಯಲ್ಲಿ ಮಂಡಿಸಿರುವ ವಿಚಾರಗಳು ಹಾಗು ಸರ್ಕಾರದ ವೈಫಲ್ಯಗಳ ವಿರುದ್ದದ ಹೋರಾಟಗಳು.
* ದೇವರಾಜ ಅರಸುರವರೊಂದಿಗಿನ ಒಡನಾಟ.
* ರಾಮಕೃಷ್ಣ ಹೆಗಡೆಯೊಂದಿಗಿದ್ದ ಗೆಳತನ ಹಾಗು ಸೈದ್ಧಾಂತಿಕ ಬಿನ್ನಾಭಿಪ್ರಾಯ.
* 18 ತಿಂಗಳ ಮುಖ್ಯಮಂತ್ರಿ ಪದವಿ.
* 10 ತಿಂಗಳಲ್ಲೇ ಪ್ರಧಾನಿ ಹುದ್ದೆಯಿಂದ ಇಳಿಯಬೇಕಾದ ಕಾರಣಗಳು, ಇಳಿಸಲು ಶ್ರಮಿಸಿದ ವ್ಯಕ್ತಿಗಳು.
* ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಕುಟುಂಬದಲ್ಲಿ ನಡೆದ ಘಟನಾವಳಿಗಳು.
* ಸಿದ್ದರಾಮಯ್ಯ ಜೊತೆಗಿನ 25 ವರ್ಷಗಳ ಒಡನಾಟ.
* ಗೌಡರಿಗೆ ನೀರಾವರಿ ಬಗೆಗಿನ ಹೆಚ್ಚು ಆಸಕ್ತಿ ಏಕೆ?
* 1989ರ ಚುನಾವಣೆಯ ಸೋಲಿನ ನಂತರ ಪುಟಿದೇಳುವ ಪ್ರಕ್ರಿಯೆ.
* ಕೃಷ್ಣ , ಕಾವೇರಿ, ಬೆಂಗಳೂರಿನ ಐಟಿ ಕ್ಷೇತ್ರ, ಬೆಂಗಳೂರಿನ ಅಭಿವೃದ್ಧಿ, ಕಾವೇರಿ ನಾಲ್ಕನೇ ಹಂತದ ನೀರಾವರಿ ಯೋಜನೆ - ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಬಗೆಗೆ.
* ಪ್ರಧಾನಿ ಮೋದಿಯೊಂದಿಗಿನ ಸಂಬಂಧ.
ಈಗಾಗಲೇ, ದೇವೇಗೌಡರು ಅನೇಕ ಸಂದರ್ಭದಲ್ಲಿ ಹೇಳಿರುವಂತೆ, ತಮ್ಮ ವೈಯಕ್ತಿಕ, ಬಾಲ್ಯ ಹಾಗು ಸಾಂಸಾರಿಕ ಸನ್ನಿವೇಶಗಳನ್ನು ಮಗಳು ಶೈಲಜಾ ಚಂದ್ರಶೇಖರ್ ಮತ್ತು ರಾಜಕಾರಣಕ್ಕೆ ಸಂಬಂದಿಸಿದ ಘಟನೆಗಳನ್ನು ಆಪ್ತ, ವೈ.ಎಸ್.ವಿ. ದತ್ತಾ ಬರೆದಿದ್ದಾರೆ.
ಪುಸ್ತಕದಲ್ಲಿ ಹೇಳಿರುವ ಅನೇಕ ಸನ್ನಿವೇಶಗಳಿಗೆ ದಾಖಲೆಗಳನ್ನು, ಪತ್ರಗಳನ್ನು ಅನುಬಂಧದ ಭಾಗವಾಗಿ ಲಗತ್ತಿಸಲಾಗಿದೆ ಎಂದೂ ತಿಳಿದು ಬಂದಿದೆ. ಫೆಬ್ರವರಿ ತಿಂಗಳ ಅಂತ್ಯಕ್ಕೆ ಆತ್ಮಚರಿತ್ರೆ "ಅಗ್ನಿ ದಿವ್ಯ" ಬಿಡುಗಡೆಯಾಗುವ ನಿರೀಕ್ಷೆ ಇದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications