Stories Of Strength; ಕೊರೊನಾ Negative ಎಂಬ ಶುಭ ಸುದ್ದಿ
" ಕೋವಿಡ್ ಟೆಸ್ಟ್ ರಿಪೋರ್ಟ್ negative ಬಂತು. ಆರಾಮಾಗಿದೀನಿ, ಸ್ವಲ್ಪ ಸುಸ್ತು ಆಗ್ತಿದೆ ಅಷ್ಟೇ. ನಾಳೆ ಡಿಸ್ಚಾರ್ಜ್ ಮಾಡ್ತಿನಿ ಅಂತ ಹೇಳಿದ್ರು" ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶುಭ ಹೇಳಿದ್ದಿಷ್ಟು.
ಅದು ಮಾರ್ಚ್ ತಿಂಗಳು. work from home ಎಂದು ಮನೆಯಲ್ಲಿ ಕೀ ಬೋರ್ಡ್ ಕುಟ್ಟುತ್ತಾ ಕುಳಿತಿದ್ದಾಗ ಫೋನ್ ರಿಂಗ್ ಆಯಿತು. ಆಪ್ತ ಸ್ನೇಹಿತೆಯ ಕರೆ, ಹೇಳು ಎಂದೆ, "ಅತ್ತೆಗೆ ಕೋವಿಡ್ ಪಾಸಿಟಿವ್, ಆಸ್ಪತ್ರೆಗೆ ಅಡ್ಮಿಟ್ ಮಾಡಿದಾರೆ. ನಂದು ಮತ್ತೆ ಮಾವನ ರಿಪೋರ್ಟ್ ನಾಳೆ ಬರತ್ತೆ".
ಫೋನ್ ಕರೆ ಒಂದು ಕ್ಷಣ ಆತಂಕ ಮೂಡಿಸಿತ್ತು. ಆಪ್ತ ವಲಯದಲ್ಲಿ ಕಂಡು ಬಂದ ಮೊದಲ ಕೋವಿಡ್ ಪ್ರರಣವಿದು. "ಏನೂ ಆಗಲ್ಲ ಧೈರ್ಯವಾಗಿರು, ಏನಾದ್ರು ಹೆಲ್ಪ್ ಬೇಕಾದ್ರೆ ಪೋನ್ ಮಾಡು" ಎಂದು ಹೇಳಿದೆ ಅಷ್ಟೇ.

ಮರುದಿನ ಮತ್ತೆ ಫೋನ್, "ನಂಗೆ ಮತ್ತು ಮಾವನಿಗೆ ಪಾಸಿಟಿವ್. ಬೆಡ್ ಸಿಕ್ಕಿದೆ, ಸಂಜೆ ಅಡ್ಮಿಟ್ ಆಗ್ತಿವಿ. ಧೈರ್ಯ ತಂದುಕೋ ಏನೂ ಆಗಲ್ಲ. ಅವರಿಗೂ ಧೈರ್ಯವಾಗಿರಲು ಹೇಳು" ಎಂದು ಮತ್ತೆ ಅದೇ ಮಾತು ಹೇಳಿದೆ.
ಸಣ್ಣದಾಗಿ ಜ್ವರ ಬಂದ ಕಾರಣ ಶುಭ, ಅವರ ಮಾವ ಆಸ್ಪತ್ರೆಗೆ ಆಡ್ಮಿಟ್ ಆದರು. ಅತ್ತೆಗೆ ಉಸಿರಾಟದ ತೊಂದರೆ ಉಂಟಾಗಿ ಐಸಿಯುಗೆ ಶಿಫ್ಟ್ ಮಾಡಿದರು. ಶುಭ ಪತಿಯ ವರದಿಗೆ ನೆಗೆಟಿವ್ ಬಂದಿತು.
ಕೋವಿಡ್ ವಿಚಿತ್ರ ಕಾಯಿಲೆ. ಆಪ್ತರಿಗೆ ಬಂದು ಅವರು ಆಸ್ಪತ್ರೆ ಸೇರಿದರೂ ಹೋಗಿ ನೋಡಲು ಆಗುವುದಿಲ್ಲ. ಚಿಕಿತ್ಸೆ ಪಡೆಯುತ್ತಿರುವವರಿಗೂ ಆತಂಕ. ಹೊರಗಡೆ ಇರುವವರಿಗೂ ಆತಂಕ.
ಕೋವಿಡ್ ವಾರ್ಡ್ನಲ್ಲಿ ಫೋನ್ ಬಳಕೆ ಮಾಡಲು ಅನುಮತಿ ಇರುವ ಕಾರಣ ವಾಟ್ಸಪ್ ಚಾಟ್ನಲ್ಲಿ ಆರೋಗ್ಯದ ಮಾಹಿತಿ ಸಿಗುತ್ತಿತ್ತು. ಮಾತ್ರೆ ಕೊಟ್ಟರು, ಮಧ್ಯಾಹ್ನದ ಫುಡ್ ಇದು, ರಾತ್ರಿ ಕುಡಿಯಲು ಹಾಲು ಕೊಟ್ಟರು ಹೀಗೆ ಅಪ್ಡೇಟ್ ಬರುತ್ತಿತ್ತು.
ರೋಗದ ಲಕ್ಷಣಗಳು ಇಲ್ಲದೇ ಕೇವಲ ಜ್ವರ ಇದಿದ್ದರಿಂದ ಎರಡು ದಿನದಲ್ಲಿ ಶುಭ ಮತ್ತು ಆಕೆಯ ಮಾವ ಸುಧಾರಿಸಿಕೊಳ್ಳ ತೊಡಗಿದರು. ಇದು ಸ್ಪಷ್ಟ ಮಟ್ಟಿಗಿನ ನೆಮ್ಮದಿಯನ್ನು ನೀಡಿತು. ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡ್ತಾರೆ ಎಂಬ ಮಾಹಿತಿಯೂ ಸಿಕ್ತು.
ಆದರೆ ಅದೇ ಆಸ್ಪತ್ರೆಯ ಐಸಿಯುನಲ್ಲಿದ್ದ ಆಕೆಯ ಅತ್ತೆ ಪರಿಸ್ಥಿತಿ ಸುಧಾರಿಸಲಿಲ್ಲ. ಎರಡು ದಿನ ಉಸಿರಾಟದ ಸಮಸ್ಯೆ ಎದುರಿಸಿದ ಅವರು ಮೂರನೇ ದಿನ ಸಾವನ್ನಪ್ಪಿದ್ದರು. ಪತಿ ಮತ್ತು ಸೊಸೆ ಆಸ್ಪತ್ರೆಯಲ್ಲಿದ್ದ ಕಾರಣ ಅಂತ್ಯ ಸಂಸ್ಕಾರದಲ್ಲಿ ಸಹ ಭಾಗಿಯಾಗಲು ಆಗಲಿಲ್ಲ.
ಶುಭ ಪತಿ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯ ಮುಗಿಸಿದರು. "ಅವರಿಬ್ಬರು ಆರೋಗ್ಯವಾಗಿ ಹೊರ ಬಂದರೆ ಅಷ್ಟೇ ಸಾಕು" ಎಂಬ ಅವರ ಮಾತಿನಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. "ಏನೂ ಆಗಲ್ಲ" ಎಂದು ಮಾತಿನಲ್ಲಿ ಧೈರ್ಯ ಹೇಳಿದೆ.
ಇದಾದ ಎರಡು ದಿನಗಳ ಕಾಲ ವಾಟ್ಸಪ್ ಮೆಸೇಜ್, ಫೋನ್ ಕರೆ ಧೈರ್ಯದ ಮಾತುಗಳು ಹೀಗೆ ಸಾಗಿತು. ಬಳಿಕ ಕೋವಿಡ್ ವರದಿ ನೆಗೆಟಿವ್ ಬಂತು ನಾಳೆ ಡಿಸ್ಚಾರ್ಜ್ ಎಂದು ಹೇಳಿದಾಗ ನೆಮ್ಮದಿ. ಮರುದಿನ ಡಿಸ್ಚಾರ್ಜ್ ಆದರು. ಶುಭ ಮತ್ತು ಮಾವ ಕೋವಿಡ್ ಗೆದ್ದಿದ್ದರು.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications