ಚಿತ್ರಗಳಲ್ಲಿ: ದೀಪಾವಳಿ ಹಣತೆ ಹುಡುಕಾಟ
ಬೆಂಗಳೂರು, ಅ.31: ಬೆಳಕಿನ ಹಬ್ಬ ದೀಪಾವಳಿಗೆ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕಾಗಿ ವಿವಿಧ ಆಕಾರಗಳ ಹಣತೆಗಳ ಆಯ್ಕೆ, ಖರೀದಿ ಉತ್ಸಾಹದಿಂದ ಸಾಗಿದೆ.
ದೇಶದ ಹಲವೆಡೆ ಬಾಂಬ್ ಸ್ಫೋಟ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಅಂಗವಾಗಿ ಮಣ್ಣಿನಿಂದ ತಯಾರಿಸಲಾದ ಹಣತೆಗಳನ್ನು ಎಲ್ಲೆಡೆ ಹಚ್ಚಲಾಗುತ್ತಿದೆ. ಗಣೇಶ, ಸರಸ್ವತಿ, ಸಾಯಿಬಾಬಾ, ಹಣತೆ ಹಿಡಿದು ಕುಳಿತ ಮಹಿಳೆ, ನಕ್ಷತ್ರ, ಹೂವು, ಬಟ್ಟಲು ಹೀಗೆ ಹಲವು ಆಕಾರದ ಹಣತೆಗಳು ದೊರೆಯುತ್ತಿವೆ.
ಸಾಂಪ್ರದಾಯಿಕ ಶೈಲಿ ಜತೆಗೆ ಆಧುನಿಕ ಶೈಲಿಯ ಗೂಡುದೀಪಗಳು ಜನಪ್ರಿಯತೆ ಗಳಿಸುತ್ತಿವೆ. ಗ್ಲಾಸ್ ಪೇಪರ್, ಬಟ್ಟೆ , ಪ್ಲಾಸ್ಟಿಕ್, ಫೈಬರ್ ಮುಂತಾದ ವಸ್ತುಗಳಿಂದ ತಯಾರಿಸಲಾಗಿರುವ ಗೂಡುದೀಪಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ದೀಪಗಳಿಗೆ 100 ರೂಪಾಯಿಗಳಿಂದ 500 ರೂಪಾಯಿವರೆಗೆ ಇದೆ. ಅಸ್ಸಾಂನಲ್ಲಿ ದೀಪ ಹಿಡಿದ ಮಹಿಳೆಯರ ಚಿತ್ರ ಇಲ್ಲಿದೆ.
ಉಳಿದಂತೆ ಗುಲ್ ಮಾರ್ಗ್ ನಲ್ಲಿ ಮಂಜಿನ ಹನಿ, ಅಹಮದಾಬಾದಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ವಾರ್ಷಿಕೋತ್ಸವ, ಮುಂಬೈನಲ್ಲಿ ಧೂಮ್ 3 ಪ್ರಚಾರದಲ್ಲಿ ತೊಡಗಿರುವ ಅಮೀರ್ ಖಾನ್, ಅಭಿಷೇಕ್ ಬಚ್ಚನ್, ಶ್ರೀಹರಿಕೋಟದಲ್ಲಿ ಮಂಗಳಯಾನದ ತಯಾರಿ, ನವದೆಹಲಿಯಲ್ಲಿ ಜಾರಿ ಬಿದ್ದ ಸಿಪಿಐಎಂ ನಾಯಕರು, ಹೈದರಾಬಾದಿನ ಬಸ್ ದುರಂತರದಲ್ಲಿ ಮೃತಪಟ್ಟ ಬೆಂಗಳೂರಿನ ಕುಟುಂಬದವರ ರೋದನ ಇವೇ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ..

ಅಸ್ಸಾಂನಲ್ಲಿ
ಅಸ್ಸಾಂನಲ್ಲಿ ದೀಪ ಹಿಡಿದ ಮಹಿಳೆಯರ ಚಿತ್ರ

ಧೂಮ್ 3 ಪ್ರಚಾರ
ಮುಂಬೈನಲ್ಲಿ ಧೂಮ್ 3 ಪ್ರಚಾರದಲ್ಲಿ ತೊಡಗಿರುವ ಅಮೀರ್ ಖಾನ್, ಅಭಿಷೇಕ್ ಬಚ್ಚನ್

ಹೈದರಾಬಾದಿನ ಬಸ್ ದುರಂತ
ಹೈದರಾಬಾದಿನ ಮೆಹಬೂಬ್ ನಗರ ಜಿಲ್ಲೆಯಲ್ಲಿನ ಬಸ್ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ವ್ಯಕ್ತಿಯೊಬ್ಬರ ಕುಟುಂಬದವರ ರೋದನ. PTI Photo by Shailendra Bhojak

ಗುಲ್ ಮಾರ್ಗ್
ಗುಲ್ ಮಾರ್ಗ್: ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಪ್ರವಾಸಿಗಳು ಮಂಜಿನ ಮಳೆನಡುವೆ ಸಾಗಿದ್ದಾರೆ.

ರಂಗೋಲಿ ಸ್ಪರ್ಧೆ
ಅಹಮದಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಶ್ರೀಹರಿಕೋಟ
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಸೆಂಟರ್ ನಲ್ಲಿ ಮಂಗಳಯಾನಕ್ಕಾಗಿ ಪಿಎಸ್ ಎಲ್ ವಿ ಸಿ 25 ತಯಾರಿ ಗೊಳಿಸಲಾಗುತ್ತಿದೆ.PTI Photo R Senthil Kumar












Click it and Unblock the Notifications