ರಸ್ತೆಗಿಳಿದರೆ ನ್ಯಾಯ ಸಿಗುವುದಿಲ್ಲ : ವೆಂಕಯ್ಯ ನಾಯ್ಡು
ನವದೆಹಲಿ, ಸೆಪ್ಟೆಂಬರ್ 13 : 'ಕರ್ನಾಟಕ ಮತ್ತು ತಮಿಳುನಾಡು ಜನರು ಶಾಂತಿ ಕಾಪಾಡಬೇಕು. ರಸ್ತೆಗೆ ಇಳಿಯುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ' ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದರು.
ನವದೆಹಲಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವೆಂಕಯ್ಯ ನಾಯ್ಡು ಅವರು, 'ಎರಡೂ ರಾಜ್ಯಗಳ ಜನರು ಶಾಂತಿ ಕಾಪಾಡಬೇಕು. ಎರಡೂ ರಾಜ್ಯಗಳ ರಾಜಕೀಯ ನಾಯಕರು, ಹಿಂಸಾಚಾರ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.













Click it and Unblock the Notifications