ರಾಜು ಅನಂತಸ್ವಾಮಿ ಹೆಸರಿನಲ್ಲಿ ಗಾಯನ ಸ್ಪರ್ಧೆ
ಬೆಂಗಳೂರು, ಮೇ 18: ರಾಜ್ಯದ ಪ್ರತಿಭಾವಂತ 'ಹಾಡು ಹಕ್ಕಿ' ಗಳಿಗೆ ಉತ್ತಮವಾದ ವೇದಿಕೆ ಇಲ್ಲಿದೆ. ದಿವಂಗತ ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಮತ್ತೊಮ್ಮೆ ಸಂಗೀತಪ್ರೇಮಿಗಳ ಮುಂದೆ ಪ್ರಸ್ತುತ ಪಡಿಸಲು ಮಂದ್ರ ಸಾಂಸ್ಕೃತಿಕ ಸಂಸ್ಥೆ ಮುಂದಾಗಿದೆ,
ರಾಜ್ಯ ಮಟ್ಟದ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮೇ 20ರೊಳಗೆ ಆಸಕ್ತರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಸಂದೀಪ್ ರವಿಕುಮಾರ್ +91-9916212695
ಜ್ಯೂನಿಯರ್ ವಿಭಾಗ : 06ರಿಂದ 14 ವಯೋಮಿತಿ
ಸೀನಿಯರ್ ವಿಭಾಗ: 15 ರಿಂದ 24 ವಯೋಮಿತಿ

18ರಿಂದ 19 ಜೂನ್ 2016ರಂದು ಸ್ಪರ್ಧೆ ನಡೆಯಲಿದ್ದು ಜೂನ್ 24ರಂದು ಗ್ರ್ಯಾಂಡ್ ಫಿನಾಲೆ ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆ ಶುಲ್ಕ 500 ರು. (ಒನ್ ಇಂಡಿಯಾ ಸುದ್ದಿ)












Click it and Unblock the Notifications