Get Updates
Get notified of breaking news, exclusive insights, and must-see stories!

ಕೈ ಹಿಡಿಯದ ಪ್ರೀತಿ; ಸ್ವಾಭಿಮಾನ ಬದುಕಿಗೆ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಸಾಹಸಿ ತೃತೀಯ ಲಿಂಗಿ!

ಬೆಂಗಳೂರು, ಜ. 06: ಹುಟ್ಟಿದ್ದು ಗಂಡಾಗಿ. ಭಾವನೆಗಳು ಹೆಣ್ಣಾಗಿದ್ದವು. ನಮ್ಮ ಪ್ರೀತಿಯ ರಾಮು ಕೊನೆಗೂ ಒಂದು ದಿನ ಮೊನಿಷಾ ಆಗಿ ಬದಲಾದಳು. ಎಸ್ಎಸ್ಎಲ್ ಸಿಯಲ್ಲಿ ಫೇಲಾದ ಬಳಿಕ ಏಕಾಂಗಿಯಾಗಿ ಸೇರಿದ್ದು ಮುಂಬಯಿ ಮಂಗಳಮುಖಿಯರ ಅಡ್ಡಾ. ಲಿಂಗಪರಿವರ್ತನೆ ಮೂಲಕ ರಾಮು ಮೊನಿಷಳಾಗಿ ಬದಲಾಗಿದ್ದಳು. ಆಗ ಟಿಸಿಲೊಡಿದ್ದು ಪ್ರೀತಿ. ಅಲ್ಲಿಯೂ ತಿರಸ್ಕಾರ. ಹೀಗೆ ಸಮಾಜದ ತುಳಿತಕ್ಕೆ ಸಿಲುಕಿದ ಮೊನಿಷಾ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ತೃತೀಯ ಲಿಂಗಿಗಳಿಗೆ ಸ್ಫೂರ್ತಿದಾಯಕವಾಗಿದ್ದಾರೆ.

ಸರ್ಕಾರಿ ನೌಕರಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಇಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದನ್ನು ಸ್ಮರಿಸಬಹುದು. ಆದರೆ, ಹೈಕೋರ್ಟ್ ಆದೇಶಕ್ಕೂ ಮೊದಲು, ಒಬ್ಬ ತೃತೀಯ ಲಿಂಗಿ ಸರ್ಕಾರಿ ನೌಕರಿ ಗಿಟ್ಟಿಸಲು ಏನೆಲ್ಲಾ ಸರ್ಕಸ್ ಮಾಡಿದ್ದಾಳೆ ಎಂಬ ರೋಚಕ ಕಥೆ, ಜೈ ಭೀಮ್ ಸಿನಿಮಾಗಿಂತಲೂ ರೋಚಕವಾಗಿದೆ. ಮಾತ್ರವಲ್ಲ ಇಡೀ ತೃತೀಯ ಲಿಂಗಿ ಸಮುದಾಯದ ಬಗ್ಗೆ ಹೆಮ್ಮೆ ಪಡುವಂತಹ ಸಾಧನೆ ಇದಾಗಿದೆ.

ಹುಟ್ಟಿದ್ದು ಗಂಡಾಗಿ. ಹೆಸರು ರಾಮು. ಆದರೆ ದಿನಗಳು ಕಳೆಯುತ್ತಿದ್ದಂತೆ ಹೆಣ್ಣಿನ ಭಾವನೆಗಳು ಆವರಿಸಿದವು. ಹೆಣ್ಣಾಗುವ ಆಸೆಯಿಂದಲೇ ಶಾಲೆಯಲ್ಲಿ ಸ್ತ್ರೀ ಪಾತ್ರ ಮಾಡಿದಳು. ಇದರಿಂದ ರಾಮು ಮನೆಯಲ್ಲಿಯೇ ತಿರಸ್ಕಾರಕ್ಕೆ ಒಳಗಾದರು. ರಾಮು ಸರಿಹೋಗುತ್ತಾನೆ ಎಂಬ ಕುಟುಂಬದ ಆಸೆ ನಿರಾಸೆಯಾಗಿತ್ತು. ಎಸ್ಎಸ್ಎಲ್‌ಸಿ ಫೇಲಾದ ರಾಮು ಮನೆ ಬಿಟ್ಟು ಹೊರಟ. ಮುಂಬಯಿಯಲ್ಲಿರುವ ಮಂಗಳಮುಖಿ ಸಮುದಾಯ ಸೇರಿದಳು. ಅಲ್ಲಿ ಭಿಕ್ಷಾಟನೆ ಮಾಡಿ ದುಡಿದ ಹಣದಲ್ಲಿ ಲಿಂಗ ಪರಿವರ್ತನೆಗೆ ಒಳಗಾದ ರಾಮು ಬೆಂಗಳೂರಿಗೆ ಬಂದಾಗ ಮನೆಯವರಿಂದ ಮತ್ತೆ ತಿರಸ್ಕಾರ.

Transgender Woman Monisha Got Group D Post in Karnataka Vidhan Parishad; Here is the Story
ಮಗನ ಈ ಹಾದಿ ನೋಡಿ ಅಪ್ಪ ಕೊನೆಯುಸಿರೆಳೆದಿದ್ದಾರೆ. ದಿಕ್ಕು ತೋಚದಿದ್ದಾಗ ವ್ಯಕ್ತಿಯೊಬ್ಬರನ್ನು ಮೊನಿಷಾ ಪ್ರೀತಿಸಿದಳು. ಇನ್ನೇನು ಹೊಸ ಬದುಕು ಎನ್ನುವಷ್ಟರಲ್ಲಿ, ಕೈ ಹಿಡಿದ ಸಂಗಾತಿ ಮನೆಯವರ ಮರ್ಯಾದೆಗೆ ಅಂಜಿ ದೂರವಾದ. ಒಳಿದ ಪ್ರೀತಿ ಉಳಿಸಿಕೊಳ್ಳಲಾಗದೇ ಮೊನಿಷಾ ಕೊನೆಯದಾಗಿ ಆಯ್ಕೆ ಮಾಡಿಕೊಂಡಿದ್ದು ಸ್ವಾಭಿಮಾನದ ಬದುಕು.

Transgender Woman Monisha Got Group D Post in Karnataka Vidhan Parishad; Here is the Story
ಉದ್ಯೋಗಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಿದ್ದಾರೆ. ಈ ಹಿಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್ ನೆರವಿನಿಂದ ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡದ ಮೊನಿಷಾ ಇಂದಿರಾನಗರ ಕೊಳೆಗೇರಿಯಲ್ಲಿ ಬಟ್ಟೆ ವ್ಯಾಪಾರ ಶುರು ಮಾಡಿದ್ದಾರೆ. ಆನಂತರ ಅಲ್ಲಿನ ಜನರ ಪ್ರೀತಿ ಗಳಿಸಿ ನಾಯಕಿಯಾಗಿ ರೂಪಗೊಂಡಿದ್ದಾರೆ. ಆ ಬಳಿಕ ಕೊಳಗೇರಿಯ ಜನರ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದ್ದ ಮೊನಿಷಾ ಕಾಂಗ್ರೆಸ್ ಮುಖಂಡರ ಕಣ್ಣಿಗೆ ಬಿದ್ದಿದ್ದಾರೆ. ಕಾಂಗ್ರೆಸ್ ಮುಖಂಡ ರಮೇಶ್ ಅವರ ನೆರವಿನಿಂದ ಇಂದಿರಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿದ್ದಾಳೆ. ರಾಜಕೀಯ ನಂಟಿನ ಜೆಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಹೋರಾಟ ಆರಂಭಿಸಿದಳು.

Transgender Woman Monisha Got Group D Post in Karnataka Vidhan Parishad; Here is the Story
ಸರ್ಕಾರಿ ಉದ್ಯೋಗ ಪಡೆಯಲು ಮೊನಿಷಾಗೆ ದಾಖಲಗಳೇ ಅಡ್ಡಿಯಾಗಿದ್ದವು. ಅರಂಭದ ದಾಖಲೆಗಳ್ಲಲಿ ರಾಮು ಆಗಿದ್ದ ಮೊನಿಷಾ ದಾಖಲೆ ಸರಿ ಪಡಿಸಿಕೊಂಡು ವಿಧಾನ ಪರಿಷತ್ ಸಚಿವಾಲಯದ ಡ್ರಿ ಗ್ರೂಪ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಅರ್ಹತೆ ಇದ್ದರೂ ಸಂದರ್ಶನಕ್ಕೆ ಕರೆಯಲಿಲ್ಲ. ಹೈಕೋರ್ಟ್ ನ ಕದ ತಟ್ಟಿ ನ್ಯಾಯ ಕೇಳುತ್ತಾಳೆ. ಕಾನೂನಾತ್ಮಕವಾಗಿ ತಮ್ಮ ಹಕ್ಕು ಕೇಳಿದಳು. ಅದೇ ಸಮಯಕ್ಕೆ ಸುಪ್ರೀಂಕೋರ್ಟ್ ನೀಡಿದ್ದ ಲೈಂಗಿಕ ಅಲ್ಪ ಸಂಖ್ಯಾತರರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಿ ಎಂಬ ತೀರ್ಪು ನೆರವಿಗೆ ಬಂತು. ಸರ್ಕಾರಿ ನೌಕರಿ ಪಡೆದರೂ ಅದು ಕಾನೂನು ಸಂಘರ್ಷಕ್ಕೆ ಎಡೆ ಮಡಿಕೊಟ್ಟಿತು. ಅಂದಿನ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರ ಆದೇಶವೂ ಮೋನಿಷಾ ಅವರಿಗೆ ಸರ್ಕಾರಿ ನೌಕರಿ ದೊರೆಯುವಲ್ಲಿ ಮಹತ್ವ ಪಾತ್ರ ವಹಿಸಿತು.

Transgender Woman Monisha Got Group D Post in Karnataka Vidhan Parishad; Here is the Story
ಹೈಕೋರ್ಟ್ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ ಮೋನಿಷಾ ಅವರಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಿತು. ಗುತ್ತಿಗೆ ನೌಕರಿ ಎಂಬ ಚಿಂತೆ ಅವರನ್ನು ಬಿಟ್ಟಿರಲಿಲ್ಲ. ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಹಂಗಾಮಿ ಸಭಾಪತಿ ಆಗಿದ್ದ ಸಮಯದಲ್ಲಿ ನೌಕರಿಯನ್ನು ಕಾಯಂಗೊಳಿಸಿಕೊಂಡ ಮೋನಿಷಾ ತಮ್ಮಂತಿರುವ ಇತರ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿ ಎಂಬುದನ್ನು ತೋರಿಸಿದ್ದಾರೆ. ಬಾಲಕ ರಾಮು ಮೋನಿಷಾಳಾಗಿ ರೂಪಾಂತರಗೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ನಿಜವಾದ ಸ್ಟೋರಿ ಎಂತವರ ಕಣ್ಣಲ್ಲಿ ನೀರು ತರಿಸುತ್ತದೆ. ಇದು ಜೈ ಭೀಮ್ ಸಿನಿಮಾ ಮೀರಿಸುವ ಕಥೆಯಂತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+