ಆರೋಗ್ಯ ಇಲಾಖೆಯಿಂದ ರಕ್ತದಾನಿಗಳಿಗಾಗಿ ವಾಹನದ ವ್ಯವಸ್ಥೆ

ಬೆಂಗಳೂರು, ಏಪ್ರಿಲ್ 28: ಲಾಕ್ ಡೌನ್ ಪರಿಣಾಮ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ರಕ್ತದಾನಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ನಡೆಸಲು ತೊಂದರೆಯಾಗಿದೆ.

Recommended Video

      ರೈತನ ಪತ್ನಿ ವಿಡಿಯೋ ನೋಡಿದ ಕೂಡಲೇ ಫೋನ್ ಮಾಡಿದ C M..? | Oneindia Kannada

      ಸರಿಯಾದ ಸಮಯಕ್ಕೆ ರಕ್ತ ದೊರಕದಿದ್ದರೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೂ ತೊಂದರೆಯಾಗಲಿದೆ. ಕರ್ನಾಟಕದ ಆರೋಗ್ಯ ಇಲಾಖೆ ರಕ್ತದಾನಿಗಳಿಗೆ ನೆರವಾಗಲು ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ.

      ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಕ್ತದಾನಿಗಳಿಗಾಗಿಯೇ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ರಕ್ತ ದಾನ ಮಾಡುವವರು ಇಲಾಖೆ ನೀಡಿರುವ ನಂಬರ್‌ಗೆ ಕರೆ ಮಾಡಿದರೆ ಅವರನ್ನು ರಕ್ತ ನೀಡುವ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ.

      Transport Service For Blood Donors In Karnataka

      ಲಾಕ್ ಡೌನ್ ಸಂದರ್ಭದಲ್ಲಿ ರಕ್ತ ದಾನಿಗಳು ಮತ್ತು ರಕ್ತವನ್ನು ಪಡೆಯುವ ಜನರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಇದರಿಂದಾಗಿ ನೂರಾರು ರೋಗಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ.

      ಸಾಮಾನ್ಯ ದಿನಗಳಲ್ಲಿ ಹಲವಾರು ಆಟೋ ಚಾಲಕರು, ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವವರು, ಸಂಘಟನೆಗಳ ಕಾರ್ಯಕರ್ತರು ರಕ್ತ ನೀಡುತ್ತಾರೆ. ಆದರೆ, ಈಗ ಒಂದು ಪ್ರದೇಶದಿಂದ ಮತ್ತೊಂದು ಕಡೆ ಸಂಚಾರ ನಡೆಸುವುದು ಕಷ್ಟವಾಗಿದೆ.

      ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿರುವ ಆರೋಗ್ಯ ಇಲಾಖೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡವವರಿಗೆ ವಾಹನದ ವ್ಯವಸ್ಥೆ ಮಾಡಿದೆ. ರಕ್ತದಾನ ಮಾಡಲು ಹೋಗುವವರು 9154153920 ನಂಬರ್‌ಗೆ ಕರೆ ಮಾಡಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+