ಗಣ್ಯರ ನಿಧನಕ್ಕೆ ರಜೆ ಘೋಷಿಸುವ ಗೀಳು ಸರಕಾರಕ್ಕೆ ಯಾಕೆ?
ಗಣ್ಯರು ನಿಧನ ಹೊಂದಿದಾಗ ಸರಕಾರ ರಜೆ ಘೋಷಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ. ಕನ್ನಡ ಸಾರಸ್ವತ ಲೋಕದ ದಿಗ್ಗಜ ಜಿ ಎಸ್ ಶಿವರುದ್ರಪ್ಪ ಮತ್ತು ಯದು ವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನ ಹೊಂದಿದಾಗಲೂ ಸರಕಾರ ರಜೆ ಘೋಷಿಸಿತ್ತು.
ನಮ್ಮನ್ನು ಅಗಲಿದ ಈ ಇಬ್ಬರು ಗಣ್ಯರ ಮೇಲೆ ಅಪಾರ ಗೌರವವನ್ನು ಇಟ್ಟುಕೊಳ್ಳುತ್ತಾ ಸರಕಾರಕ್ಕೆ ನಾವು ಕೇಳಬೇಕಾಗಿರುವ ಪ್ರಶ್ನೆ ಏನಂದರೆ ಮೃತರ ಗೌರವಾರ್ಥ ರಜೆ ಘೋಷಿಸುವ ಅವಶ್ಯಕತೆ ಇತ್ತೇ? ರಜೆ ಘೋಷಿಸಿದರೆ ಮಾತ್ರ ಮೃತರಿಗೆ ಗೌರವ ನೀಡಿದಂತಾಗುತ್ತದೆಯೇ? (ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ವಿಧಿವಶ)
ಶಿವರುದ್ರಪ್ಪನವರು ಕಾಯಕವೇ ಕೈಲಾಸವೆಂದು ಜೀವನದುದ್ದಕ್ಕೂ ನಡೆದುಕೊಂಡು ಬಂದವರು. ಒಂದು ನಿಮಿಷ ಸಮಯ ವ್ಯರ್ಥ ಮಾಡಿದವರಲ್ಲ. ಅವರ ನಿಧನದ ಗೌರವಾರ್ಥ ಸರಕಾರ ತಮ್ಮ ಉದ್ಯೋಗಿಗಳಿಂದ ಒಂದು ಗಂಟೆ ಹೆಚ್ಚು ಕೆಲಸ ತೆಗೆಸಿಕೊಳ್ಳುವ ನಿರ್ಧಾರ ತೆಗೆದು ಕೊಂಡಿದ್ದರೆ ಹಿರಿಯ ಜೀವಕ್ಕೆ ನಿಜವಾದ ಶ್ರದ್ದಾಂಜಲಿ ನೀಡಿದಂತಾಗುತ್ತಿತ್ತು ಅಲ್ಲವೇ?
ಮೈಸೂರು ರಾಜ ಮನೆತನದ ಒಡೆಯರ್ ನಿಧನ ಹೊಂದಿದಾಗಲೂ ರಾಜ್ಯಾದ್ಯಂತ ರಜೆ ಘೋಷಿಸಲಾಯಿತು. ಸರಕಾರಕ್ಕೆ ರಜೆ ಘೋಷಿಸಲೇ ಬೇಕು ಎಂದಿದ್ದರೆ ಮೈಸೂರು ಜಿಲ್ಲಾ ವ್ಯಾಪ್ತಿಗೆ ಮೀಸಲಾಗುವಂತೆ ರಜೆ ನೀಡ ಬಹುದಾಗಿತ್ತಲ್ಲವೇ ಎನ್ನುವುದು ಬಹು ಜನರ ಅಭಿಪ್ರಾಯ ಕೂಡಾ. (ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ವಿಧಿವಶ)

ಸರಕಾರೀ ಕೆಲಸದಲ್ಲಿರುವ ಉದ್ಯೋಗಿಗಳು ಮತ್ತು ಶಾಲಾ ಕಾಲೇಜಿನಲ್ಲಿ ಕೆಲಸ ನಿರ್ವಹಿಸುವವರಲ್ಲಿ ಎಷ್ಟು ಜನರು ಜಿಎಸ್ಎಸ್ ಮತ್ತು ಒಡೆಯರ್ ಹೆಸರನ್ನು ಬಲ್ಲರು ಎನ್ನುವುದೂ ಒಂದು ಪ್ರಶ್ನೆಯಲ್ಲವೇ? ಶೋಕಾಚಾರಣೆಗೆ ನೀಡುವ ರಜೆಯನ್ನು ಮೋಜಿಗಾಗಿ ಕಳೆಯುವವರೂ ಇವರಲ್ಲಿ ಇರುವುದಿಲ್ಲ ಎನ್ನುವುದು ಏನು ಗ್ಯಾರಂಟಿ?
ನನ್ನ ಸಹದ್ಯೋಗಿಯೊಬ್ಬರು ಅವರ ಅಕೌಂಟಿಗೆ ಒಂದು ಚೆಕ್ ಹಾಕಿದ್ದರು. ಅದು ಮಂಗಳವಾರ (ಡಿ 24) ಕ್ಲಿಯರೆನ್ಸ್ ಆಗಿ ಹಣ ಜಮಾ ಆಗಬೇಕಾಗಿತ್ತು. ಆದರೆ ಸರಕಾರ ಮಂಗಳವಾರ ರಜೆ ಘೋಷಿಸಿ ಚೆಕ್ ಕ್ಲಿಯರೆನ್ಸಿಗಾಗಿ ಗುರುವಾರದವರೆಗೆ ಕಾಯುವ ಪರಿಸ್ಥಿತಿ ಅವರಿಗೆ ಒದಗಿ ಬಂತು. ಅದನ್ನೇ ನಂಬಿಕೊಂಡಿದ್ದ ಅವರು ಹಾಕಿದ್ದ ಪ್ಲಾನ್ ಎಲ್ಲಾ ಉಲ್ಟಾಪಲ್ಟಾ ಆಯಿತು. ಇವರಿಗಾದ ಪರಿಸ್ಥಿತಿ ಬಹಳಷ್ಟು ಜನರಿಗೆ ಆಗಿರಬಹುದಲ್ಲವೇ? (2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ)
ಒಂದು ದಿನ ಸರಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸದೇ ಇದ್ದರೆ ಆಗುವ ಕೋಟಿ ಕೋಟಿ ನಷ್ಟವನ್ನು ತುಂಬುವವರು ಯಾರು? ಯಾರದರೂ ಗಣ್ಯರು ನಿಧನ ಹೊಂದಿದಾಗ ಸರಕಾರ ರಜೆ ಘೋಷಿಸುತ್ತದೆಯೇ ಎಂದು ಟಿವಿ/ಪತ್ರಿಕೆ ಜಾಲಾಡಿಸುವವರಿಗೂ ನಮ್ಮಲ್ಲಿ ಬರವಿಲ್ಲ ಎನ್ನುವುದು ಎಲ್ಲರೂ ಒಪ್ಪಿ ಕೊಳ್ಳಬೇಕಾದ ವಿಚಾರ.
ಈ ರೀತಿ ಸರಕಾರ ಶಾಲಾ ಕಾಲೇಜಿಗೆ ರಜೆ ನೀಡುತ್ತಾ ಬಂದರೆ, ಶಾಲೆಯಲ್ಲಿ portion ಮುಗಿಯದೇ ಇದ್ದ ಪಕ್ಷದಲ್ಲಿ ವಿದ್ಯಾರ್ಥಿಗಳಿಗಾಗುವ ತೊಂದರೆಗೆ ಯಾರು ಜವಾಬ್ದಾರರು? ಅದರ ಬದಲು ಮೃತ ಗಣ್ಯರ ಬಗ್ಗೆ ವಿಶೇಷ ಉಪನ್ಯಾಸ ಆಯೋಜಿಸಿ, ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಪರಿಚಯಿಸಿದರೆ ಅವರ ಸಾವಿಗೆ ನಿಜವಾದ ಕಂಬನಿ ಮಿಡಿದಂತಾಗುವುದಲ್ಲವೇ?
ಯಾವ ವ್ಯಕ್ತಿಗಳೂ ನಿಧನರಾದಾಗ ಸರಕಾರ ರಜೆ ನೀಡದಂತೆ ಸೂಕ್ತ ಕಾನೂನು ಜಾರಿಗೊಳಿಸುವುದು ಯಾವಾಗ? ಮೃತ ಗಣ್ಯರ ಗೌರವಾರ್ಥ ರಜೆ ನೀಡುವ ಬದಲು ಒಂದು ಗಂಟೆ ಹೆಚ್ಚು ಕಾರ್ಯ ನಿರ್ವಹಿಸುವ ಪದ್ದತಿಯನ್ನು ನಮ್ಮ ಸರಕಾರೀ ಚೌಕಟ್ಟಿನಲ್ಲಿ ತಂದರೆ ಗಣ್ಯರಿಗೆ ಅದಕ್ಕಿಂತ ದೊಡ್ಡ ಶ್ರದ್ದಾಂಜಲಿ ಬೇಕೇ?
-
ಕನ್ನಡಿಗರ ಮುಕ್ತಜ್ಞಾನದ ತಾಣ ‘ಕಣಜ’ಕ್ಕೆ ಸಿಕ್ಕಿಬಿಟ್ಟಿತೆ ಮುಕ್ತಿ? 3 ತಿಂಗಳಿಂದ ಕಣ್ಮರೆಯಾದ ವೆಬ್ಸೈಟ್ -
Holiday Plan: ಉದ್ಯೋಗಿಗಳಿಗೆ ರಜೆ ಹಬ್ಬ: ಪ್ಲ್ಯಾನ್ ಮಾಡಿದ್ರೆ ಮಾರ್ಚ್ನಲ್ಲಿ ಎರಡು ಬಾರಿ ಪಡೆಯಬಹುದು ಸತತ 5 ದಿನಗಳ ಹಾಲಿಡೇ -
ಇಂದಿನಿಂದ SSLC ಪರೀಕ್ಷೆ: 8.66 ಲಕ್ಷ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಹಾರೈಕೆ; ಆತಂಕಬೇಡ ಎಂದ ಸರ್ಕಾರ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications