Get Updates
Get notified of breaking news, exclusive insights, and must-see stories!

School Holiday: ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಇಂತಹ ಸುದ್ದಿ ಮತ್ತೆ ಮತ್ತೆ ಹಬ್ಬುತ್ತಿದ್ದು, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಾಗ ಆಗುತ್ತಲೇ ಇದೆ. ಈ ವರ್ಷ ಬೇಡ ಬೇಡ ಅನ್ನುವಷ್ಟು ರಜೆಗಳು ಸಿಕ್ಕೇ ಬಿಟ್ಟಿವೆ. ದಸರಾ & ದೀಪಾವಳಿ ಹಬ್ಬಕ್ಕೆ ತಿಂಗಳು ಲೆಕ್ಕದಲ್ಲಿ ರಜೆ ಸಿಕ್ಕಿದ್ದು, ಹೀಗೆ ಸಾಲು ಸಾಲು ರಜೆಗಳನ್ನು ಮುಗಿಸಿಕೊಂಡು ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಪಾಠ ಕೇಳಲು ಬಂದಿದ್ದರು. ಶಿಕ್ಷಕರು ಕೂಡ ಆದಷ್ಟು ಬೇಗ ಮಕ್ಕಳಿಗೆ ಪಾಠ ಮುಗಿಸಿ, ಪರೀಕ್ಷೆಗಳಿಗೆ ತಯಾರಿ ನಡೆಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಹೀಗಿದ್ದಾಗಲೇ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ವಿಚಾರದಲ್ಲಿ 2025 ಹೊಸ ದಾಖಲೆ ನಿರ್ಮಾಣ ಮಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ 2020 ಸಮಯದಲ್ಲಿ ಕೊರೊನಾ ಎಂಬ ಭೀಕರವಾದ ಸ್ಥಿತಿ ಎದುರಾದ ಸಮಯದಲ್ಲಿ ಶಾಲಾ & ಕಾಲೇಜುಗಳಿಗೆ ಸಾಕಷ್ಟು ರಜೆ ಘೋಷಣೆ ಮಾಡಲಾಗಿತ್ತು. ಆದರೆ ಈ ವರ್ಷ ಅಂದರೆ 2025 ಆರಂಭದಿಂದಲೇ ಶುರುವಾಗಿದೆ ರಜೆಗಳ ಸುಗ್ಗಿ ಹಬ್ಬ ಅಂತಾನೇ ಹೇಳಬಹುದು. ಯಾಕಂದ್ರೆ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಹೀಗಿದ್ದಾಗಲೇ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

School Holiday May Announced Karnataka On November 21 Of 2025 For This Reason

ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ...

ಹೌದು, ಕರ್ನಾಟಕದಲ್ಲಿ ಈ ಬಾರಿ ಹಲವು ಕಾರಣಗಳಿಗೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದು ಕಡೆ ಜೋರಾಗಿ ಮಳೆ ಬಂದಾಗ... ಇನ್ನೊಂದು ಕಡೆ ಪ್ರತಿಭಟನೆ ಮತ್ತು ಬಂದ್ ಕಾರಣಕ್ಕೆ... ಇದು ಬಿಟ್ಟು ಜಾತಿ ಗಣತಿ ಸಮಯದಲ್ಲೂ ರಜೆ ವಿಸ್ತರಣೆ ಮಾಡಲಾಗಿತ್ತು... ಹಾಗೇ ದಸರಾ & ದೀಪಾವಳಿ ಹಬ್ಬಕ್ಕೂ ಭರ್ಜರಿ ರಜೆಗಳನ್ನು ಘೋಷಣೆ ಮಾಡಲಾಗಿತ್ತು. ಹೀಗೆ ಸಾಲು ಸಾಲು ರಜೆಗಳು ಘೋಷಣೆ ಆಗುತ್ತಲೇ ಇರುವಾಗ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ?

ಅಂದಹಾಗೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ಕೋಟಿ, ಕೋಟಿ ಅನುಯಾಯಿಗಳನ್ನು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಹೀಗೆ ಸಾಲು ಮರದ ತಿಮ್ಮಕ್ಕ ಅವರ ಸಾವಿನ ಸುದ್ದಿ, ಎಲ್ಲರಿಗೂ ದೊಡ್ಡ ಆಘಾತ ನೀಡಿದೆ. ಈ ಸಮಯದಲ್ಲೇ ಸಾಲು ಮರದ ತಿಮ್ಮಕ್ಕ ಅವರಿಗೆ ಸಂತಾಪ ಸೂಚಿಸಲು ಸರ್ಕಾರಿ ರಜೆ ಘೋಷಣೆ ಮಾಡಿ ಎಂಬ ಆಗ್ರಹ ಕೇಳಿ ಬಂದಿದೆ. ಅದರಲ್ಲೂ ಯಾರು ಯಾರಿಗೋ ಸಂತಾಪ ಸೂಚಿಸಲು ಸರ್ಕಾರಿ ರಜೆ ಘೋಷಣೆ ಮಾಡುವ ಕಾಲದಲ್ಲಿ, ಇಡೀ ನಮ್ಮ ಸಮಾಜಕ್ಕೆ ದಾರಿ ದೀಪವಾಗಿದ್ದ ಸಾಲು ಮರದ ತಿಮ್ಮಕ್ಕ ಅವರಿಗೆ ಸಂತಾಪ ಸೂಚಿಸಲು ಸರ್ಕಾರಿ ರಜೆ ಘೋಷಣೆ ಆಗಲೇಬೇಕು, ತಿಮ್ಮಕ್ಕ ಅವರ ದೊಡ್ಡ ಕೊಡುಗೆಗೆ ನಾವೆಲ್ಲಾ ಈ ಮೂಲಕವಾಗಿ ನಮಿಸಬೇಕಿದೆ ಅನ್ನೋ ಒತ್ತಾಯ ಕೇಳಿ ಬಂದಿದೆ.

ಸಾಲು ಸಾಲು ರಜೆಗಳು...

ಸೋಷಿಯಲ್ ಮೀಡಿಯಾದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಅನುಯಾಯಿಗಳು ಸೇರಿದಂತೆ & ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅದರಲ್ಲೂ ಸಾಲು ಮರದ ತಿಮ್ಮಕ್ಕ ಅವರು ನಿಧನರಾದ ಮರುದಿನ ಅಂದ್ರೆ ಶನಿವಾರವೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ? ಅನ್ನೋ ರೀತಿ ಸುಳ್ಳು ಸುದ್ದಿಯನ್ನ ಯಾರೋ ಕಿಡಿಗೇಡಿಗಳು ಹಬ್ಬಿಸಿದ್ದರು. ಆದರೆ ಸರ್ಕಾರವೇ ಈ ಬಗ್ಗೆ ಸ್ಪಷ್ಟನೆ ನೀಡಿ ಯಾವುದೇ ರಜೆ ಇಲ್ಲ ಎಂಬುದನ್ನ ತಿಳಿಸಿತ್ತು. ಆದರೆ ಇದೀಗ ದಿಢೀರ್....

ಆದರೆ ಈಗ ಸಾಲು ಮರದ ತಿಮ್ಮಕ್ಕ ಅವರಿಗೆ ಸಂತಾಪ ಸೂಚಿಸಲು ನವೆಂಬರ್ 21 ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಿ ಅಂತಿದ್ದಾರೆ ಕನ್ನಡ ನಾಡಿನ ಪ್ರಜೆಗಳು. ಹೀಗಾಗಿ, ನವೆಂಬರ್ 21 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿದೆ. ಆದರೆ ರಜೆಯ ಘೋಷಣೆ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿಲ್ಲ & ಹೀಗಾಗಿ ಅಧಿಕೃತ ಘೋಷಣೆ ಹೊರಬೀಳುತ್ತಾ? ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

ಸಾವಿರಾರು ಮರಗಳನ್ನು ಪೋಷಿಸಿದ್ದ ಮಹಾತಾಯಿ...

ಸಾಲು ಮರದ ತಿಮ್ಮಕ್ಕ ಇಂದಿಗೆ ಮಾತ್ರವಲ್ಲ, ಮನುಷ್ಯರು ಭೂಮಿಯ ಮೇಲೆ ಬದುಕಿರುವ ಅಷ್ಟೂ ದಿನಗಳ ಕಾಲ ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಹಿರಿಯ ಜೀವವಾಗಿದ್ದರು. ಏಕೆಂದರೆ ಈ ಮಹಾತಾಯಿ ಗಿಡಗಳನ್ನು ನೆಟ್ಟು ಪೋಷಿಸುವ ಜೊತೆಗೆ ಇಡೀ ಸಮಾಜಕ್ಕೆ ಒಂದು ಮಾದರಿಯಾಗಿ ನಿಂತಿದ್ದರು. ಅದರಲ್ಲೂ ಆಧುನಿಕ ಕಾಲಘಟ್ಟದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಈ ಸಾಧನೆಗೆ ಎಲ್ಲರೂ ತಲೆಬಾಗುವಂತೆ ಮಾಡಿತ್ತು. ಹಾಗೇ, ಮುಂದಿನ ಪೀಳಿಗೆಗು ಕೂಡ ಸಾಲು ಮರದ ತಿಮ್ಮಕ್ಕ ಮಾಡಿರುವ ಈ ಸಾಧನೆ ಸ್ಫೂರ್ತಿಯಾಗಬೇಕು, ಹೀಗಾಗಿ ಸರ್ಕಾರಿ ರಜೆ ಘೋಷಿಸಿ ಗೌರವ ನೀಡಿ ಅಂತಿದ್ದಾರೆ ಕನ್ನಡಿಗರು. ಆದರೆ ಸರ್ಕಾರದ ವತಿಯಿಂದ ನವೆಂಬರ್ 21 ಶುಕ್ರವಾರ ರಜೆ ಘೋಷಣೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ...

ತಿಮ್ಮಕ್ಕ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆಗೆ ಆಗ್ರಹ

ಇನ್ನು ಮತ್ತೊಂದು ಕಡೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರು ಪ್ರಕೃತಿ & ಪರಿಸರ ರಕ್ಷಣೆ ಮಾಡಲು ಸಲ್ಲಿಸಿರುವ ಸೇವೆ ಪರಿಗಣಿಸಿ ಅವರ ಹೆಸರಲ್ಲಿ ಪ್ರಶಸ್ತಿ ಕೂಡ ಘೋಷಣೆ ಮಾಡುವಂತೆ, ಆ ಮೂಲಕ ಗೌರವ ಸಲ್ಲಿಸುವಂತೆ ಇದೀಗ ಕನ್ನಡಿಗರು ಆಗ್ರಹ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಸಾಧನೆ ಜಗತ್ತಿನ ಮೂಲೆ ಮೂಲೆಗೂ ವಿಸ್ತರಿಸುತ್ತಲೇ ಇದೆ. ತಮ್ಮ ಹಿರಿಯ ವಯಸ್ಸಿನಲ್ಲಿ ಕೂಡ ಪ್ರಕೃತಿ ರಕ್ಷಣೆ ಬಗ್ಗೆ & ಪರಿಸರದ ಹೊಣೆ ಬಗ್ಗೆ ಅವರು ತೋರಿದ ಪ್ರೀತಿ ಹಾಗೂ ಆದರ್ಶ ಪ್ರತಿಯೊಬ್ಬರಿಗೂ ಸ್ಫೂರ್ತಿ. ಕನ್ನಡ ನಾಡಿನ ಹೆಮ್ಮೆಯ ಪರಿಸರ ಹೋರಾಟಗಾರ್ತಿ ಕೂಡ ಇವರೇ ಅಂತಿದ್ದಾರೆ ಕನ್ನಡಿಗರು. ಆಧುನಿಕ ಕಾಲದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡಿದರೆ ಅದು ಭವಿಷ್ಯದ ಪ್ರಜೆಗಳಿಗೂ ಉತ್ತಮ ಸಂದೇಶ ನೀಡುತ್ತದೆ ಎಂಬುದು ಕನ್ನಡಿಗರ ಆಗ್ರಹ...

ಶಾಲಾ & ಕಾಲೇಜುಗಳಿಗೆ ರಜೆ ಸಿಗುತ್ತಾ?

ರಜೆ.. ರಜೆ.. ರಜೆ... ಹೀಗೆ ಬರೀ ರಜೆ ಬಗ್ಗೆ ಸುದ್ದಿ ಕೇಳಿ ಕೇಳಿ ವಿದ್ಯಾರ್ಥಿಗಳಿಗೆ ಖುಷಿ ಖುಷಿ. 2020 ಕೊರೊನಾ ಬಳಿಕ 2025ನೇ ವರ್ಷದಲ್ಲೇ ಶಾಲಾ & ಕಾಲೇಜುಗಳಿಗೆ ಅತಿಹೆಚ್ಚು ರಜೆ ಸಿಕ್ಕಂತೆ ಕಾಣುತ್ತಾ ಇದೆ. ಅಂದಹಾಗೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಸಾಲು, ಸಾಲು ರಜೆಗಳನ್ನು ನೀಡಿದ್ದ ಕಾರಣಕ್ಕೇ ಪಾಠ ಇನ್ನೂ ಮುಗಿದಿಲ್ಲ. ಹೀಗಾಗಿ, ರಿವಿಷನ್ ಮಾಡಲು ಹಾಗೂ ಮಕ್ಕಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಇದರಿಂದ ಸಮಸ್ಯೆ ಆಗುತ್ತಾ? ಎಂಬ ಚರ್ಚೆ ಕೂಡ ನಡೆಯುತ್ತಲೇ ಇದೆ. ಅದ್ರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಪರೀಕ್ಷೆ ಬರಲಿದ್ದು, ಇದಕ್ಕಾಗಿ ವಿದ್ಯಾರ್ಥಿಗಳು ಎಲ್ಲಾ ಪಠ್ಯಗಳ ಓದಿಕೊಂಡು ರಿವಿಷನ್ ಅಂದ್ರೆ ಪುನರ್ಮನನ ಮಾಡಿಕೊಂಡು ಪರೀಕ್ಷೆ ಬರೆಯಲು ಸಜ್ಜಾಗಬೇಕಿದೆ. ಪರಿಸ್ಥಿತಿ ಹೀಗೆ ಇರುವಾಗ ಮತ್ತೊಂದು ರಜೆ ಸಿಗುವ ಬಗ್ಗೆ ಈಗ ಭಾರಿ ಅನುಮಾನವೇ ಇದ್ದು, ಆದಷ್ಟು ಬೇಗನೇ ಪಠ್ಯಗಳನ್ನು ಮುಗಿಸಲು ಹಲವು ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಕೂಡ ಆರಂಭ ಮಾಡಲಾಗಿದೆ....

ಮಳೆರಾಯನ ಅಬ್ಬರ ನಿಲ್ಲುವುದೇ ಇಲ್ವಾ?

ಮತ್ತೊಂದು ಕಡೆ ಪ್ರಕೃತಿ ವಿಕೋಪ ಈ ವರ್ಷ ಕರ್ನಾಟಕ ರಾಜ್ಯವನ್ನು ತೀವ್ರವಾಗಿ ಕಾಡುತ್ತಿದೆ. ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಲ ಮುಗಿದು, ಚಳಿಗಾಲ ಎಂಟ್ರಿ ಕೊಟ್ಟಿದ್ದರೂ ಮಳೆಯ ಆರ್ಭಟ ಮಾತ್ರ ಕಡಿಮೆ ಆಗುತ್ತಿಲ್ಲ. ಮಳೆ ನೋಡ ನೋಡುತ್ತಲೇ ತನ್ನ ಅರ್ಭಟವನ್ನ ಮತ್ತೆ ಹೆಚ್ಚು ಮಾಡುತ್ತಿದ್ದು, ಮಳೆ ಅಬ್ಬರಕ್ಕೆ ಈಗ ದಿಕ್ಕೇ ತೋಚದಂತೆ ರೈತರು ಕೂರುವ ಪರಿಸ್ಥಿತಿ ಎದುರಾಗಿದೆ. ರೈತರ ಜೊತೆ ಸಾಮಾನ್ಯ ಜನ ಕೂಡ ದಿಕ್ಕೇ ತೋಚದಂತೆ ಕೂತಿದ್ದಾರೆ. ಅಕಾಲಿಕ ಮಳೆ ಪರಿಣಾಮ ಈಗಾಗಲೇ ಕೃಷಿಕರಿಗೆ ಬೆಳೆ ನಷ್ಟವಾಗಿ ಹೋಗಿದ್ದರೆ, ಇನ್ನೊಂದು ಕಡೆ ಹಲವು ರೀತಿಯ ಸಮಸ್ಯೆಯ ಸುಳಿಗೆ ಸಾಮಾನ್ಯ ಜನರು ಸಿಲುಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ, ಮುಂದಿನ ಕೆಲ ದಿನಗಳ ಕಾಲ ಮತ್ತೆ ಮಳೆ ಇದೇ ರೀತಿ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಲಾಗಿದ್ದು, ಒಂದಷ್ಟು ಆತಂಕ ಹೆಚ್ಚು ಮಾಡಿದೆ...

ತುಂಬಿ ತುಳುಕುತ್ತಿರುವ ಕರ್ನಾಟಕದ ಡ್ಯಾಂಗಳು...

ಪ್ರಕೃತಿ ಮಾತೆಯನ್ನು ನಾವು ಪೂಜಿಸಬೇಕು & ಪ್ರಕೃತಿಯನ್ನು ಕಾಪಾಡಬೇಕು ಅನ್ನೋದು ಎಷ್ಟೇ ಹೇಳಿದರೂ ಮನುಷ್ಯರಿಗೆ ಅರ್ಥವೇ ಆಗುತ್ತಿಲ್ಲ. ಏಕೆಂದರೆ ಈ ಹಿಂದೆ 2023 ವರ್ಷ ಪೂರ್ತಿ ಹನಿ ಹನಿ ಮಳೆಗೂ ಕನ್ನಡಿಗರು ಕಷ್ಟಪಟ್ಟು ಒದ್ದಾಡಿ ಹೋಗಿದ್ದರು. ಆದರೆ 2024 ಮತ್ತು 2025 ಪೂರ್ತಿ ಅತಿಯಾದ ಮಳೆ ಸುರಿದು ಹಲವು ಸಮಸ್ಯೆ ಎದುರಾಗಿದೆ. ರೈತರು ಬೆಳೆ ಕಳೆದುಕೊಳ್ಳುವ ಜೊತೆಗೆ ಅಕಾಲಿಕ ಮಳೆ ಹಲವು ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತಿದೆ. ಇಂತಹ ಸಮಯದಲ್ಲೇ ನಮಗೆ ಪ್ರಕೃತಿ ಮಾತೆಗೆ ಸಮಸ್ಯೆ ಮಾಡದಂತೆ ಹೇಗೆ ಜೀವನ ಮಾಡಬೇಕು? ಎಂಬುದು ಸ್ಪಷ್ಟವಾಗಿ ತಿಳಿಯಬೇಕಿದೆ. ಮನುಷ್ಯರು ಇದೇ ರೀತಿಯಾಗಿ ಪ್ರಕೃತಿ ಮೇಲೆ ದೌರ್ಜನ್ಯ ಮಾಡುತ್ತಾ ಹೋದರೆ, ಭವಿಷ್ಯದಲ್ಲಿ ಭಾರಿ ದೊಡ್ಡ ಸಮಸ್ಯೆ ಎದುರಾಗುವ ಅಪಾಯವು ಕೂಡ ಇದ್ದೇ ಇದೆ...

ಡಿಸೆಂಬರ್ ತಿಂಗಳಲ್ಲೂ ಮಳೆ ಆರ್ಭಟ?

ಮಳೆ.. ಮಳೆ.. ಮಳೆ.. ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಮಳೆ ಆರ್ಭಟ ಮತ್ತೆ 2026 ಡಿಸೆಂಬರ್ ತಿಂಗಳಲ್ಲೂ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಮಳೆರಾಯ ತನ್ನ ಅಬ್ಬರ ಚಳಿಗಾಲ ಬಂದರೂ ಕಡಿಮೆ ಮಾಡುತ್ತಿಲ್ಲ, ಹೀಗಾಗಿ ಜನರು ಕೂಡ ಚಿಂತೆ ಮಾಡುವಂತೆ ಆಗಿದೆ. ಮತ್ತೊಂದು ಕಡೆ ಸುಗ್ಗಿ ಕಾಲ ಕೂಡ ಹತ್ತಿರ ಬಂದಿದ್ದು, ಅಕಾಲಿಕ ಮಳೆ ಕಾರಣಕ್ಕೆ ರೈತರು ಕೂಡ ತಲೆ ಮೇಲೆ ಕೈಹೊತ್ತು ಕೂರುವಂತೆ ಆಗಿದೆ. ಕೈಗೆ ಬಂದ ಬೆಳೆ ಉಳಿಸಿಕೊಳ್ಳಲು ಇದೀಗ ರೈತರು ಪರದಾಡುತ್ತಾ ಇದ್ದಾರೆ. ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ರೈತರು ಕೂಡ ಒದ್ದಾಡುವ ಸ್ಥಿತಿ ನಿರ್ಮಾಣ ಆಗಿದ್ದು, ಅಕಾಲಿಕ ಮಳೆಯ ಪರಿಣಾಮ ಎಲ್ಲವೂ ಹಾಳಾಗಿ ಹೋಗುತ್ತಿದೆ. ಅಲ್ಲದೇ, ಪರಿಸ್ಥಿತಿ ಇದೇ ರೀತಿಯಾಗಿ ಮುಂದುವರಿದು ಡಿಸೆಂಬರ್ ತಿಂಗಳಲ್ಲಿ ಮಳೆ ಹೆಚ್ಚಾಗಿ ಬಿದ್ದರೆ, ಆ ನಂತರ ಚಳಿ ಕೂಡ ಹೆಚ್ಚಾಗುವ ಆತಂಕ ಕಾಡುತ್ತಿದೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+