7 ಟಿಎಂಸಿ ಅಡಿ ನೀರು ಬಿಡಿಸಿ: ಸಿದ್ದರಾಮಯ್ಯಗೆ ತ.ನಾಡು ಸಿಎಂ ಪತ್ರ
ಬೆಂಗಳೂರು, ಜನವರಿ 13: ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಗದವೊಂದು ಬಂದಿದೆ. "ನಿಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟು ತಕ್ಷಣವೇ ಕಾವೇರಿ ನದಿಯ ನೀರನ್ನು ಬಿಡಿಸಿ" ಎಂದು ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಅಂದಹಾಗೆ ಆ ಪತ್ರದ ಪ್ರಮುಖ ಅಂಶ ಏನು ಅಂದರೆ, ನಿಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಈಗಂದರೆ ಈಗಲೇ 7 ಟಿಎಂಸಿ ಅಡಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿಸಿ. ಬಾಕಿ 8 ಟಿಎಂಸಿ ಅಡಿ ನೀರನ್ನು ಇನ್ನು ಹದಿಬೈದು ದಿನದೊಳಗಾಗಿ ಬಿಡಿಸಿ. ಏಕೆಂದರೆ ತಮಿಳುನಾಡಿನ ರೈತರು ಬೆಳೆದ ಬೆಳೆಯನ್ನು ಉಳಿಸಬೇಕಾಗಿದೆ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.

ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸರಕಾರ ಸಲ್ಲಿಸಿದ ಆಕ್ಷೇಪಣೆ ಅರ್ಜಿ ಬರುವ ತಿಂಗಳು ತೀರ್ಪು ಬರುವ ಸಾಧ್ಯತೆ ಇದೆ. ಆ ತೀರ್ಪು ಕರ್ನಾಟಕದ ಪರವಾಗಿ ಬರುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ರಾಯಚೂರಿನ ದೇವದುರ್ಗದಲ್ಲಿ ಈಚೆಗೆ ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications