ಕಲಬುರಗಿ : ಕಾಂಗ್ರೆಸ್ ಮುಖಂಡ ಗುಂಡಿಗೆ ಬಲಿ
ಕಲಬುರಗಿ, ಡಿ.9 : ಅಪರಿಚಿತರಿಂದ ಗುಂಡಿನದಾಳಿಗೆ ಒಳಗಾಗಿದ್ದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕಾಂಗ್ರೆಸ್ ಮುಖಂಡ ಶಬ್ಬೀರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಕೋರ್ಟ್ಗೆ ಸಾಕ್ಷಿ ಹೇಳಲು ಹೋಗುತ್ತಿದ್ದ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.
ಹಿಂದಿನ ಸುದ್ದಿ : ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಮುಖಂಡನ ತಲೆಗೆ ಗುಂಡುಗಳು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿತ್ತಾಪುರ
ತಾಲೂಕಿನ
ವಾಡಿ
ಪಟ್ಟಣದ
ಕಾಂಗ್ರೆಸ್
ಮುಖಂಡ
ಶಬ್ಬೀರ್
(30)
ಮೇಲೆ
ಬೊಲೆರೋ
ವಾಹನದಲ್ಲಿ
ಬಂದ
ಅಪರಿಚಿತರು
ಆಕಾಶವಾಣಿ
ಕೇಂದ್ರದ
ಸಮೀಪ
ಮಂಗಳವಾರ
ಬೆಳಗ್ಗೆ
ಗುಂಡಿನ
ದಾಳಿ
ನಡೆಸಿದ್ದಾರೆ.
ಶಬ್ಬೀರ್
ತಮ್ಮ
ಸ್ಪೆಂಡರ್
ಪ್ಲಸ್
ಬೈಕ್ನಲ್ಲಿ
ತೆರಳುವಾಗ
ಈ
ಘಟನೆ
ನಡೆದಿದೆ.
ದುಷ್ಕರ್ಮಿಗಳು ಹಾರಿಸಿದ ಗುಂಡು ಶಬ್ಬೀರ್ ಅವರ ತಲೆಗೆ ಬಿದ್ದಿದ್ದು, ಅವರು ಬೈಕ್ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಕಲಬುರಗಿ ಜಿಲ್ಲಾಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅಪರಿಚಿತರಿದ್ದ ಬೊಲೆರೋ ವಾಹನ ಮಹಾರಾಷ್ಟ್ರದ ನೊಂದಣಿ ಸಂಖ್ಯೆ ಹೊಂದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಶಬ್ಬೀರ್ ಚಿತ್ತಾಪುರ ತಾಲೂಕಿನ ವಾಡಿ ನಿವಾಸಿಯಾಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದರು ಎಂದು ತಿಳಿದುಬಂದಿದೆ.