ವಾಣಿಜ್ಯ ವಿಭಾಗದ ಸಾಧಕಿಗೆ ಐಎಎಸ್ ಅಧಿಕಾರಿ ಆಗುವ ಆಸೆ
ಮಂಗಳೂರು, ಮೇ 26 : ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿರುವ ದಕ್ಷಾ ಜೈನ್ ಅವರು ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ. ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಜೈನ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮೂಡಬಿದಿರೆಯ
ಆಳ್ವಾಸ್
ಪಿಯುಸಿ
ಕಾಲೇಜಿನ
ದಕ್ಷಾ
ಜೈನ್
ಅವರು
593
ಅಂಕಗಳನ್ನು
ಪಡೆದು
ವಾಣಿಜ್ಯ
ವಿಭಾಗದಲ್ಲಿ
ರಾಜ್ಯಕ್ಕೆ
ದ್ವಿತೀಯ
ಸ್ಥಾನಗಳಿಸಿದ್ದಾರೆ.
ದಕ್ಷಾ
ಮೂಡಬಿದಿರೆಯ
ಪ್ರವೀಣ್
ಚಂದ್ರ
ಮತ್ತು
ಮಲ್ಲಿಕಾ
ದಂಪತಿಯ
ಪುತ್ರಿ.
[2ನೇ
ಪಿಯುಸಿ
ಫೇಲಾದವರಿಗೆ
ಭರವಸೆ
ಬೆಳಕು]
ದಕ್ಷಾ ಜೈನ್ ಬ್ಯುಸಿನೆಸ್ ಸ್ಟಡೀಸ್ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಸ್ಟಾಟಿಟಿಕ್ಸ್ನಲ್ಲಿ 100, ಬೇಸಿಕ್ ಮ್ಯಾಥಮ್ಯಾಟಿಕ್ಸ್ನಲ್ಲಿ 100, ಇಂಗ್ಲೀಷ್ನಲ್ಲಿ 94 ಮತ್ತು ಸಂಸ್ಕೃತದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ. [ಕಲಾ ಪ್ರವೀಣೆಗೆ ಐಎಎಸ್ ಕನಸು]
ಫಲಿತಾಂಶದ ಬಗ್ಗೆ ಸಂತಸ ಹಂಚಿಕೊಂಡಿರುವ ದಕ್ಷಾ ಜೈನ್ ಅವರು, 'ನನಗೆ ಐಎಎಸ್ ಅಧಿಕಾರಿಯಾಗುವ ಕನಸಿದೆ. ಕಾಲೇಜಿನಲ್ಲಿ ಮಾಡಿದ ಪಾಠಗಳನ್ನು ಮಾತ್ರ ಓದುತ್ತಿದ್ದೆ. ಎಲ್ಲಿಯೂ ಕೋಚಿಂಗ್ ಪಡೆದುಕೊಂಡಿಲ್ಲ' ಎಂದು ಹೇಳಿದ್ದಾರೆ. [ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?]
ವೈಷ್ಣವಿಗೆ ವೈದ್ಯೆಯಾಗುವ ಕನಸು : ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಎಕ್ಸ್ಪರ್ಟ್ ಪಿಯು ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿನಿ ವೈಷ್ಣವಿ ಬಲ್ಲಾಳ್ ಅವರಿಗೆ ವೈದ್ಯೆಯಾಗುವ ಕನಸಿದೆ. ಇಂಗ್ಲೀಷ್ ವಿಷಯದಲ್ಲಿ ವೈಷ್ಣವಿ ಅವರಿಗೆ 90 ಅಂಕ ಬಂದಿದೆ. ಆದರೆ, ಅವರು 96 ಅಂಕಗಳ ನಿರೀಕ್ಷೆಯಲ್ಲಿದ್ದರು. ಆದ್ದರಿಂದ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.