ಜಿಎಸ್ಟಿ ಬಗ್ಗೆ ಚರ್ಚಿಸಲು ಸೆ.14ರಂದು ವಿಶೇಷ ಅಧಿವೇಶನ
ಬೆಂಗಳೂರು, ಸೆಪ್ಟೆಂಬರ್ 01 : ಮಹತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧೇಯಕದ ಬಗ್ಗೆ ಚರ್ಚೆ ನಡೆಸಲು ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹತ್ವದ ಜಿಎಸ್ಟಿ ವಿಧೇಯಕ ಅಂಗೀಕಾರವಾಗಿದೆ.
'ಸರಕು
ಮತ್ತು
ಸೇವಾ
ತೆರಿಗೆ
ವಿಧೇಯಕ
ಮಂಡಿಸಲು
ರಾಜ್ಯ
ವಿಧಾನ
ಮಂಡಲದ
ಉಭಯ
ಸದನಗಳ
ಒಂದು
ದಿನದ
ವಿಶೇಷ
ಅಧಿವೇಶನ
ಸೆಪ್ಟೆಂಬರ್
14
ರಂದು
ನಡೆಯಲಿದೆ'
ಎಂದು
ಕಾನೂನು
ಸಚಿವ
ಟಿ.ಬಿ.ಜಯಚಂದ್ರ
ಹೇಳಿದ್ದಾರೆ.[ಕರ್ನಾಟಕದ
ಆದಾಯದ
ಮೇಲೆ
ಜಿಎಸ್ಟಿ
ಪರಿಣಾಮವೇನು?]
ಬೆಂಗಳೂರಿನ ವಿಧಾನಸೌಧದಲ್ಲಿ ಸೆ.14ರ ಬುಧವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾಗಲಿದೆ. ಸರಕು ಮತ್ತು ಸೇವಾ ತೆರಿಗೆ ವಿಧೇಯಕವನ್ನು ಮಂಡಿಸಿ, ಚರ್ಚೆ ನಡೆಸಿ ಉಭಯ ಸದನಗಳಲ್ಲೂ ಅಂಗೀಕಾರ ಪಡೆಯಲಾಗುತ್ತದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]
ರಾಷ್ಟ್ರದಾದ್ಯಂತ ಏಕರೂಪ ತೆರಿಗೆಯನ್ನು ಜಾರಿಗೆ ತರುವ, ಸರಕು ಮತ್ತು ಸೇವಾ ತೆರಿಗೆ ವಿಧೇಯಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ರಾಜ್ಯದಲ್ಲಿಯೂ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದರೆ ವ್ಯಾಟ್ ಅಥವಾ ಮೌಲ್ಯವರ್ಧಿತ ತೆರಿಗೆಯಲ್ಲಿ ಅರ್ಧದಷ್ಟು ಆದಾಯವನ್ನು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಹಂಚಿಕೊಳ್ಳಬೇಕು.[ಜಿಎಸ್ಟಿ ಪರಿಣಾಮ, ಯಾವುದು ಏರಿಕೆ? ಯಾವುದು ಇಳಿಕೆ?]
ತೆರಿಗೆ ಹಂಚಿಕೆಯಿಂದ ರಾಜ್ಯಕ್ಕೆ ಆಗುವ ನಷ್ಟವನ್ನು 5 ವರ್ಷಗಳವರೆಗೆ ಕೇಂದ್ರ ಸರ್ಕಾರ ಭರಿಸುತ್ತದೆ. ಬೇರೆ ರಾಜ್ಯದಿಂದ ವಸ್ತುಗಳು ರಾಜ್ಯ ಪ್ರವೇಶ ಮಾಡುವ ಮುನ್ನ ಸಲ್ಲಿಕೆಯಾಗುತ್ತಿದ್ದ ಶೇ. 2 ತೆರಿಗೆ ಜಿಎಸ್ಟಿ ನಿಯಮದ ಅನ್ವಯ ಕೇಂದ್ರದ ಪಾಲಾಗಲಿದೆ.