ಚುನಾವಣಾ ಫಲಿತಾಂಶ: ಪಾಪ ಕಣ್ರಿ ಇವರು ಸೋಲಬಾರದಿತ್ತು
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ ಹಲವು ಘಟಾನುಘಟಿ ನಾಯಕರುಗಳು, ಹಾಲಿ ಸಚಿವರೂ ಕೂಡ ಈ ಬಾರಿ ಮಣ್ಣು ಮುಕ್ಕಿದ್ದಾರೆ. ಆದರೆ ಈ ಬಾರಿ ಕೆಲವು ನಿರ್ವಿವಾದಿತ ನಾಯಕರು ಸೋಲುಂಡಿರುವುದು ಬೇಸರದ ಸಂಗತಿ.
ಹೌದು, ಸರಳ, ಸಜ್ಜನಿಕೆಯ, ವಿವಾದಗಳಿಂದ ದೂರ ಇದ್ದವರು, ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದವರು ಎನಿಸಿಕೊಂಡಿದ್ದ ಕೆಲವು ನಾಯರು ಈ ಬಾರಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ.
ಕೆಲವು ಕಡೆ ವಿವಾದಿತ ನಾಯಕರೆನಿಸಿಕೊಂಡವರು ಸೋತಿದ್ದರೆ ಕೆಲವು ಕಡೆ ಗೆದ್ದಿದ್ದಾರೆ. ಏನೇ ಆಗಲಿ ಮತದಾರರ ನಿರ್ಣಯವೇ ಅಂತಿಮ ವಿವಾದಿತವೇ ಆಗಿರಲಿ ನಿರ್ವಿವಾದಿತವೇ ಆಗಿರಲಿ ಮತದಾರರ ಆಶೀರ್ವಾದ ಪಡೆದವರು ಗೆದ್ದಿದ್ದಾರೆ ಅಷ್ಟೆ.

ಸರಳ ವ್ಯಕ್ತಿತ್ವದ ನಾಯಕ
ಕಡೂರಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ವೈ.ಎಸ್.ವಿ.ದತ್ತ ಅವರು ಬಿಜೆಪಿಯ ಕೆ.ಎಸ್.ಪ್ರಕಾಶ್ ಅವರ ವಿರುದ್ಧ ಸುಮಾರು 15000 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಸರಳ ಜೀವನ, ಸ್ನೇಹಪರ ಮನಸ್ಸಿನಿಂದ ಉತ್ತಮ ರಾಜಕೀಯ ನಾಯಕ ಎನಿಸಿಕೊಂಡಿದ್ದ ದತ್ತ ಅವರು ಹೀನಾಯವಾಗಿ ಸೋತಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ವಿವಾದಾತೀತ ಕಿಮ್ಮನೆಗೆ ಎರಡನೇ ಸ್ಥಾನ
ಕಾಂಗ್ರೆಸ್ನ ಉತ್ತಮ ನಾಯಕರುಗಳಲ್ಲಿ ಕಿಮ್ಮನೆ ರತ್ನಾಕರ್ ಅವರು ಕೂಡಾ ಒಬ್ಬರು. ಶಿಕ್ಷಣ ಸಚಿವರಾಗಿ ದುಡಿದಿದ್ದ ಅವರು, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆದ ನಂತರ ಸಚಿವ ಸ್ಥಾನದಿಂದ ಕೆಳಗಿಳಯಬೇಕಾಯಿತು ಆದರೆ ಅವರೊಬ್ಬ ಭ್ರಷ್ಟ ಎಂಬ ಆರೋಪ ಅವರ ವಿರೋಧಿಗಳೂ ಮಾಡಲಾರರು ಆದರೆ ಅವರೂ ಸಹ ಈ ಬಾರಿ ಸೋತಿದ್ದಾರೆ. ತೀರ್ಥಹಳ್ಳಿಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ವಿರುದ್ಧ ಅವರು ಸೋತಿದ್ದಾರೆ.

ಕಾಗೋಡು ತಿಮ್ಮಪ್ಪಗೆ ಸೋಲು
ಶಿಸ್ತಿಗೆ ಹೆಸರಾಗಿದ್ದ ಕಾಗೋಡು ತಿಮ್ಮಪ್ಪ ಅಜಾತ ಶತೃ. ಆಡಳಿತದಲ್ಲಿ ಲೋಪ ಕಂಡುಬಂದಾಗ ತಮ್ಮ ಪಕ್ಷವನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಕಾಗೋಡು. ಅವರೂ ಸಹ ಕ್ಲೀನ್ ಹ್ಯಾಂಡ್ ರಾಜಕೀಯ ಮುಂಖಂಡ ಎಂದೇ ಹೆಸರಾದವರು ಆದರೆ ಈ ಬಾರಿ ಅವರೂ ಸೋತಿದ್ದಾರೆ. ಸಾಗರ ಕ್ಷೇತ್ರದಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಅವರು 8000 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಠೇವಣಿ ಕಳೆದುಕೊಂಡ 5 ರೂಪಾಯಿ ಡಾಕ್ಟರ್
ಮಂಡ್ಯದಲ್ಲಿ 5 ರೂಪಾಯಿ ಡಾಕ್ಟ್ರು ಎಂದೇ ಪ್ರಸಿದ್ಧವಾಗಿದ್ದ ಶಂಕರೇಗೌಡರು ಠೇವಣಿ ಕಳೆದುಕೊಂಡಿದ್ದಾರೆ. ಕೇವಲ 5 ರೂಪಾಯಿಗೆ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಶಂಕರೇಗೌಡರು ಸಮಾಜಸೇವೆಯನ್ನೇ ಉಸಿರಾಗಿ ಮಾಡಿಕೊಂಡಿದ್ದರು. ಇನ್ನೂ ಹೆಚ್ಚಿನ ಜನಸೇವೆ ಮಾಡಲೆಂದು ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದರು ಆದರೆ ಅವರು ಅಲ್ಲಿ ಠೇವಣಿಯನ್ನೇ ಕಳೆದುಕೊಂಡಿದ್ದಾರೆ. ಜನಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ವೈದ್ಯರ ಕೈಯನ್ನು ಜನ ಹಿಡಿದಿಲ್ಲ.

ದರ್ಶನ್ ಪುಟ್ಟಣ್ಣಯ್ಯಗೆ ಅನುಕಂಪದ ಅಲೆಯೂ ಇಲ್ಲ
ಮೇಲುಕೋಟೆ ಶಾಸಕ ರೈತ ನಾಯಕ ಪುಟ್ಟಣ್ಣಯ್ಯ ಅವರು ವಿಧಿವಶರಾದ ಬಳಿಕ ಮೇಲುಕೋಟೆ ಕ್ಷೇತ್ರದಿಂದ ಸ್ವರಾಜ್ ಇಂಡಿಯಾ ಪಕ್ಷದ ಮೂಲಕ ದರ್ಶನ್ ಪುಟ್ಟಣ್ಣಯ್ಯ ಅವರು ಕಣಕ್ಕಿಳಿದಿದ್ದರು. ವಿದೇಶದ ತಮ್ಮ ಕಂಪೆನಿಗೆ ರಾಜಿನಾಮೆ ನೀಡಿ ರೈತ ಸೇವೆಗೆಂದು ಇಲ್ಲಿಗೆ ವಾಪಾಸ್ಸಾಗಿದ್ದರು. ಆದರೆ ಜನ ಅವರ ಕೈಹಿಡಿಯಲಿಲ್ಲ, ಇಲ್ಲಿ ಜೆಡಿಎಸ್ನ ಸಿಎಸ್ ಪುಟ್ಟರಾಜು ಅವರು ಗೆಲುವು ಸಾಧಿಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯಗೆ ಕಾಂಗ್ರೆಸ್ ಬೆಂಬಲ ನೀಡಿತ್ತಾದರೂ ಮೇಲುಕೋಟೆ ಜನ ದರ್ಶನ್ ಪುಟ್ಟಣ್ಣಯ್ಯ ಕೈಹಿಡಿಯಲಿಲ್ಲ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications