ಎತ್ತಿನಹೊಳೆ ಯೋಜನೆಗೆ ವೇಗ ನೀಡಲಿದೆ ಸರ್ಕಾರ
ಬೆಂಗಳೂರು, ಸೆಪ್ಟೆಂಬರ್, 01: ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಯಲು ಸೀಮೆ ಪ್ರದೇಶದ ಭರವಸೆಯ ಯೋಜನೆ ಎನಿಸಿರುವ ಎತ್ತಿನ ಹೊಳೆ ಯೋಜನೆಯ ಅನುಷ್ಠಾನದ ವೇಗ ಹೆಚ್ಚಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಎತ್ತಿನಹೊಳೆ ಯೋಜನೆ ಹಾಗೂ ಕೋರಮಂಗಲ-ಚಲ್ಲಘಟ್ಟ ಕಣಿವೆ ಯೋಜನೆಯ ಅನುಷ್ಠಾನ ಕುರಿತಂತೆ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿದ್ದರಾಮಯ್ಯ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 12,912.36 ಕೋಟಿ ರು. ವೆಚ್ಚದ ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಯೋಜನೆ ಅನುಷ್ಠಾನದಲ್ಲಿ ಸಮಸ್ಯೆಗಳಿದ್ದಲ್ಲಿ, ಅವುಗಳನ್ನು ಕೂಡಲೇ ಸರ್ಕಾರದ ಗಮನಕ್ಕೆ ತನ್ನಿ ಎಂದು ತಿಳಿಸಿದರು.[ಎತ್ತಿನಹೊಳೆ: ಚೆನ್ನೈ ಹಸಿರುಪೀಠಕ್ಕೆ ವರ್ಗಾವಣೆಗೆ ನಿರಾಕರಣೆ]
ಕೆಲವು ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಬಗೆಹರಿಸಲು ಸಾಧ್ಯವಾಗದಿರಬಹುದು. ಯೋಜನೆಗೆ ಎದುರಾಗುತ್ತಿರುವ ತೊಡಕುಗಳನ್ನು ಸ್ಪಷ್ಟಪಡಿಸಿದ್ದಲ್ಲಿ ಅವುಗಳ ನಿವಾರಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.[ಎತ್ತಿನಹೊಳೆಗೆ ಸಿದ್ದು ಅಭಯ]
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕೂಡಲೇ ಸ್ಪಂದಿಸಿ ಸಭೆಗೆ ಹಾಜರಿದ್ದ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳನ್ನು ಆಮಂತ್ರಿಸಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾದರು. ಯೋಜನೆಯ ಅನುಷ್ಠಾನಕ್ಕೆ ಪರಿಸರ ಸಂಬಂಧೀ ಅನುಮತಿಗಳನ್ನು ದೊರಕಿಸಿಕೊಡುವಂತೆ ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಅವರಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ಜಲ
ಸಂಪನ್ಮೂಲ
ಸಚಿವ
ಎಂ.
ಬಿ.
ಪಾಟೀಲ್,
ಸಣ್ಣ
ನೀರಾವರಿ,
ಕಾನೂನು
ಮತ್ತು
ಸಂಸದೀಯ
ವ್ಯವಹಾರಗಳ
ಸಚಿವ
ಟಿ.
ಬಿ.
ಜಯಚಂದ್ರ,
ಕಂದಾಯ
ಸಚಿವ
ಕಾಗೋಡು
ತಿಮ್ಮಪ್ಪ,
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಸಚಿವ
ಕೆ.
ಆರ್.
ರಮೇಶ್
ಕುಮಾರ್,
ಸಾರಿಗೆ
ಸಚಿವ
ರಾಮಲಿಂಗಾರೆಡ್ಡಿ,
ಕೃಷಿ
ಸಚಿವ
ಕೃಷ್ಣ
ಬೈರೇಗೌಡ,
ಚಿಕ್ಕಬಳ್ಳಾಪುರ
ಕ್ಷೇತ್ರದ
ಲೋಕಸಭಾ
ಸದಸ್ಯ
ಡಾ
ಎಂ.
ವೀರಪ್ಪ
ಮೊಯ್ಲಿ,
ರಾಜ್ಯ
ಸರ್ಕಾರದ
ಮು
ಖ್ಯ
ಕಾರ್ಯದರ್ಶಿ
ಅರವಿಂದ್
ಜಾಧವ್,ಲೋಕೋಪಯೋಗಿ,
ವಾರ್ತಾ
ಹಾಗೂ
ಸಾರ್ವಜನಿಕ
ಸಂಪರ್ಕ
ಇಲಾಖೆಯ
ಸರ್ಕಾರದ
ಪ್ರಧಾನ
ಕಾರ್ಯದರ್ಶಿ
ಎಂ.
ಲಕ್ಷ್ಮೀ
ನಾರಾಯಣ್,
ಮುಖ್ಯಮಂತ್ರಿಯವರ
ಪ್ರಧಾನ
ಕಾರ್ಯದರ್ಶಿ
ಎಲ್.
ಕೆ.
ಅತೀಕ್
ಸಭೆಯಲ್ಲಿ
ಭಾಗವಹಿಸಿದ್ದರು.