ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ!

ಬೆಂಗಳೂರು,

ಜೂ.
24:
ಕೊರೊನಾ
ವೈರಸ್
ಮಹಾಮಾರಿ
ಕಳೆದ
ಒಂದೂವರೆ
ವರ್ಷಗಳಿಂದ
ಇಡೀ
ವಿದ್ಯಾರ್ಥಿ
ಸಮೂಹದ
ಮೇಲೆ
ಅತ್ಯಂತ
ಕೆಟ್ಟ
ಪರಿಣಾಮ
ಬೀರಿದೆ.
ಕಳೆದ
ವರ್ಷಕ್ಕೆ
ಹೋಲಿಕೆ
ಮಾಡಿದರೆ
ವರ್ಷವಂತೂ
ಶೈಕ್ಷಣಿಕ
ವರ್ಷ
ಆರಂಭಗೊಳ್ಳುವ
ಲಕ್ಷಣಗಳು
ಕಾಣುತ್ತಿಲ್ಲ.
ಕೊರೊನಾ
ವೈರಸ್
ರೂಪಾಂತರಿ
ತಳಿ
ವರ್ಷದಿಂದ
ವರ್ಷಕ್ಕೆ
ಹೊಸ
ಸಮಸ್ಯೆಗಳನ್ನು
ತಂದಿಡುತ್ತಿದೆ.
ಹೀಗಾಗಿ
ವಿದ್ಯಾರ್ಥಿಗಳ
ಕಲಿಕೆಯ
ಮೇಲೆ
ವೈರಸ್
ಪ್ರಭಾವ
ಸಾಕಷ್ಟಾಗುತ್ತಿದೆ.

id="toptextpromo">
id='are-slot-1'
class='oiad
oi-axt
oiadv'>

ವಿದ್ಯಾರ್ಥಿಗಳ

ಜೀವಕ್ಕೆ
ಮಹತ್ವ
ಕೊಟ್ಟು
ಅವರ
ಜೀವನ
ರೂಪಿಸಬೇಕಾದ
ಜವಾಬ್ದಾರಿ
ಸರ್ಕಾರದ
ಮೇಲಿದೆ.
ಹಾಗಂತ
ಎಲ್ಲರಿಗೂ
ಲಸಿಕೆ
ಹಾಕಿಸಿ
ನೇರ
ತರಗತಿಗಳನ್ನು
ಆರಂಭಿಸುವುದು
ಕೂಡ
ಸಾಧ್ಯವಿಲ್ಲ.
ಹೀಗಾಗಿ
ಯಾವ
ವಿದ್ಯಾರ್ಥಿಗಳಿಗೆ
ಲಸಿಕೆ
ಹಾಕಿಸಬೇಕು?
ಯಾರಿಗೆ
ಹಾಕಬಾರದು
ಎಂಬುದರ
ಬಗ್ಗೆ
ಸರ್ಕಾರ
ಮಹತ್ವದ
ತೀರ್ಮಾನ
ತೆಗೆದುಕೊಂಡಿದೆ.
ಬಗ್ಗೆ
ರಾಜ್ಯ
ಕೋವಿಡ್
ಕಾರ್ಯಪಡೆ
ಮುಖ್ಯಸ್ಥ,
ಡಿಸಿಎಂ
ಡಾ.
ಅಶ್ವಥ್
ನಾರಾಯಣ
ಅವರು
ಮಹತ್ವದ
ಘೋಷಣೆ
ಮಾಡಿದ್ದಾರೆ.
ಎಲ್ಲ
ವಿದ್ಯಾರ್ಥಿಗಳಿಗೂ
ಲಸಿಕೆ
ಕೊಡುವುದು
ಸಾಧ್ಯವಾ?
ಮುಂದಿದೆ
ಸರ್ಕಾರದ
ನಿರ್ಧಾರ!

id='are-slot-2'
class='oiad
oi-axt
oiadv'>

ಹದಿನೆಂಟು ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ!

ಹದಿನೆಂಟು ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ!

"ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಲಾಗುವುದು. ಜುಲೈ ತಿಂಗಳಿನಿಂದ ಎಲ್ಲರಿಗೂ ಲಸಿಕೆ ಕೊಡಲಾಗುವುದು" ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆಗಿರುವ ಡಿಸಿಎಂ ಡಾ.ಸಿ.ಎನ್.‌ ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿರುವ ಅವರು, "ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಆಭಿಯಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಆದೇಶ ಹೊರಡಿಸಲಾಗಿದೆ" ಎಂದು ತಿಳಿಸಿದ್ದಾರೆ.

ನೇರ ತರಗತಿ ಆರಂಭಿಸಲು ತೀರ್ಮಾನ!

ನೇರ ತರಗತಿ ಆರಂಭಿಸಲು ತೀರ್ಮಾನ!

"ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನೇರ ತರಗತಿ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಕಾಲೇಜ್ ಆರಂಭಕ್ಕೆ ಮೊದಲೇ ಎಲ್ಲ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.

ವಿದ್ಯಾರ್ಥಿಗಳು ಲಸಿಕೆ ಪಡೆಯೋದು ಹೇಗೆ?

ವಿದ್ಯಾರ್ಥಿಗಳು ಲಸಿಕೆ ಪಡೆಯೋದು ಹೇಗೆ?

"ವಿದ್ಯಾರ್ಥಿಗಳು ಹಾಗೂ ಕಾಲೇಜ್ ಸಿಬ್ಬಂದಿ ಲಸಿಕೆ ಪಡೆಯಲು ಆಯಾ ಸಂಸ್ಥೆಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತಿ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗುವುದು" ಎಂದು ಕಾರ್ಯಪಡೆ ಮುಖ್ಯಸ್ಥ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

"ಈ ಲಸಿಕೆ ಪ್ರಕ್ರಿಯೆಗೆ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಇರುತ್ತದೆ. ಅದರಂತೆಯೇ ಲಸಿಕೀಕರಣ ನಡೆಸಲಾಗುವುದು. ಅಲ್ಲದೆ, ನೋಡೆಲ್‌ ಅಧಿಕಾರಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ತಪ್ಪದೇ ಲಸಿಕೆ ಕೊಡಿಸಬೇಕು. ಹಾಗೂ ಅದರ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.

Recommended Video

    ಇರಾಕ್ ಅಥವಾ ಇಸ್ರೇಲ್ ಆ ದಾಳಿ ಮಾಡಿರೋದ ಅಂತ!! | Oneindia Kannada
    ಲಸಿಕೆ ಬಳಿಕ ನೇರ ತರಗತಿ ಆರಂಭ

    ಲಸಿಕೆ ಬಳಿಕ ನೇರ ತರಗತಿ ಆರಂಭ

    "ಈ ವಿಭಾಗದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ನಿರ್ಧರಿಸಲಾಗುವುದು. ಆದರೆ ಲಸಿಕೆ ಕೊಡಲಿ ಬಿಡಲಿ ಕಲಿಕೆ ನಿಲ್ಲುವುದಿಲ್ಲ. ಡಿಜಿಟಲ್‌ ವೇದಿಕೆಯಲ್ಲಿ ಕಲಿಕೆ ಮುಂದುವರಿದಿದೆ. ಲಸಿಕೆ ಪಡೆದ ಮೇಲೆ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬಹುದು ಅಥವಾ ತಾವಿದ್ದಲ್ಲಿಯೇ ಆನ್‌ಲೈನ್‌ ಕ್ಲಾಸ್‌ ಹಾಜರಾಗಬಹುದು. ಹಾಜರಾತಿ ಮಾತ್ರ ಕಡ್ಡಾಯ" ಎಂದು ತರಗತಿಗಳು ಹೇಗೆ ನಡೆಯಲಿವೆ ಎಂದು ವಿವರಿಸಿದ್ದಾರೆ.

    ಮೊದಲ ಡೋಸ್ ಪಡೆದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲಾರಂಭಿಸುತ್ತದೆ. ಒಂದು ವೇಳೆ ನೇರ ತರಗತಿಗೆ ಹಾಜರಾದ ನಂತರವೂ ಸೋಂಕು ಬಂದರೆ ಜೀವಕ್ಕೆ ಹಾನಿ ಆಗುವುದಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿ, ಸಿಬ್ಬಂದಿ ಲಸಿಕೆ ಪಡೆಯಬೇಕು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಮನವಿ ಮಾಡಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+