ನ್ಯಾಯಾಲಯವು ಕೆಜಿಎಫ್ಗೆ ತಡೆ ನೀಡಿದ್ದು ಏಕೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 20: ನಾಳೆ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಿದ್ದ ಭಾರಿ ನಿರೀಕ್ಷಿತ ಚಿತ್ರ ಕೆಜಿಎಫ್ಗೆ ಹಠಾತ್ತನೆ ಗ್ರಹಣವಾಗಿದೆ. ಸಿಟಿ ಸಿವಿಲ್ ಕೋರ್ಟ್ ಕೆಜಿಎಫ್ ಬಿಡುಗಡೆಗೆ ಮಧ್ಯಂತರ ತಡೆ ನೀಡಿದೆ.
ಆದರೆ ಹೀಗೆ ಏಕಾ-ಏಕಿ ಕೆಜಿಎಫ್ ಅಂತ ಬೃಹತ್ ಚಿತ್ರಕ್ಕೆ ತಡೆ ನೀಡಿದ್ದು ಏಕಿ. ಕೆಜಿಎಫ್ ಮೇಲೆ ಪ್ರಕರಣ ದಾಖಲಿಸಿದ್ದು ಯಾರು, ನಾಲ್ಕು ವರ್ಷಗಳಿಂದ ಚಿತ್ರೀಕರಣ ಮಾಡುತ್ತಿದ್ದರೂ ಈಗ ದೂರು ದಾಖಲಿಸಲು ಕಾರಣ ಏನು? ಹಲವು ಪ್ರಶ್ನೆಗಳು ಹುಟ್ಟುತ್ತಿವೆ.
ಕನ್ನಡದ ಬಿಗ್ ಬಜೆಟ್ ಚಿತ್ರದ ವಿರುದ್ಧ ಕನ್ನಡದ ಮತ್ತೊಬ್ಬ ನಿರ್ಮಾಪಕರೇ ದೂರು ದಾಖಲಿಸಿದ್ದರು. ಚಲನಚಿತ್ರ ನಿರ್ಮಾಪಕ ವೆಂಕಟೇಶ್ ಎಂಬುವರು ಕೆಜಿಎಫ್ ವಿರುದ್ಧ ಹಕ್ಕುಚ್ಯುತಿ ಕೇಸನ್ನು ಡಿಸೆಂಬರ್ 17 ರಂದು ದಾಖಲಿಸಿದ್ದರು.

ಇಂದು ಅದರ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯದ ಎದುರು ಅರ್ಜಿದಾರರ ಪರ ವಕೀಲ ರಘುನಾಥ್ ಅವರು ವಾದ ಮಂಡಿಸಿ, ಕೆಜಿಎಫ್ ರೌಡಿ ತಂಗಂ ಎಂಬುವರ ಜೀವನ ಕತೆ ಆಧಾರಿತವಾಗಿದ್ದು, ಆತನ ಕತೆಯ ಹಕ್ಕುಸಾಮ್ಯ ನಿರ್ಮಾಪಕ ವೆಂಕಟೇಶ್ ಬಳಿ ಇದೆ ಎಂದು ಹೇಳಿದ್ದಾರೆ.

ವಿಜಯ್ ಕಿರಗಂದೂರು ಅವರ ಭೇಟಿ ಮಾಡಿದ್ದರು
ಅರ್ಜಿದಾರ ವೆಂಕಟೇಶ್ ಅವರು 2017 ರಲ್ಲಿಯೇ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದರು. ಆದರೆ ಕೆಜಿಎಫ್ ಸಿನಿಮಾ ರೌಡಿ ತಂಗಂ ಕುರಿತಾದದ್ದು ಅಲ್ಲ ಎಂದು ಆಗ ಹೇಳಿದ್ದರು ಹಾಗಾಗಿ ಇಷ್ಟು ದಿನ ಅವರು ದೂರು ನೀಡಿರಲಿಲ್ಲವಂತೆ.

'ಹಕ್ಕುಸಾಮ್ಯ ಚ್ಯುತಿ ಆಗಿರುವುದು ತಡವಾಗಿ ಗೊತ್ತಾಯಿತು'
ಆದರೆ ಟ್ರೇಲರ್ ರಿಲೀಸ್ ಆದಮೇಲೆ ಹಾಗೂ ಮಾಧ್ಯಮಗಳು ಹಾಗೂ ಇತರ ಮೂಲಗಳ ಮೂಲಕ ಕೆಜಿಎಫ್ ಕತೆ ಸೋರಿಕೆ ಆದ ಬಳಿಕವೇ ವೆಂಕಟೇಶ್ ಅವರಿಗೆ ಅದು ರೌಡಿ ತಂಗಂ ಕತೆ ಎಂದು ಗೊತ್ತಾಗಿದ್ದು ಹಾಗಾಗಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು ಎಂದು ಹೇಳಿದ್ದಾರೆ ಅರ್ಜಿದಾರರ ಪರ ವಕೀಲ ರಘುನಾಥ್.

ಕೆಜಿಎಫ್ ತಂಡವನ್ನು ಸಂಪರ್ಕಿಸುವ ಯತ್ನ ಮಾಡಿದ್ದೆ
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುನ್ನಾ ಕೂಡ ವೆಂಕಟೇಶ್ ಅವರು ಕೆಜಿಎಫ್ ಚಿತ್ರತಂಡವನ್ನು ಸಂಪರ್ಕಿಸುವ ಯತ್ನ ಮಾಡಿದರು. ಆದರೆ ಅವರು ಕೈಗೆ ಸಿಗಲಿಲ್ಲ ಹಾಗಾಗಿ ಅರ್ಜಿ ದಾಖಲಿಸಬೇಕಾಯಿತು ಎಂದು ವಕೀಲರು ಹೇಳಿದ್ದಾರೆ.

ಅರ್ಜಿದಾರ ವೆಂಕಟೇಶ್ ಮಾತುಗಳು ಏನು?
ಅರ್ಜಿದಾರ ವೆಂಕಟೇಶ್ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಹಕ್ಕು ಖರೀದಿಸಿ, ರೌಡಿ ತಂಗಂ ಜೀವನದ ಮೇಲೆ ಸಿನಿಮಾ ಮಾಡಲು ತಯಾರಿ ನಡೆಸಿದ್ದೆ ಆದರೆ, ಈಗ ಸಿನಿಮಾ ಕೆಜಿಎಫ್ ತಂಡದವರು ನಮ್ಮ ಕತೆ ಕದ್ದಿದ್ದಾರೆ. ಅದಕ್ಕೆ ತಕ್ಕ ಬೆಲೆ ಅವರು ಕೊಡಬೇಕಾಗಿದೆ ಎಂದು ಅವರು ಹೇಳಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications